ಜ. 15 ರಂದು ಕೊಡಗು ಬಂದ್

ಮಡಿಕೇರಿ, ಜ. 13 : ಜಿಲ್ಲಾ ಪ೦ಚಾಯತಿ ಸದಸ್ಯ ವಿಪಿ ಶಶಿಧರ್ ಬಂಧನ ಖಂಡಿಸಿ ಬಿಜೆಪಿಯೇತರ ಪಕ್ಷಗಳು ಮತ್ತು ವಿವಿಧ ಸಂಘಟನೆಗಳು ಜನವರಿ 15 ರಂದು ಕೊಡಗು ಬಂದ್ ಗೆ ಕರೆ ನೀಡಿವೆ.

ವಿಧಾನಪರಿಷತ್ ಮಾಜಿ ಸದಸ್ಯ ಎಕೆ ಸುಬ್ಬಯ್ಯ ನೇತೃತ್ವದಲ್ಲಿ ಇಲ್ಲಿನ ಮಹಾತ್ಮಾ ಗಾಂಧಿ ಪ್ರತಿಮೆಯ ಮುಂದೆ ಧರಣಿ ನಡೆಸಿದ ಪ್ರತಿಭಟನಾಕಾರರು ಜಿಪಂ ಸದಸ್ಯ ಶಶಿಧರ್ ಮೇಲೆ ಇರುವ ಎಲ್ಲಾ ಕೇಸ್ ಗಳನ್ನು ಈ ಕೂಡಲೇ ಹಿಂದಕ್ಕೆ ಪಡೆದುಕೊಳ್ಳಬೇಕು ಎಂದು ಆಗ್ರಹಿಸಿದರು. ಶಶಿಧರ್ ಅವರು ಹರಿಜನ ಮತ್ತು ಗಿರಿಜನರ ಮೇಲೆ ದೌರ್ಜನ್ಯ ನಡೆಸುತ್ತಿದ್ದಾರೆ ಎಂದು ಮತ್ತೊಬ್ಬ ಜಿಲ್ಲಾ ಪ೦ಚಾಯತಿ ಸದಸ್ಯ ರಾಜಾರಾವ್ ಅನ್ನುವವರು ಇವರ ಮೇಲೆ ದೂರು ದಾಖಲಿಸಿದ್ದರು.

ಶಶಿಧರ್ ಮೇಲೆ ಬಿಜೆಪಿ ವಿನಾಕಾರಣ ಗೂಬೆ ಕೂರಿಸುತ್ತಿದೆ. ಈ ಬಂಧನದ ಹಿಂದಿನ ಪಿತೂರಿ ಕುರಿತು ಸಾರ್ವಜನಿಕರಿಗೆ ಮನವರಿಕೆ ಮಾಡಲು ಬಂದ್ ಕರೆ ನೀಡಲಾಗಿದೆ ಎಂದು ಸುಬ್ಬಯ್ಯ ಸುದ್ದಿಗಾರರಿಗೆ ತಿಳಿಸಿದ್ದಾರೆ.

(ದಟ್ಸ್ ಕನ್ನಡ ವಾರ್ತೆ)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+