ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ದೊಡ್ಡಬಳ್ಳಾಪುರದಲ್ಲಿ ಆತ್ಮಹತ್ಯೆಗೆ ಕುಟುಂಬ ಯತ್ನ
ಬೆಂಗಳೂರು, ಜ. 3 : ದೊಡ್ಡಬಳ್ಳಾಪುರ ತಾಲೂಕಿನ ಹಾಡೋನಹಳ್ಳಿಯಲ್ಲಿ ನಾಲ್ವರ ಕುಟುಂಬವೊಂದು ಸಾಮೂಹಿಕ ಆತ್ಮಹತ್ಯೆಗೆ ಮುಂದಾಗಿರುವ ಘಟನೆ ಕಳೆದ ರಾತ್ರಿ ಜರುಗಿದೆ. ನಾಲ್ವರು ಇಲಿಪಾಶಾಣ ಸೇವಿಸಿ ಆತ್ಮಹತ್ಯೆಗೆ ಪ್ರಯತ್ನಿಸಿದ್ದಾರೆ.
ಈ ಘಟನೆಯಲ್ಲಿ ತಂದೆ ಮುನಿರಾಜು ಮತ್ತು 10 ವರ್ಷದ ಮಗಳು ಸಾವಿಗೀಡಾಗಿದ್ದು, ಮುನಿರಾಜುವಿನ ಹೆಂಡತಿ ಕಮಲಮ್ಮ ಮತ್ತು ಇನ್ನೊಬ್ಬ ಮಗಳನ್ನು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿದೆ. ಕಮಲಮ್ಮ ಅಪಾಯದಿಂದ ಪಾರಾಗಿದ್ದಾರೆ. ಆದರೆ, ಇನ್ನೊಬ್ಬ ಮಗಳು ಇನ್ನೂ ಅಪಾಯದಿಂದ ಹೊರಬಂದಿಲ್ಲ.
ಕೂಲಿನಾಲಿ ಮಾಡಿ ಬದುಕು ಸಾಗಿಸುತ್ತಿದ್ದ ಕುಟುಂಬ ಸಾಮೂಹಿಕ ಆತ್ಮಹತ್ಯೆಗೆ ಕೈಹಾಕಲು ಕಾರಣವೇನೆಂದು ಇನ್ನೂ ತಿಳಿದುಬಂದಿಲ್ಲ. ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು ತನಿಖೆ ನಡೆಸುತ್ತಿದ್ದಾರೆ.
(ದಟ್ಸ್ ಕನ್ನಡ ವಾರ್ತೆ)
ಪೂರಕ
ಓದಿಗೆ
ನಗರದಲ್ಲಿ
ಕಳೆದ
ವರ್ಷ
2000
ಆತ್ಮಹತ್ಯೆಗಳು
ಬಾಲಕನ
ಅಪಹರಣ,
10
ಲಕ್ಷ
ರು.
ಬೇಡಿಕೆ
Story first published: Saturday, January 3, 2009, 16:19 [IST]