ವಿಧವೆಯರ ಬೆಂಬಲಕ್ಕೆ ನಿಲ್ಲುವ ಮಂಡ್ಯ
ಬೆಂಗಳೂರು, ಡಿ. 30 : ಗಂಡುಗಲಿಗಳ ಜಿಲ್ಲೆ ಮಂಡ್ಯ. ಕಬ್ಬು ಭತ್ತದ ಕಣಜ ಮಂಡ್ಯ. ರಾಜಕೀಯ ಕಲಿಗಳ ರಣಭೂಮಿ ಮಂಡ್ಯ. ಮುದ್ದೆ ಬಸ್ಸಾರು, ಮುದ್ದೆ ಮಾಂಸದ ಸಾರನ್ನು ಹೀರಿಕೊಂಡು ಬೆಳೆದ ಮಂಡ್ಯ. ಭೂಮಿ ವ್ಯಾಜ್ಯಗಳಿಗೆ ಹೆಸರಾದ ಮಂಡ್ಯ. ಟ್ರ್ಯಾಕ್ಟರ್ ನಲ್ಲಿ ಮನೆಮಂದಿಯನ್ನು ತುಂಬಿಕೊಂಡು ಪೇಟೆ ಸುತ್ತುವ ರೈತರ ಮಂಡ್ಯ. ರೈತ ಚಳವಳಿಯ ನೆಲೆವೀಡಾಗಿದ್ದ ಮಂಡ್ಯ. ವಿಧವೆಯರನ್ನು ಉಪಚುನಾವಣೆಗಳಲ್ಲಿ ಎಂದೂ ಕೈಬಿಡದ ಮಂಡ್ಯ.
ಒಬ್ಬ ಶಾಸಕ ತೀರಿಕೊಂಡಾಗಲೋ ಅಥವಾ ರಾಜೀನಾಮೆ ನೀಡಿದಾಗಲೋ ತೆರವಾಗುವ ಸ್ಥಾನಕ್ಕೆ ಜರುಗುವ ಉಪಚುನಾವಣೆಯಲ್ಲಿ ಶಾಸಕರ ಪತ್ನಿಯರು ಕಣಕ್ಕೆ ಧುಮುಕುವುದು ಸಾಮಾನ್ಯ. ಆದರೆ ಮಂಡ್ಯ ಜಿಲ್ಲೆಯಲ್ಲಿ ಈ ಚಾಳಿಗೆ ದೀರ್ಘ ಪರಂಪರೆ ಇದೆ. ಇದುವರೆವಿಗೆ ನಡೆದ ನಾನಾ ಉಪಚುನಾವಣೆಗಳಲ್ಲಿ ಒಟ್ಟು 9 ಮಂದಿ ವಿಧವೆಯರನ್ನು ವಿಧಾನಸೌಧಕ್ಕೆ ಕಳಿಸಿದ ಕೀರ್ತಿ ಮಂಡ್ ಜಿಲ್ಲೆಯದು.
ಸಿದ್ದರಾಜು ನಿಧನದಿಂದ ತೆರವಾಗಿದ್ದ ಸ್ಥಾನಕ್ಕೆ ನಡೆದ ಉಪಚುನಾವಣೆಯಲ್ಲಿ ಅಂತೂ ಮದ್ದೂರಿನ ಮತದಾರರು ಕಲ್ಪನಾ ಸಿದ್ದರಾಜು ಅವರ ಕೈಬಿಡಲಿಲ್ಲ. ಅನುಕಂಪದ ಅಲೆಯಲ್ಲಿ ತೇಲುತ್ತಿದ್ದ ಅವರ ಜನಪ್ರಿಯತೆಯ ತೇರಿಗೆ ಅಡ್ಡಹಾಕಲು ಬಿಜೆಪಿ ಕಾಂಗ್ರೆಸ್ ನಡೆಸಿದ ಯಾವ ಪಟ್ಟುಗಳೂ ಕೈಗೂಡಲಿಲ್ಲ. ಮದ್ದೂರಿನ ರಾಜ ಎಸ್.ಎಂ. ಕೃಷ್ಣ ಅವರ ಅಣ್ಣನ ಮಗ ಗುರುಚರಣ ಮತ್ತು ಶತಕೋಟಿ ರೂಪಾಯಿಗಳ ಧಣಿ ತಮ್ಮಣ್ಣನ ದೊಡ್ಡಾಟಗಳು ಇಲ್ಲಿ ನಡೆಯಲಿಲ್ಲ. ತಮ್ಮಣ್ಣನನ್ನು ಸೋಲಿಸಿ ಮದ್ದೂರು ವಡೆಯನ್ನು ತಮ್ಮದಾಗಿಸಿಕೊಂಡ ಕಲ್ಪನಾ ಸಿದ್ದರಾಜು ಅವರಿಗೆ ಶುಭಾಶಯಗಳು!
