ವಿಪ್ರೋ ಮತ್ತು ಮೆಗಾಸಾಫ್ಟ್ಗೆ ವಿಶ್ವಬ್ಯಾಂಕ್ ದಿಗ್ಬಂಧನ
ಮುಂಬೈ, ಜ. 12 : ಭಾರತೀಯ ಸಾಫ್ಟ್ ವೇರ್ ಕಂಪನಿಗಳ ಗ್ರಹಚಾರ ಯಾಕೋ ನೆಟ್ಟಗಿದ್ದ ಹಾಗೆ ಕಾಣುತ್ತಿಲ್ಲ. ಸತ್ಯಂ ಕಂಪ್ಯೂಟರ್ಸ್ ಹೂಡಿಕೆದಾರರಿಗೆ ನಾಮವಿಕ್ಕಿ ವಿಶ್ವ ಬ್ಯಾಂಕ್ನಿಂದ ನಿಷೇಧಕ್ಕೊಳಗಾಗಿರುವ ಬೆನ್ನಹಿಂದೆಯೇ ಬೆಂಗಳೂರು ಮೂಲದ ಸಾಫ್ಟ್ವೇರ್ ದಿಗ್ಗಜ ವಿಪ್ರೋ ಕಂಪನಿಯನ್ನು ಕೂಡ ವಿಶ್ವ ಬ್ಯಾಂಕ್ನಿಂದ ಯಾವುದೇ ಒಡಂಬಡಿಕೆ ಮಾಡಿಕೊಳ್ಳಲು ಅನರ್ಹವಾಗಿರುವ ಸುದ್ದಿ ಹೊರಬಿದ್ದಿದೆ.
ಸತ್ಯಂ ಮತ್ತು ವಿಪ್ರೋ ಮಾತ್ರವಲ್ಲ ಅಮೆರಿಕ ಮೂಲದ ಮುಂಬೈ ಸ್ಟಾಕ್ ಎಕ್ಸ್ಚೇಂಜ್ನಲ್ಲಿ ಸ್ಥಾನ ಪಡೆದಿರುವ ಮೆಗಾಸಾಫ್ಟ್ ಲಿಮಿಟೆಡ್ ಕಂಪನಿ ಕೂಡ ವಿಶ್ವ ಬ್ಯಾಂಕ್ನಿಂದ ನಿಷೇಧಕ್ಕೊಳಗಾಗಿದೆ. ವಿಪ್ರೋ ಮತ್ತು ಮೆಗಾಸಾಫ್ಟ್ಗಳೆರಡೂ 2007ರಿಂದ 2011ರವರೆಗೆ ನಾಲ್ಕು ವರ್ಷಗಳ ಕಾಲ ನಿಷೇಧಕ್ಕೊಳಗಾಗಿವೆ. ದಿಗ್ಬಂಧನಕ್ಕೊಳಗಾಗಿರುವ ಭಾರತದ ಎಲ್ಲ ಕಂಪನಿಗಳ ಪಟ್ಟಿಯನ್ನು ಬಿಡುಗಡೆ ಮಾಡುವುದಾಗಿ ವಿಶ್ವ ಬ್ಯಾಂಕ್ ಭಾನುವಾರ ಹೇಳಿತ್ತು.
ಮುಂಬೈ ಷೇರುಪೇಟೆಗೆ ನಿಷೇಧಕ್ಕೊಳಗಾಗಿರುವ ಸಂಗತಿಯನ್ನು ಭಾರತದ ಮೂರನೇ ಅತಿ ದೊಡ್ಡ ರಫ್ತು ಕಂಪನಿ ವಿಪ್ರೋ ತಾನೇ ಬಹಿರಂಗ ಪಡಿಸಿದೆ. ಅಂದರೆ ಇನ್ನು ಎರಡು ವರ್ಷಗಳ ಕಾಲ ವಿಶ್ವ ಬ್ಯಾಂಕ್ನಿಂದ ವಿಪ್ರೋ ಯಾವುದೇ ಸಾಲವನ್ನು ಪಡೆಯುವಂತಿಲ್ಲ. ವಿಶ್ವ ಬ್ಯಾಂಕ್ನ ಸಿಬ್ಬಂದಿಗೆ ಅನುಚಿತ ಲಾಭಾಂಶ ದೊರಕಿಸಿಕೊಡಲು ಹವಣಿಸಿದ್ದಕ್ಕಾಗಿ ವಿಪ್ರೋ ಬೆಲೆ ತೆತ್ತಿದೆ. ವಿಶ್ವ ಬ್ಯಾಂಕ್ನ ಮುಖ್ಯ ಮಾಹಿತಿ ಅಧಿಕಾರಿಗೆ 72 ಸಾವಿರ ಡಾಲರ್ ಮೊತ್ತದ 1750 ಅಮೆರಿಕನ್ ಡೆಪಾಸಿಟರಿ ಷೇರುಗಳನ್ನು ನೀಡಿದೆ. ಮೆಗಾಸಾಫ್ಟ್ ಕೂಡ ವಿಶ್ವ ಬ್ಯಾಂಕ್ ನ ಸಿಬ್ಬಂದಿಗಳೊಂದಿಗೆ ವ್ಯಾಪಾರ ನಡೆಸಲು ಯತ್ನಿಸಿದ್ದಕ್ಕಾಗಿ ನಿಷೇಧಕ್ಕೊಳಗಾಗಿದೆ.
