ಬಾಲಕನ ಅಪಹರಣ, 10 ಲಕ್ಷ ರು. ಬೇಡಿಕೆ
ಬೆಂಗಳೂರು, ಜ. 3 : ಹೊಸ ವರ್ಷಾಚರಣೆಯ ದಿನವೇ ಶಾಲೆಗೆ ತೆರಳಿದ್ದ ಏಳು ವರ್ಷದ ಹುಡುಗನನ್ನು ಅಪಹರಿಸಿ 10 ಲಕ್ಷ ರು. ಹಣ ಒತ್ತಾಯಿಸಿದ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಮಾಗಡಿಯಲ್ಲಿ ಜರುಗಿದೆ.
ಯಾರೋ ಗೊತ್ತಿರುವವರು ಹಣದಾಸೆಗಾಗಿ ತಮ್ಮ ಮಗನನ್ನು ಅಪಹರಿಸಲಾಗಿದೆ ಎಂದು ಆಟೋ ಚಾಲಕ ಲಕ್ಷ್ಮಣ್ ಮತ್ತು ಸರಸ್ವತಿ ಎಂಬುವವರು ಪೊಲೀಸರಿಗೆ ದೂರು ನೀಡಿದ್ದಾರೆ.
ಘಟನೆ ವಿವರ : ಡಿಸೆಂಬರ್ 31ರಂದು ಇಂಡಿಯನ್ ಪಬ್ಲಿಕ್ ಶಾಲೆಗೆ ತೆರಳಿದ ಬಾಲಕ ಮಧ್ಯಾಹ್ನ 3 ಗಂಟೆಗೆ ಮನೆಗೆ ಮರಳಬೇಕಾಗಿತ್ತು. ಆದರೆ ಸಾಯಂಕಾಲವಾದರೂ ಹಿಂದಿರುಗದಿದ್ದರಿಂದ ಪಾಲಕರು ಶಾಲೆ, ಹತ್ತಿರದ ಅಜ್ಜಿಯಮನೆಯಲ್ಲಿ ವಿಚಾರಿಸಿದ್ದಾರೆ. ಅಂದು ರಾತ್ರಿ 11 ಗಂಟೆಯವರೆಗೆ ಹುಡುಕಿದರೂ ಬಾಲಕ ಸಿಕ್ಕಿಲ್ಲ.
ಹುಡುಕಿ ಬಸವಳಿದಿದ್ದ ಪಾಲಕರಿಗೆ ರಾತ್ರಿ 1 ಗಂಟೆಗೆ ಹೊಸಕೋಟೆಯಲ್ಲಿನ ಟೆಲಿಫೋನ್ ಬೂತ್ ನಿಂದ ಕರೆ ಬಂದಿದೆ. ದುಷ್ಕರ್ಮಿಗಳು ಬಾಲಕನನ್ನು ಬಿಡಬೇಕೆಂದರೆ 10 ಲಕ್ಷ ರು. ನೀಡಬೇಕೆಂದು ಬೇಡಿಕೆ ಮುಂದಿಟ್ಟಿದ್ದಾರೆ. ಆಟೋ ನಡೆಸಿ ಜೀವನ ಹೊರೆಯುತ್ತಿರುವ ಲಕ್ಷ್ಮಣ್ ದಂಪತಿಗಳಿಂದ ಅಷ್ಟೊಂದು ಹಣ ಒಟ್ಟುಗೂಡಿಸಲು ಸಾಧ್ಯವಿಲ್ಲವೆಂಬುದನ್ನು ಅರಿತ ಅಪಹರಣಕಾರರು ಬೇಡಿಕೆಯನ್ನು 2 ಲಕ್ಷಕ್ಕೆ ಇಳಿಸಿದ್ದಾರೆ.
ಸಂಭಾಷಣೆ ನಡೆಯುವಾಗ ಬಾಲಕನೊಡನೆ ಮಾತನಾಡಲು ಅಪಹರಣಕಾರರು ಅವಕಾಶ ನೀಡಿಲ್ಲ. ಅಪಹರಣಕಾರರು ಉರ್ದು ಮತ್ತು ಹಿಂದಿಯಲ್ಲಿ ಮಾತನಾಡುತ್ತಿದ್ದರೆಂದು ದೂರಿನಲ್ಲಿ ತಿಳಿಸಲಾಗಿದೆ. ತಮಗೆ ಯಾರ ವಿರುದ್ಧವೂ ದ್ವೇಷವಿಲ್ಲದ್ದರಿಂದ ಯಾರ ಮೇಲೂ ಅನುಮಾನವಿಲ್ಲ ಎಂದು ಬಾಲಕನ ಪಾಲಕರು ತಿಳಿಸಿದ್ದಾರೆ.
