ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸತ್ಯಂನ 10 ಸಾವಿರ ನೌಕರರಿಗೆ ಪಿಂಕ್ ಸ್ಲಿಪ್?

By Staff
|
Google Oneindia Kannada News

ಹೈದರಾಬಾದ್, ಜ. 9 : ಸತ್ಯಂ ಕಂಪನಿಯ ಮಾಜಿ ಚೇರಮನ್ ರಾಮಲಿಂಗರಾಜು ಅಲಿಯಾಸ್ ಗೋಲ್ ಮಾಲ್ ರಾಜು ಮಾಡಿರುವ ಆನಾಹುತಕ್ಕೆ ಅಮಾಯಕ ಉದ್ಯೋಗಿಗಳು ಕೆಲಸ ಕಳೆದುಕೊಳ್ಳುವ ಸನ್ನಿವೇಶ ಎದುರಾಗಿದೆ. ಆರ್ಥಿಕ ಬಿಕ್ಕಟ್ಟಿನಿಂದ ತಲ್ಲಣಗೊಂಡಿರುವ ಸಾಫ್ಟವೇರ್ ಉದ್ಯಮದ ಮೇಲೆ ರಾಮಲಿಂಗರಾಜು ಅಳಿಸಲಾರದ ಬರೆ ಎಳೆದಿರುವುದು ಸುಳ್ಳಲ್ಲ. ಸತ್ಯಂ ತೀವ್ರ ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದು, ಮುಂದಿನ ತಿಂಗಳು ಸುಮಾರು 10 ಸಾವಿರಕ್ಕೂ ಅಧಿಕ ಸಂಖ್ಯೆಯ ಜನ ತಮ್ಮ ನೌಕರಿಯನ್ನು ಕಳೆದುಕೊಳ್ಳಲಿದ್ದಾರೆ ಎಂದು ಸತ್ಯಂ ಕಂಪನಿಯ ಮಾನವ ಸಂಪನ್ಮೂಲ ವಿಭಾಗ ಸ್ಪಷ್ಟಪಡಿಸಿದೆ.

ಮುಂದಿನ ತಿಂಗಳ 10 ಸಾವಿರ ಮಂದಿ ಕೆಲಸ ಕಳೆದುಕೊಳ್ಳುವುದು ಖಚಿತ. ಕೆಲಸ ಕಳೆದುಕೊಳ್ಳಲಿರುವ ಉದ್ಯೋಗಿಗಳಿಗೆ ಸಂಬಳ ಹಾಗೂ ಮುಂಗಡ ಹಣ ನೀಡುವ ಸ್ಥಿತಿಯಲ್ಲಿ ಕಂಪನಿ ಉಳಿದಿಲ್ಲ. ಕಂಪನಿಯಲ್ಲಿ ಕೆಲಸ ಮಾಡುತ್ತಿರುವ ಉದ್ಯೋಗಿಗಳಿಗೆ ಸಂಬಳ ನೀಡುವುದೇ ದುಸ್ತರವಾಗಿದೆ. ಒಟ್ಟು 20 ಸಾವಿರ ಉದ್ಯೋಗಿಗಳಿಗೆ ಪಿಂಕ್ ಸ್ಲಿಪ್ ನೀಡುವ ಸಾಧ್ಯತೆಗಳಿವೆ ಎಂದು ಸತ್ಯಂ ಕಂಪನಿಯ ಮಾನವ ಸಂಪನ್ಮೂಲ ವಿಭಾಗದ ಮುಖ್ಯಸ್ಥ ಕ್ರಿಸ್ ಲಕ್ಷ್ಮಿಕಾಂತ್ ಸ್ಪಷ್ಟಪಡಿಸಿದ್ದಾರೆ.

ರಾಮಲಿಂಗರಾಜು ಅವರು ರಾಜೀನಾಮೆ ಘೋಷಣೆಯಾಗುತ್ತಿದ್ದಂತೆಯೇ ಸತ್ಯಂನಲ್ಲಿ ಸುಮಾರು 53 ಸಾವಿರ ಉದ್ಯೋಗಿಗಳು ಕೆಲಸ ಮಾಡುತ್ತಿದ್ದಾರೆ. ಈಗ ಬಹುತೇಕ ಮಂದಿ ಇನ್ನೊಂದು ಕೆಲಸಕ್ಕೆ ಅರ್ಜಿ ಗುಜರಾಯಿಸಿದ್ದಾರೆ ಎನ್ನಲಾಗಿದೆ. ನೌಕ್ರಿ.ಡಾಂ ಹಾಗೂ ಮೂನ್ ಸ್ಟರ್. ಕಾಂ ನಲ್ಲಿ ಬರೀ ಸತ್ಯಂ ಕಂಪನಿಯ ನೌಕರರ ಅರ್ಜಿಗಳೇ ಇವೆ ಎನ್ನಲಾಗಿದೆ. ಸತ್ಯಂನ ಸುಮಾರು 16 ಸಾವಿರಕ್ಕೂ ಅಧಿಕ ಜನ ವಿವಿಧೆಡೆ ಕೆಲಸಕ್ಕಾಗಿ ಅರ್ಜಿ ಹಾಕಿದ್ದಾರೆ ಎಂದು ಮೂಲಗಳಿಂದ ತಿಳಿದು ಬಂದಿದೆ.

(ದಟ್ಸ್ ಕನ್ನಡ ವಾರ್ತೆ)
ಹೈದರಾಬಾದಿನಲ್ಲಿ ಸತ್ಯಂ ಸುದ್ದಿಗೋಷ್ಠಿ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X