ವಿಪ್ರೋ ಮತ್ತು ಮೆಗಾಸಾಫ್ಟ್ಗೆ ವಿಶ್ವಬ್ಯಾಂಕ್ ದಿಗ್ಬಂಧನ
ಮುಂಬೈ, ಜ. 12 : ಭಾರತೀಯ ಸಾಫ್ಟ್ ವೇರ್ ಕಂಪನಿಗಳ ಗ್ರಹಚಾರ ಯಾಕೋ ನೆಟ್ಟಗಿದ್ದ ಹಾಗೆ ಕಾಣುತ್ತಿಲ್ಲ. ಸತ್ಯಂ ಕಂಪ್ಯೂಟರ್ಸ್ ಹೂಡಿಕೆದಾರರಿಗೆ ನಾಮವಿಕ್ಕಿ ವಿಶ್ವ ಬ್ಯಾಂಕ್ನಿಂದ ನಿಷೇಧಕ್ಕೊಳಗಾಗಿರುವ ಬೆನ್ನಹಿಂದೆಯೇ ಬೆಂಗಳೂರು ಮೂಲದ ಸಾಫ್ಟ್ವೇರ್ ದಿಗ್ಗಜ ವಿಪ್ರೋ ಕಂಪನಿಯನ್ನು ಕೂಡ ವಿಶ್ವ ಬ್ಯಾಂಕ್ನಿಂದ ಯಾವುದೇ ಒಡಂಬಡಿಕೆ ಮಾಡಿಕೊಳ್ಳಲು ಅನರ್ಹವಾಗಿರುವ ಸುದ್ದಿ ಹೊರಬಿದ್ದಿದೆ.
ಸತ್ಯಂ ಮತ್ತು ವಿಪ್ರೋ ಮಾತ್ರವಲ್ಲ ಅಮೆರಿಕ ಮೂಲದ ಮುಂಬೈ ಸ್ಟಾಕ್ ಎಕ್ಸ್ಚೇಂಜ್ನಲ್ಲಿ ಸ್ಥಾನ ಪಡೆದಿರುವ ಮೆಗಾಸಾಫ್ಟ್ ಲಿಮಿಟೆಡ್ ಕಂಪನಿ ಕೂಡ ವಿಶ್ವ ಬ್ಯಾಂಕ್ನಿಂದ ನಿಷೇಧಕ್ಕೊಳಗಾಗಿದೆ. ವಿಪ್ರೋ ಮತ್ತು ಮೆಗಾಸಾಫ್ಟ್ಗಳೆರಡೂ 2007ರಿಂದ 2011ರವರೆಗೆ ನಾಲ್ಕು ವರ್ಷಗಳ ಕಾಲ ನಿಷೇಧಕ್ಕೊಳಗಾಗಿವೆ. ದಿಗ್ಬಂಧನಕ್ಕೊಳಗಾಗಿರುವ ಭಾರತದ ಎಲ್ಲ ಕಂಪನಿಗಳ ಪಟ್ಟಿಯನ್ನು ಬಿಡುಗಡೆ ಮಾಡುವುದಾಗಿ ವಿಶ್ವ ಬ್ಯಾಂಕ್ ಭಾನುವಾರ ಹೇಳಿತ್ತು.
ಮುಂಬೈ ಷೇರುಪೇಟೆಗೆ ನಿಷೇಧಕ್ಕೊಳಗಾಗಿರುವ ಸಂಗತಿಯನ್ನು ಭಾರತದ ಮೂರನೇ ಅತಿ ದೊಡ್ಡ ರಫ್ತು ಕಂಪನಿ ವಿಪ್ರೋ ತಾನೇ ಬಹಿರಂಗ ಪಡಿಸಿದೆ. ಅಂದರೆ ಇನ್ನು ಎರಡು ವರ್ಷಗಳ ಕಾಲ ವಿಶ್ವ ಬ್ಯಾಂಕ್ನಿಂದ ವಿಪ್ರೋ ಯಾವುದೇ ಸಾಲವನ್ನು ಪಡೆಯುವಂತಿಲ್ಲ. ವಿಶ್ವ ಬ್ಯಾಂಕ್ನ ಸಿಬ್ಬಂದಿಗೆ ಅನುಚಿತ ಲಾಭಾಂಶ ದೊರಕಿಸಿಕೊಡಲು ಹವಣಿಸಿದ್ದಕ್ಕಾಗಿ ವಿಪ್ರೋ ಬೆಲೆ ತೆತ್ತಿದೆ. ವಿಶ್ವ ಬ್ಯಾಂಕ್ನ ಮುಖ್ಯ ಮಾಹಿತಿ ಅಧಿಕಾರಿಗೆ 72 ಸಾವಿರ ಡಾಲರ್ ಮೊತ್ತದ 1750 ಅಮೆರಿಕನ್ ಡೆಪಾಸಿಟರಿ ಷೇರುಗಳನ್ನು ನೀಡಿದೆ. ಮೆಗಾಸಾಫ್ಟ್ ಕೂಡ ವಿಶ್ವ ಬ್ಯಾಂಕ್ ನ ಸಿಬ್ಬಂದಿಗಳೊಂದಿಗೆ ವ್ಯಾಪಾರ ನಡೆಸಲು ಯತ್ನಿಸಿದ್ದಕ್ಕಾಗಿ ನಿಷೇಧಕ್ಕೊಳಗಾಗಿದೆ.
