ಎಲ್ಪಿಜಿ ಇಂಧನ ಬಳಕೆಗೆ ಪ್ರೋತ್ಸಾಹ: ಆಚಾರ್ಯ
ಬ್ರಹ್ಮಾವರ (ಉಡುಪಿ ಜಿಲ್ಲೆ), ಜ.17: ವಾಹನಗಳಿಗೆ ಎಲ್ಪಿಜಿ ಇಂಧನ ಬಳಸುತ್ತಿರುವ ಮಾಲೀಕರಿಗೊಂದು ಸಿಹಿ ಸುದ್ದಿ. ಎಲ್ಪಿಜಿ ಬಳಸುವ ವಾಹನಗಳನ್ನು ಪ್ರೋತ್ಸಾಹಿಸಲು ರಾಜ್ಯ ಸರ್ಕಾರ ಚಿಂತನೆ ನಡೆಸಿದೆ .
ಈ ಕುರಿತು ಗೃಹ ಸಚಿವ ವಿ.ಎಸ್.ಆಚಾರ್ಯ ಮಾತನಾಡುತ್ತಾ, ಎಲ್ಪಿಜಿ ಕಿಟ್ ಗಳನ್ನು ಅಳವಡಿಸಿಕೊಳ್ಳುವ ಟ್ಯಾಕ್ಸಿಗಳಿಗೆ ಸಬ್ಸಿಡಿ ನೀಡಲಾಗುತ್ತದೆ. ಪ್ರಸ್ತುತ ಆಟೋಗಳಿಗೆ ಮಾತ್ರ ಸಬ್ಸಿಡಿ ನೀಡಲಾಗುತ್ತಿದೆ ಎಂದು ತಿಳಿಸಿದರು. ಉಡುಪಿ ಜಿಲ್ಲೆಯಲ್ಲಿ ಸಚಿವರು ಇಂಡಿಯನ್ ಆಯಿಲ್ ಕಾರ್ಪೊರೇಷನ್ ನ ಎಲ್ಪಿಜಿ ವಿತರಣೆ ಘಟಕವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು. ಎಲ್ಪಿಜಿ ಇಂಧನವು ಕಡಿಮೆ ವೆಚ್ಚದಿಂದ ಕೂಡಿದ್ದ್ದು, ಸ್ವಚ್ಛ, ಮತ್ತು ಸಂಪೂರ್ಣ ಸುರಕ್ಷತೆಯಿಂದ ಕೂಡಿದೆ ಎಂದರು.
ಎಲ್ಲ ಪೆಟ್ರೋಲ್ ಬಂಕ್ ಗಳಲ್ಲಿ ಎಲ್ಪಿಜಿ ಇಂಧನ ದೊರೆಯುವಂತೆ ಮಾಡಲಾಗುತ್ತದೆ. ಜಾಗತಿಕ ಆರ್ಥಿಕ ಬಿಕ್ಕಟ್ಟು ರಾಜ್ಯದ ವರಮಾನದ ಮೇಲೂ ಪರಿಣಾಮ ಬೀರಿದೆ ಎಂದು ವಿ.ಎಸ್.ಆಚಾರ್ಯ ಹೇಳಿದರು.ಈ ಸಂದರ್ಭದಲ್ಲಿ ಶಾಸಕ ರಘುಪತಿ ಭಟ್ ಸಹ ಉಪಸ್ಥಿತರಿದ್ದರು.
(ದಟ್ಸ್ ಕನ್ನಡ ವಾರ್ತೆ)











Click it and Unblock the Notifications