ಸುಮಾರು ಎರಡು ವರ್ಷಗಳ ಕಾಲ ಈ ಸಂಗತಿಯನ್ನು ವಿಪ್ರೋ ಮುಚ್ಚಿಟ್ಟಿತ್ತು. ಎರಡು ವರ್ಷಗಳ ಕಾಲ ಈ ವಿಷಯವನ್ನು ವಿಪ್ರೋ ಮುಚ್ಚಿಟ್ಟಿದ್ದೇಕೆನ್ನುವುದು ಸದ್ಯಕ್ಕೆ ಚಿದಂಬರ ರಹಸ್ಯವಾಗಿದೆ. ಈ ವಿಷಯ ಬಹಿರಂಗವಾಗುತ್ತಿದ್ದಂತೆ ವಿಪ್ರೋದ ಷೇರು ಬೆಲೆ ಪಾತಾಳಮುಖಿಯಾಗಿದೆ. ದಿನದಾರಂಭದಲ್ಲೇ ಷೇರುಗಳ ಮುಖಬೆಲೆ ಶೇ.8.4ರಷ್ಟು ಕಡಿಮೆಯಾಗಿದೆ.
(ಏಜೆನ್ಸೀಸ್)
-
SSLC ಸಮಾಜ ವಿಜ್ಞಾನ ಪರೀಕ್ಷೆ ವಿಶ್ಲೇಷಣೆ: ಪ್ರಶ್ನೆಪತ್ರಿಕೆ ಹೇಗಿತ್ತು? ವಿದ್ಯಾರ್ಥಿಗಳ ಪ್ರತಿಕ್ರಿಯೆ ಏನು? -
ಉಬರ್ ಕ್ಯಾಬ್ ಬುಕ್ ಮಾಡಿದಷ್ಟೇ ಸುಲಭವಾಗಿ ತೆಂಗಿನಕಾಯಿ ಕೀಳುವವರನ್ನು ಕರೆಯಿರಿ: ಆನಂದ್ ಮಹೀಂದ್ರಾ ಹಂಚಿಕೊಂಡ Video Viral -
SSLC ಪರೀಕ್ಷೆ-1ರಲ್ಲಿ ಅಂಕ ಕಡಿಮೆಯಾಗಿದೆಯೇ? ಚಿಂತೆ ಬಿಡಿ, ಮೇ 18ರಿಂದ ನಡೆಯುವ ಪರೀಕ್ಷೆ-2ಕ್ಕೆ ಸಜ್ಜಾಗಿ -
Bengaluru: ಪಬ್ನಲ್ಲಿ 150 ರೂ. ಕೊಟ್ಟು ಆರ್ಡರ್ ಮಾಡಿದ್ರೆ ಬಂದಿದ್ದು ಬರೀ ಹಪ್ಪಳ-ಸಂಡಿಗೆ: ದಂಗಾದ ಗ್ರಾಹಕ -
ಇಂಡೋನೇಷ್ಯಾದಲ್ಲಿ 7.4 ತೀವ್ರತೆಯ ಪ್ರಬಲ ಭೂಕಂಪ: ಏಷ್ಯಾ ರಾಷ್ಟ್ರಗಳಲ್ಲಿ ಸುನಾಮಿ ಆತಂಕ, ಭಾರತದ ಮೇಲಾಗುವ ಪರಿಣಾಮವೇನು? -
Bengaluru House Rent: ಬೆಂಗಳೂರಿನ ಪ್ರೈಮ್ ಏರಿಯಾದಲ್ಲೂ ನಾನ್ವೆಜ್ ಪ್ರಿಯರಿಗೆ ಮನೆ ಸಿಗ್ತಿಲ್ಲ, ಸೋಷಿಯಲ್ ಮೀಡಿಯಾ ಚರ್ಚೆ -
Prakash Raj: ನಾಸ್ತಿಕನಾದರೂ ತಾಯಿಯ ನಂಬಿಕೆಗೆ ಗೌರವ ಕೊಟ್ಟು; ಕ್ರೈಸ್ತ ಧರ್ಮದ ಸಂಪ್ರದಾಯ ಪಾಲನೆ: ನಟ ಪ್ರಕಾಶ್ ರಾಜ್ -
Education: CBSE 9 ಮತ್ತು 10ನೇ ತರಗತಿಯ ಹೊಸ ಪಠ್ಯಕ್ರಮ ಇಂದು ಬಿಡುಗಡೆ -
ಮುಂದಿನ 2 ರಿಂದ 3 ವಾರಗಳಲ್ಲಿ ಇರಾನ್ ಮೇಲೆ ಅತ್ಯಂತ ಭೀಕರ ದಾಳಿ: ಟ್ರಂಪ್ ಎಚ್ಚರಿಕೆ -
ವಿದ್ಯಾರ್ಥಿಗಳ ಮೊಬೈಲ್ ಗೀಳಿಗೆ ಬ್ರೇಕ್: ಹೊಸ 'ಡಿಜಿಟಲ್ ನೀತಿ' ಪ್ರಕಟಿಸಿದ ಆರೋಗ್ಯ ಇಲಾಖೆ -
Raghav Chadha: ಸಂಸದ ರಾಘವ್ ಚಡ್ಡಾಗೆ ಶಾಕ್ ಕೊಟ್ಟ ಎಎಪಿ, ಬಿಜೆಪಿ ಸೇರಲಿದ್ದಾರೆಯೇ ಸ್ಟಾರ್ ರಾಜಕಾರಣಿ -
Nuwan Thushara: ಆರ್ಸಿಬಿಗಾಗಿ ಶ್ರೀಲಂಕಾ ಕ್ರಿಕೆಟ್ ಮಂಡಳಿಯ ವಿರುದ್ಧವೇ ತಿರುಗಿ ಬಿದ್ದ ಸ್ಟಾರ್ ಆಟಗಾರ ನುವಾನ್ ತುಷಾರ












Click it and Unblock the Notifications