ವಾರಾಹಿ ಎರಡನೇ ಘಟಕ ನಾಡಿಗೆ ಅರ್ಪಣೆ
ಹೊಸಂಗಡಿ,
ಜ. 11 : ವಾರಾಹಿ ಜಲವಿದ್ಯುತ್ ಯೋಜನೆಯ 230 ಮೆಗಾವ್ಯಾಟ್ ವಿದ್ಯುತ್ ಉತ್ಪಾದನಾ ಘಟಕವನ್ನು ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಶನಿವಾರ ನಾಡಿಗೆ ಅರ್ಪಿಸಿದರು. ದೇಶದ ಮೊದಲ ಗುಹಾಂತರ ಜಲವಿದ್ಯುತ್ ಘಟಕ ಇದಾಗಿದ್ದು, 230 ಮೆಗಾವ್ಯಾಟ್ ಸಾಮರ್ಥ್ಯದ ಎರಡನೇ ಹಂತದ ಅಧಿಕೃತ ಉದ್ಘಾಟನೆ ನೆರವೇರಿತು. id="toptextpromo">ಇದರಿಂದ
115 ಮೆಗಾವ್ಯಾಟ್ ಸಾಮರ್ಥ್ಯದ ಒಟ್ಟು ನಾಲ್ಕು ಘಟಕಗಳು ಮಾತ್ರ ಅಲ್ಲಿ ಕಾರ್ಯ ನಿರ್ವಹಿಸುತ್ತಿದ್ದವು. ಪ್ರಸ್ತುತ ಅಷ್ಟೇ ಸಾಮರ್ಥ್ಯದ ಇನ್ನೂ ಎರಡು ಘಟಕಗಳನ್ನು ಆರಂಭಿಸಲಾಗಿದೆ. 2 ನೇ ಹಂತದ ಯೋಜನೆಗೆ ಸರ್ಕಾರ 190 ಕೋಟಿ ರುಪಾಯಿ ವೆಚ್ಚ ಮಾಡಿದೆ. ಉದ್ಘಾಟನೆ ಬಳಿಕ ಸುದ್ದಿಗಾರರರೊಂದಿಗೆ ಮಾತನಾಡಿದ ಯಡಿಯೂರಪ್ಪ, ವಾರಾಹಿ ಯೋಜನಾ ಪ್ರದೇಶದಲ್ಲಿ ರಾಜ್ಯ ವಿದ್ಯುತ್ ನಿಗಮದಿಂದ ಮಾದರಿ ಕಾರ್ಯ ನಡೆದಿದೆ. ಅಧಿಕಾರಿಗಳ, ಕಾರ್ಮಿಕರ ಶ್ರಮ ಸಾರ್ಥಕವಾಗಿದೆ ಎಂದು ಅವರು ಹೇಳಿದರು. id='are-slot-1' class='oiad oi-axt oiadv'> id='top-searched-articles'>(ದಟ್ಸ್
ಕನ್ನಡ ವಾರ್ತೆ)











Click it and Unblock the Notifications