ಉದ್ರೇಕಗೊಳಿಸುವ ಸುದ್ದಿ ಪ್ರಸಾರಕ್ಕೆ ತಡೆ
ನವದೆಹಲಿ, ಡಿ.5 : ಮುಂಬೈ ಭಯೋತ್ಪಾದನೆಗೆ ಸಂಬಂಧಿಸಿದಂತೆ ಜನರ ಮನಸ್ಸು ಕೆರಳಿಸುವಂತ ಸುದ್ದಿ ಮತ್ತು ಚಿತ್ರೀಕರಣವನ್ನು ಪ್ರಸಾರ ಮಾಡಬಾರದು ಎಂದು ಕೇಂದ್ರ ವಾರ್ತಾ ಮತ್ತು ಪ್ರಸಾರ ಇಲಾಖೆಗೆ ರಾಷ್ಟ್ರೀಯ ಹಾಗೂ ಪ್ರಾದೇಶಿಕ ವಾರ್ತಾ ವಾಹಿನಿಗಳಿಗೆ ಸೂಚನೆ ನೀಡಿದೆ.
ಪದೆಪದೆ ಮುಂಬೈ ಸ್ಫೋಟ ಹಾಗೂ ಅದರ ಕಾರ್ಯಾಚರಣೆಯ ವರದಿ ಮತ್ತು ಚಿತ್ರೀಕರಣವನ್ನು ಪ್ರಸಾರ ಮಾಡುವುದರಿಂದ ಜನರ ಭಾವನೆಗಳನ್ನು ಕೆರಳಿಸಿದಂತಾಗುತ್ತದೆ. ಸಾಮಾಜಿಕ ಜವಾಬ್ದಾರಿ ಹೊತ್ತಿರುವ ಮಾಧ್ಯಮಗಳು ಇಂಥ ಕ್ಲಷ್ಷಕರ ಸಂದರ್ಭದಲ್ಲಿ ತುಂಬಾ ಜಾಗರೂಕತೆಯಿಂದ ವರದಿ ಮಾಡಬೇಕಾದ ಅಗತ್ಯವಿದೆ ಎಂದು ವಾರ್ತಾ ಇಲಾಖೆಯ ಅಧಿಕಾರಿಗಳು ಕಿವಿ ಮಾತು ಹೇಳಿದೆ.
ಉಗ್ರರ ಅಟ್ಟಹಾಸದಿಂದ ದೇಶದಲ್ಲಿ ಅಶಾಂತಿಯ ವಾತಾವರಣ ಉಂಟಾಗಿದೆ. ಇದೀಗ ಶಾಂತಿ ಕಾಪಾಡುವಂತ ನಿಟ್ಟಿನಲ್ಲಿ ವರದಿ ಹಾಗೂ ಚಿತ್ರೀಕರಣವನ್ನು ಪ್ರಸಾರ ಮಾಡಬೇಕೆ ಹೊರತು, ಮುಂಬೈ ಭಯೋತ್ಪಾದನೆ ಸೇರಿದಂತೆ ಮತ್ತಿತರ ಭಯೋತ್ಪಾದನಾ ದಾಳಿಗಳನ್ನು ಪ್ರಸಾರ ಮಾಡಿದರೆ ದೇಶದಲ್ಲಿ ಇನ್ನಷ್ಟು ಅಶಾಂತಿ ಹುಟ್ಟು ಹಾಕಲು ಕಾರಣವಾಗುತ್ತದೆ.
ಈ ಕೂಡಲೇ ಮಾದ್ಯಮಗಳು ಜವಾಬ್ದಾರಿಯನ್ನು ಅರಿಯಬೇಕಿದೆ ಎಂದು ಇಲಾಖೆ ಹೇಳಿದೆ. ಮುಂಬೈ ಭಯೋತ್ಪಾದನೆಯಲ್ಲಿ ವಾರ್ತಾ ವಾಹಿನಿಗಳ ಟಿಆರ್ ಪಿ ಗಗನಕ್ಕೇರಿದೆ ಎನ್ನವುದು ಟೆಲಿವಿಷನ್ ಆಡಿಯನ್ಸ್ ಮೆಜರ್ ಮೆಂಟ್ (MAT) ನಿಂದ ತಿಳಿದು ಬಂದಿದೆ.
(ದಟ್ಸ್ ಕನ್ನಡ ವಾರ್ತೆ)