ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದೇಶಪಾಂಡೆ 0; ಗೌಡ 2; ಯಡ್ಡಿ 6

By Staff
|
Google Oneindia Kannada News

ಬೆಂಗಳೂರು, ಡಿ. 25: ಅತ್ಯಂತ ಕುತೂಹಲ ಕೆರಳಿಸಿರುವ ಕರ್ನಾಟಕ ವಿಧಾನಸಭಾ ಉಪಚುನಾವಣೆಗಳಲ್ಲಿ ರಾಜಕೀಯ ಪಕ್ಷಗಳ ಸೋಲು ಗೆಲುವುಗಳನ್ನು ಊಹಿಸುವ ಒಂದು ಚುನಾವಣಾ ಪೂರ್ವ ಸಮೀಕ್ಷೆ ಗುರುವಾರ ಹೊರಬಿದ್ದಿದೆ. ಸಮೀಕ್ಷೆಯ ಪ್ರಕಾರ, ಕಾಂಗ್ರೆಸ್ಸಿಗೆ ಸೊನ್ನೆ ಜೆಡಿಎಸ್ ಗೆ 2 ಮತ್ತು ಭಾರತೀಯ ಜನತಾ ಪಕ್ಷಕ್ಕೆ 6 ಸ್ಥಾನಗಳಲ್ಲಿ ಗೆಲವು ಉಂಟಾಗಲಿದೆ.

ಆಡಳಿತಾರೂಢ ಬಿಜೆಪಿ ಸರಕಾರದ ಸಾಧನೆ - ವೈಫಲ್ಯ, ದೇವೇಗೌಡರ ಕುಟುಂಬ ರಾಜಕೀಯ ದಾಳ, ಕಾಂಗ್ರೆಸ್ ಪಕ್ಷದ ಅಳಿದುಳಿದ ಪ್ರತಿಷ್ಠೆಯನ್ನು ಪಣಕ್ಕೆ ಒಡ್ಡಲಾಗಿರುವ ಈ ಚುನಾವಣೆ ರಾಜ್ಯದಲ್ಲಿ ಬರಲಿರುವ ರಾಜಕೀಯ ಆಗುಹೋಗುಗಳಿಗೆ ದಿಕ್ಸೂಚಿಯಾಗಲಿದೆ.

ಕ್ರಿಯೇಟಿವ್ ಸೆಂಟರ್ ಫಾರ್ ಪೊಲಿಟಿಕಲ್ ಸ್ಟಡೀಸ್ ( ಕಾಪ್ಸ್ )ಸಂಸ್ಥೆ ನಡೆಸಿರುವ ಮತದಾನ ಪೂರ್ವ ಸಮೀಕ್ಷೆ ಪ್ರಕಾರ ಜನಾಭಿಪ್ರಾಯ ಸಂಗ್ರಹಣೆಯ ಸಾರಾಂಶ ಕೆಳಕಂಡಂತಿದೆ. ಕಾಪ್ಸ್ ಎಂಟೂ ವಿಧಾನಸಭಾ ಕ್ಷೇತ್ರಗಳಲ್ಲಿ ಮತದಾನ ಪೂರ್ವ ಸಮೀಕ್ಷೆಯನ್ನು ಕೈಗೊಂಡಿತ್ತು.

ಮದ್ದೂರು, ಬಿ.ಜೆ.ಪಿ; ಮಧುಗಿರಿ, ಜೆ.ಡಿ.ಎಸ್; ತುರುವೇಕೆರೆ, ಜೆ.ಡಿ.ಎಸ್;ಅರಭಾವಿ, ಬಿ.ಜೆ.ಪಿ ; ಹುಕ್ಕೇರಿ, ಬಿ.ಜೆ.ಪಿ; ದೇವದುರ್ಗ, ಬಿ.ಜೆ.ಪಿ;ದೊಡ್ಡ ಬಳ್ಳಾಪುರ, ಬಿ.ಜೆ.ಪಿ ;ಕಾರವಾರ, ಬಿ.ಜೆ.ಪಿ; ಇದೇ ಫಲಿತಾಂಶವನ್ನು ಅಭ್ಯರ್ಥಿಗಳ ಹೆಸರುಗಳಲ್ಲಿ ಪ್ರತಿಬಿಂಬಿಸಿದಾಗ ಹಣಾಹಣಿ ತ್ರಿಕೋಣ ಸ್ಪರ್ಧೆ ನಡೆದಿರುವ ಮಧುಗಿರಿಯಲ್ಲಿ ಅನಿತಾ ಜಯಭೇರಿ, ಚೆನ್ನಿಗಪ್ಪ ಸೋಲು; ಮದ್ದೂರಿನಲ್ಲಿ ಕಲ್ಪನಾ ಸಿದ್ದರಾಜು ಸೋಲು, ತಮ್ಮಣ್ಣ ಗೆಲುವು.