(ದಟ್ಸ್ ಕನ್ನಡ ವಾರ್ತೆ)
-
Gold Price March 11: ಚಿನ್ನದ ಬೆಲೆಯಲ್ಲಿ ಹೊಸ ದಾಖಲೆ: ಬೆಳ್ಳಿ ಪ್ರಿಯರಿಗೆ ಅಚ್ಚರಿ, ಎಷ್ಟಿದೆ ಇಂದಿನ ಚಿನ್ನ - ಬೆಳ್ಳಿ ಬೆಲೆ -
Karnataka Weather Mar 12: ಬಿಸಿಲು ಹೆಚ್ಚಳದ ನಡುವೆ ಮಾರ್ಚ್ 15ರಿಂದ ಕರ್ನಾಟಕದಲ್ಲಿ ಮಳೆ, ಹೇಗಿದೆ ಇಂದಿನ ವೆದರ್ -
Bengaluru Property: ಬೆಂಗಳೂರಿನಲ್ಲಿ ಕಟ್ಟಡ ನಿಯಮ ಉಲ್ಲಂಘಿಸಿದ ಆಸ್ತಿದಾರರಿಗೆ ಜಿಬಿಎ - ಬಿಡಿಎ ಜಂಟಿ ಶಾಕ್ -
Rain In Karnataka: ಈ ವಾರದಲ್ಲಿ ಕರ್ನಾಟಕದ ಈ ಭಾಗಗಳಲ್ಲಿ ಮಳೆ ಸಾಧ್ಯತೆ, ಬೆಂಗಳೂರಲ್ಲಿ ಹೇಗಿದೆ ವೆದರ್ -
Gold Rate March 12: ಚಿನ್ನದ ಬೆಲೆ 10,900 ರೂ., ಬೆಳ್ಳಿ ಬೆಲೆ 10,000 ರೂ. ಭರ್ಜರಿ ಇಳಿಕೆ, ಬಂಗಾರ ಪ್ರಿಯರು ಫಿದಾ -
ಜಿಮ್ನಲ್ಲಿ ಭೇಟಿ, ಸಾಫ್ಟ್ವೇರ್ ಕಂಪನಿ ಕೆಲಸ: 7,500 ರೂ. ಸಂಬಳ ಪಡೆಯುತ್ತಿದ್ದ ಅಶ್ವಿನಿ ಅಪ್ಪು ಮನಗೆದ್ದಿದ್ದು ಹೇಗೆ? -
ನಮ್ಮದು ಲವ್ ಜಿಹಾದ್ ಅಲ್ಲ, ಮತಾಂತರವೂ ಇಲ್ಲ, ಹಿಂದೂ ಸಂಪ್ರದಾಯದಂತೆ ವಿವಾಹ: ಮೊನಾಲಿಸಾ-ಫರ್ಹಾನ್ ಖಾನ್ ಸ್ಪಷ್ಟನೆ -
Gold: ಗದಗ ಲಕ್ಕುಂಡಿಯಲ್ಲಿ ಪತ್ತೆಯಾದ ಚಿನ್ನದ ನಿಧಿ ಪ್ರಕರಣಕ್ಕೆ ಟ್ವಿಸ್ಟ್: ಮೌಲ್ಯ 10 ಪಟ್ಟು ಹೆಚ್ಚು, ವಿಜಯನಗರ ಕಾಲದ ಆಭರಣ -
ವಾಸ್ತು: ದಕ್ಷಿಣ ಗೇಟು ಶುಭವೋ ಅಥವಾ ಅಶುಭವೋ, ಉತ್ತರ ದ್ವಾರದ ವಾಸ್ತು ರಹಸ್ಯಗಳೇನು ಇಲ್ಲಿದೆ ಸಂಪೂರ್ಣ ಮಾಹಿತಿ -
Horoscope March 12: ಗುರುವಾರ ದ್ವಾದಶ ರಾಶಿಗಳ ಫಲಾಫಲ ಹೇಗಿದೆ, ಇಲ್ಲಿದೆ ದಿನ ಭವಿಷ್ಯ -
Bengaluru Property Sale: ಬೆಂಗಳೂರಲ್ಲಿ 50 ಆಸ್ತಿದಾರರಿಗೆ ತಮ್ಮ ಆಸ್ತಿಯನ್ನೇ ಕಳೆದುಕೊಳ್ಳುವ ಆತಂಕ: ಜಿಬಿಎ ಹೇಳಿದ್ದೇನು -
Vehicle Loan: ವಾಹನ ಮಾಲೀಕರಿಗೆ ಗುಡ್ನ್ಯೂಸ್: ಸಾಲ ಪ್ರಕ್ರಿಯೆ, ಆರ್ಸಿ ಅಪ್ಡೇಟ್ಗೆ ಇನ್ಮುಂದೆ ಆನ್ಲೈನ್ ವ್ಯವಸ್ಥೆ












Click it and Unblock the Notifications