ತೈಲ ಮುಷ್ಕರ ನಿಂತರೂ ನಿಲ್ಲದ ಜನರ ಪರದಾಟ

ಮುಷ್ಕರದಲ್ಲಿ ಭಾಗಿಯಾಗದಿದ್ದ ಎಚ್ ಪಿ ಮತ್ತು ಕಾರ್ಯಾರಂಭ ಪ್ರಾರಂಭಿಸಿರುವ ಇಂಡಿಯನ್ ಆಯಿಲ್ ಪಂಪುಗಳಲ್ಲಿ ಜನ ಪೆಟ್ರೋಲ್ ಮತ್ತು ಡೀಸೆಲ್ ಗಾಗಿ ಮೈಲುದ್ದ ಕ್ಯೂ ಹಿಡಿದು ನಿಂತಿದ್ದ ದೃಶ್ಯ ಕಂಡುಬಂದಿದೆ. ಅನೇಕ ಸಾಫ್ಟ್ ವೇರ್ ಕಂಪನಿಗಳು ಇಂದು ಕದ ಮುಚ್ಚಿರುವುದರಿಂದ ಶುಕ್ರವಾರದಷ್ಟು ಜನದಟ್ಟಣೆ ಕಂಡುಬಂದಿಲ್ಲ.
ವೇತನ ಹೆಚ್ಚಿಗೆ ಮಾಡಬೇಕೆಂದು ಆಗ್ರಹಿಸಿ ತೈಲ ಕಂಪನಿಗಳು ದೇಶದಾದ್ಯಂತ ಸಂಪು ಹೂಡಿದ್ದರಿಂದ ಇಡೀ ರಾಷ್ಟ್ರಕ್ಕೆ ರಾಷ್ಟ್ರವೇ ತತ್ತರಿಸಿತ್ತು. ಮೆಟ್ರೋ ನಗರಗಳಲ್ಲಿ ತೈಲದ ಭಾರೀ ಕೊರತೆ ಕಂಡುಬಂದಿತ್ತು. ಬೆಂಗಳೂರಿನಲ್ಲಿ ಬೆರಳೆಣಿಕೆಯ ಪಂಪುಗಳಲ್ಲಿ ತೈಲ ಸಿಗುತ್ತಿತ್ತು. ಆದರೆ, ಕೇಂದ್ರ ತೈಲ ಕಂಪನಿಗಳ ಆಗ್ರಹಕ್ಕೆ ಬಗ್ಗದ್ದರಿಂದ ನೌಕರರು ಹಿಂದೆ ಸರಿಯಬೇಕಾಯಿತು. ಸಂಪು ನಿರತ ನೌಕರರನ್ನು ಬಂಧಿಸುವಂತೆ ಆಜ್ಞೆ ಹೊರಡಿಸುತ್ತಿದ್ದಂತೆ ನೌಕರರು ಹಿಂದೆ ಸರಿದರು.
ಭಾರತ್ ಪೆಟ್ರೋಲಿಯಂ ಕಾರ್ಪೋರೇಷನ್, ಆಯಿಲ್ ಇಂಡಿಯಾ ಲಿಮಿಟೆಡ್, ಭಾರತೀಯ ತೈಲ ನಿಗಮ ಮುಷ್ಕರ ನಿಲ್ಲಿಸಿವೆ. ಆದರೂ ಜನ ಪರದಾಡುವಂತಾಗಿದೆ. ಪೆಟ್ರೋಲ್ ಮತ್ತು ಡೀಸೆಲ್ ವಿತರಣೆ ಸಹಜಸ್ಥಿತಿಗೆ ಬರಲು ಇನ್ನೂ ಎರಡು ದಿನ ಬೇಕಾಗಬಹುದು.
(ದಟ್ಸ್ ಕನ್ನಡ ವಾರ್ತೆ)












Click it and Unblock the Notifications