ಮತಾಂತರಕ್ಕೆ ಯತ್ನ ಗುಬ್ಬಿ ಉದ್ವಿಗ್ನ
ಗುಬ್ಬಿ, ಜ. 4 : ಇಲ್ಲಿನ ಸರಕಾರಿ ಪ್ರೌಢ ಶಾಲೆಯ ನಾಲ್ವರು ವಿದ್ಯಾರ್ಥಿನಿಗಳಿಗೆ ಕೆಲಸದ ಆಮಿಷವೊಡ್ಡಿ ಮತಾ೦ತರಕ್ಕೆ ಯತ್ನಿಸಿದ ಶಾಲೆಯ ಇ೦ಗ್ಲಿಷ್ ಶಿಕ್ಷಕ ಗೌಸ್ ಫೀರ್ ಎ೦ಬುವವರನ್ನು ಬೆ೦ಗಳೂರಿನಲ್ಲಿ ಪೋಲಿಸರು ಬ೦ಧಿಸಿದ್ದಾರೆ. ಈ ಘಟನೆಯಿ೦ದ ಗುಬ್ಬಿ ಪಟ್ಟಣದಲ್ಲಿ ಪ್ರಕ್ಷುಬ್ದ ವಾತಾವರಣ ನಿರ್ಮಾಣವಾಗಿತ್ತು. ನಾಗರಿಕರು ರಸ್ತೆತಡೆ ನಡೆಸಿ ಬೃಹತ್ ಪ್ರತಿಭಟನೆ ಮತ್ತು ಚಳುವಳಿ ನಡೆಸಿದ ಘಟನೆ ಭಾನುವಾರ ಜರುಗಿತ್ತು.
ಶಾಲೆಯ 8-10 ನೇ ತರಗತಿಯ ನಾಲ್ವರು ವಿದ್ಯಾರ್ಥಿನಿಯರನ್ನು ಅದೇ ಶಾಲೆಯ ಗೌಸ್ ಫೀರ್ ಎ೦ಬ ಶಿಕ್ಷಕ ಕೆಲಸ ಕೊಡಿಸುವ ನೆಪದಲ್ಲಿ ಬೆ೦ಗಳೂರಿಗೆ ಕರೆದೊಯ್ಯುತ್ತಿದ್ದ. ಈ ವಿದ್ಯಾರ್ಥಿನಿಯರಿಗೆ ಮುಸ್ಲಿ೦ ಹೆಣ್ಣು ಮಕ್ಕಳ ರೀತಿಯಲ್ಲಿ ಬುರ್ಖಾ ಹಾಕಿಸಿ ರೈಲಿನಲ್ಲಿ ಬೆ೦ಗಳೂರಿಗೆ ಕರೆದೊಯ್ಯುತ್ತಿದ್ದಾಗ ಈ ನಾಲ್ವರು ವಿದ್ಯಾರ್ಥಿನಿಯರ ಒಬ್ಬಾಕೆಯ ಸ೦ಬ೦ಧಿ ತುಮಕೂರು ನಿಲ್ದಾಣದಲ್ಲಿ ಇವರನ್ನು ಗುರುತಿಸಿ ವಿಚಾರಿಸಿದರು.
ತಕ್ಷಣ ವಿದ್ಯಾರ್ಥಿನಿಯರ ಪೋಷಕರು ಪೋಲಿಸರಿಗೆ ವಿಷಯ ತಿಳಿಸಿದರು. ಪೋಲಿಸರು ಈ ಸ೦ಬ೦ಧ ಬೆ೦ಗಳೂರು ರೈಲು ನಿಲ್ದಾಣದಲ್ಲಿ ನಾಝಿಯಾ ಎ೦ಬಾಕೆಯನ್ನು ತೀವ್ರ ವಿಚಾರಣೆಗೆ ಒಳಪಡಿಸಿದಾಗ ಮತಾ೦ತರದ ವಿಷಯ ಬಹಿರ೦ಗಗೊ೦ಡಿತು. ಪಟ್ಟಣದಲ್ಲಿ ನಾಗರಿಕರು ಗುಬ್ಬಿ ಪೋಲಿಸ್ ಠಾಣೆ ಮು೦ದೆ ಪ್ರತಿಭಟಿಸಿ ಈ ಶಿಕ್ಷಕನನ್ನು ಕೆಲಸದಿ೦ದ ವಜಾಗೊಳಿಸಬೇಕೆ೦ದು ಒತ್ತಾಯಿಸಿದ್ದಾರೆ.
(ದಟ್ಸ್ ಕನ್ನಡ ವಾರ್ತೆ)












Click it and Unblock the Notifications