ಕಾಪ್ಸ್ ಸಮೀಕ್ಷಕರು 8 ವಿಧಾನಸಭಾ ಕ್ಷೇತ್ರಗಳ 183 ಮತಗಟ್ಟೆಗಳ 8,371 ಮತದಾರರನ್ನು Probability Proportionate to Size (PPS) Method ಮೂಲಕ ಸಮೀಕ್ಷೆಗೆ ಆಯ್ದುಕೊಂಡು ಪ್ರಶ್ನಾವಳಿಗಳ ಮೂಲಕ ಮತದಾರರ ಅಭಿಪ್ರಾಯಗಳನ್ನು ಸಂಗ್ರಹಿಸಿದೆ.

ಮತಗಟ್ಟೆಗಳ ವ್ಯಾಪ್ತಿಗಳಲ್ಲಿ 90 ರಿಂದ 100 ಮತದಾರರನನ್ನು Random ಮಾದರಿಯಲ್ಲಿ ಸಮೀಕ್ಷೆಗೆ ಆರಿಸಿಕೊಂಡು ವೈಜ್ಞಾನಿಕವಾದ Systematic Random Sampling Technique ಮುಖೇನ ಮತದಾರರ ಅಭಿಪ್ರಾಯಗಳನ್ನು ಸಂಗ್ರಹಿಸಿತು.

ಕಾಪ್ಸ್ ಚುನಾವಣಾ ಪೂರ್ವ ಮತದಾರರ ಸಮೀಕ್ಷೆಯಲ್ಲಿ 130 ಜನ ಸಮೀಕ್ಷಕರು ಭಾಗವಹಿಸಿದ್ದು ಒಟ್ಟು ಮತದಾರರ ಅಭಿಪ್ರಾಯಗಳನ್ನು ಸಂಗ್ರಹಿಸಲು ಅನುಕೂಲವಾಗುವಂತೆ 18 ಪ್ರಶ್ನೆಗಳ ಪ್ರಶ್ನಾವಳಿಗಳನ್ನು ಮತದಾರರಿಗೆ ಕೊಡಲಾಗಿತ್ತು. ಇದೆಲ್ಲದರ ಒಟ್ಟು ಸಾರಾಂಶವಾಗಿ 8 ಕ್ಷೇತ್ರಗಳ ಉಪ ಚುನಾವಣೆಯಲ್ಲಿ 6 ಕ್ಷೇತ್ರಗಳಲ್ಲಿ ಆಡಳಿತಾರೂಢ ಬಿ.ಜೆ.ಪಿ. ಜಯಗಳಿಸಲಿದ್ದು ಇನ್ನುಳಿದ 2 ಕ್ಷೇತ್ರಗಳಲ್ಲಿ ಜೆ.ಡಿ.ಎಸ್. ಅಭ್ಯರ್ಥಿಗಳು ಜಯಗಳಿಸಲಿದ್ದಾರೆ. ಸಮೀಕ್ಷೆಯಲ್ಲಿ ಗೋಚರವಾದಂತೆ ಕಾಂಗ್ರೆಸ್ ಯಾವುದೇ ಕ್ಷೇತ್ರಗಳಲ್ಲಿ ಗೆಲುವು ಸಾಧಿಸುವುದಿಲ್ಲ.

ಸಮೀಕ್ಷೆಯ ಸಾರಾಂಶ:

ರಾಜ್ಯದಲ್ಲಿ ಸ್ಥಿರತೆ ಕಾಪಾಡಲು ಯಾವ ರಾಜಕೀಯ ಪಕ್ಷದಿಂದ ಸಾಧ್ಯ ?

ಬಿಜೆಪಿ-43%
ಕಾಂಗ್ರೆಸ್-35%
ಜೆಡಿಎಸ್-23%

ಶಾಸಕರ ಪಕ್ಷಾಂತರ ಪ್ರಹಸನದಿಂದ ರಾಜ್ಯದ ಅಭಿವೃದ್ಧಿಯಲ್ಲಿ ಸ್ಥಿರತೆ ಉಂಟಾಗಿದೆಯೇ ?

ಹೌದು-40%
ಇಲ್ಲ-60 %

(ದಟ್ಸ್ ಕನ್ನಡ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X