(ದಟ್ಸ್ ಕನ್ನಡ ವಾರ್ತೆ)
-
Karnataka weather : ರಾಜ್ಯದಲ್ಲಿಂದು ಹವಾಮಾನ ಹೇಗಿರಲಿದೆ? ಬೆಂಗಳೂರು ಸೇರಿ ಈ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ ಎಚ್ಚರಿಕೆ -
Good News: ಏಪ್ರಿಲ್ 2ನೇ ವಾರದಿಂದ ಹುಬ್ಬಳ್ಳಿ-ಹೈದರಾಬಾದ್ ಮತ್ತು ಬೆಂಗಳೂರಿಗೆ ವಿಮಾನ ಸೇವೆ: ಪ್ರಹ್ಲಾದ್ ಜೋಶಿ -
ವಂದೇ ಭಾರತ್ ರೈಲಿನ ಊಟ ಸೇವಿಸಿದ ಮಹಿಳೆಗೆ ತೀವ್ರ ಅಲರ್ಜಿ, 2 ವರ್ಷದ ಮಗನಿಗೆ ಅತಿಸಾರ: IRCTC ಹೇಳಿದ್ದೇನು? -
ಲಕ್ಷ ಲಕ್ಷ ಸಂಬಳದ ಗೂಗಲ್ ಕೆಲಸಕ್ಕೆ ರಾಜೀನಾಮೆ ನೀಡಿದ ಬೆಂಗಳೂರು ಟೆಕ್ಕಿ; ಕಾರಣ ಇಲ್ಲಿದೆ ನೋಡಿ -
Gold Rate: ಬೆಂಗಳೂರು ಸೇರಿ ಪ್ರಮುಖ ನಗರಗಳಲ್ಲಿ ಇಂದು ಚಿನ್ನ-ಬೆಳ್ಳಿ ಬೆಲೆ ಎಷ್ಟಿದೆ? -
Oracle: ಒರಾಕಲ್ ಸಂಸ್ಥೆಯಲ್ಲಿ ವೆಚ್ಚ ಕಡಿತದ ಭಾಗವಾಗಿ ಕೆಲಸ ಕಳೆದುಕೊಂಡ 12,000 ಜನ, 30,000 ಜನರಿಗೆ ಸಂಕಷ್ಟ -
KSRTC: ಏಪ್ರಿಲ್ 10ರವರೆಗೆ ವಿದ್ಯಾರ್ಥಿಗಳ ಬಸ್ಪಾಸ್ ಅವಧಿ ವಿಸ್ತರಣೆ -
ಏಪ್ರಿಲ್ ಮೊದಲ ವಾರ ಬ್ಯಾಂಕ್ ಬಂದ್: ಗ್ರಾಹಕರು ಮುಂಚಿತವಾಗಿ ಯೋಜನೆ ಮಾಡಬೇಕು -
ನಮ್ಮ ಮೆಟ್ರೋ ಪ್ರಯಾಣಿಕರಿಗೆ ನಿರಾಸೆ: ಮೇ ತಿಂಗಳಿನಲ್ಲಿ ಆರಂಭವಾಗಬೇಕಿದ್ದ ಪಿಂಕ್ ಲೈನ್ ಸಂಚಾರ ವಿಳಂಬ ಸಾಧ್ಯತೆ -
ವಾಸ್ತು ಪ್ರಕಾರ ಬಾತ್ರೂಮ್ನಲ್ಲಿ ಉಪ್ಪು ಇಡುವುದರಿಂದ ಏನು ಲಾಭ? -
ಚಲಿಸುವ ರೈಲಿನ ಬೋಗಿಯಲ್ಲಿ ಬಟ್ಟೆ ಒಣಗಿಸಿದ ಪ್ರಯಾಣಿಕರು: Viral Video ನೋಡಿ ನೆಟ್ಟಿಗರು ಗರಂ -
ಹೋಟೆಲ್, ರೆಸ್ಟೋರೆಂಟ್ ಮಾಲೀಕರಿಗೆ ಶಾಕ್: ವಾಣಿಜ್ಯ ಗ್ಯಾಸ್ ಸಿಲಿಂಡರ್ ಬೆಲೆಯಲ್ಲಿ ಬರೋಬ್ಬರಿ 195 ರೂ. ಭಾರಿ ಏರಿಕೆ












Click it and Unblock the Notifications