ಸುಮಾರು ಎರಡು ವರ್ಷಗಳ ಕಾಲ ಈ ಸಂಗತಿಯನ್ನು ವಿಪ್ರೋ ಮುಚ್ಚಿಟ್ಟಿತ್ತು. ಎರಡು ವರ್ಷಗಳ ಕಾಲ ಈ ವಿಷಯವನ್ನು ವಿಪ್ರೋ ಮುಚ್ಚಿಟ್ಟಿದ್ದೇಕೆನ್ನುವುದು ಸದ್ಯಕ್ಕೆ ಚಿದಂಬರ ರಹಸ್ಯವಾಗಿದೆ. ಈ ವಿಷಯ ಬಹಿರಂಗವಾಗುತ್ತಿದ್ದಂತೆ ವಿಪ್ರೋದ ಷೇರು ಬೆಲೆ ಪಾತಾಳಮುಖಿಯಾಗಿದೆ. ದಿನದಾರಂಭದಲ್ಲೇ ಷೇರುಗಳ ಮುಖಬೆಲೆ ಶೇ.8.4ರಷ್ಟು ಕಡಿಮೆಯಾಗಿದೆ.
(ಏಜೆನ್ಸೀಸ್)
-
ನಮ್ಮದು ಲವ್ ಜಿಹಾದ್ ಅಲ್ಲ, ಮತಾಂತರವೂ ಇಲ್ಲ, ಹಿಂದೂ ಸಂಪ್ರದಾಯದಂತೆ ವಿವಾಹ: ಮೊನಾಲಿಸಾ-ಫರ್ಹಾನ್ ಖಾನ್ ಸ್ಪಷ್ಟನೆ -
Horoscope March 12: ಗುರುವಾರ ದ್ವಾದಶ ರಾಶಿಗಳ ಫಲಾಫಲ ಹೇಗಿದೆ, ಇಲ್ಲಿದೆ ದಿನ ಭವಿಷ್ಯ -
Bengaluru Property Sale: ಬೆಂಗಳೂರಲ್ಲಿ 50 ಆಸ್ತಿದಾರರಿಗೆ ತಮ್ಮ ಆಸ್ತಿಯನ್ನೇ ಕಳೆದುಕೊಳ್ಳುವ ಆತಂಕ: ಜಿಬಿಎ ಹೇಳಿದ್ದೇನು -
ಪಿಎಂ ಇ-ಬಸ್ ಯೋಜನೆ: ಕರ್ನಾಟಕದಲ್ಲಿ ರಸ್ತೆಗಿಳಿಯಲಿವೆ 750 ಇ-ಬಸ್ಗಳು; ಮಹಾರಾಷ್ಟ್ರಕ್ಕೆ ಸಿಂಹಪಾಲು -
Bengaluru Drone Survey: ಬೆಂಗಳೂರಿನಲ್ಲಿ ಆಸ್ತಿಗಳ ಡ್ರೋನ್ ಸರ್ವೇ: ಇದರ ಉದ್ದೇಶವೇನು, ವಿರೋಧವೇಕೆ ಇಲ್ಲಿದೆ ಮಾಹಿತಿ -
ಇರಾನ್ ಸಂಘರ್ಷ: ಭಾರತದ ಪ್ರಯತ್ನಕ್ಕೆ ಫಲ, ಕೊಲ್ಲಿ ಮಾರ್ಗವಾಗಿ ಭಾರತಕ್ಕೆ ಬಂದ ಮೊದಲ ತೈಲ ಟ್ಯಾಂಕರ್ -
ಒಣ ಮೆಣಸಿನಕಾಯಿ ಬಳಸುವ ಮುನ್ನ ಈ ಕೆಲಸ ಮಾಡಿದ್ದೀರಾ? ಆರೋಗ್ಯ ಕಾಪಾಡಲು ಇಲ್ಲಿದೆ ಸೂಪರ್ ಐಡಿಯಾ -
ಭಾರತದ ಹಡಗುಗಳಿಗೆ ಭರ್ಜರಿ ಸುದ್ದಿ ನೀಡಿದ ಇರಾನ್, ಗ್ಯಾಸ್ ಸಮಸ್ಯೆ ಇತ್ಯರ್ಥ ಸಾಧ್ಯತೆ | Operation Roaring Lion -
Swamijis: ಬಹುತೇಕ ಕಾವಿಧಾರಿ ಸ್ವಾಮೀಜಿಗಳು ಅವಿವಾಹಿತರು, ಆದರೆ ಅವರೆಲ್ಲರೂ ಬ್ರಹ್ಮಚಾರಿಗಳಲ್ಲ: ರವಿಕೃಷ್ಣ ರೆಡ್ಡಿ -
ಬೆಂಗಳೂರಿನ ಪ್ರಮುಖ ವಿದ್ಯುತ್ ಸ್ಥಾವರ ಬಂದ್; ರಾಜ್ಯದಲ್ಲಿ ವಿದ್ಯುತ್ ಕಡಿತದ ಭೀತಿ! -
ಅರಬ್ ದೇಶಗಳ ಬ್ಯಾಕಿಂಗ್ ಸೇವೆ ಮೇಲೆ ಇರಾನ್ ಸೇನೆ ದಾಳಿ ಸಾಧ್ಯತೆ ಹಿನ್ನೆಲೆ ಕಟ್ಟೆಚ್ಚರ | Operation Roaring Lion -
LPG Gas: ಗೃಹ-ವಾಣಿಜ್ಯ ಸಿಲಿಂಡರ್ ಬುಕಿಂಗ್ ಮಿತಿ, ದಾಸ್ತಾನು ನಿಯಮಗಳೇನು? ಗ್ಯಾಸ್ ದರಪಟ್ಟಿ












Click it and Unblock the Notifications