ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಆರ್ಟ್ ಆಫ್ ಲೀವಿಂಗ್ ಗೆ ಸ್ಫೋಟದ ಬೆದರಿಕೆ

By Staff
|
Google Oneindia Kannada News

ಬೆಂಗಳೂರು, ನ.2: ಆಧ್ಮಾತಿಕ ಗುರು ರವಿಶಂಕರ್ ಗುರೂಜಿ ಅವರ ಆರ್ಟ್ ಆಫ್ ಲೀವಿಂಗ್ ಫೌಂಡೇಷನ್ ಗೆ ಶನಿವಾರ ಬೆದರಿಕೆ ಪತ್ರ ಬಂದಿದೆ. ಕೇರಳದ ಕಣ್ಣೂರಿನಲ್ಲಿನ ಏಒಎಲ್ ಧ್ಯಾನ ಕೇಂದ್ರವನ್ನು ಸ್ಫೋಟಗೊಳಿಸುವ ಬೆದರಿಕೆ ಪತ್ರ ಬಂದಿರುವುದಾಗಿ ತಿಳಿದುಬಂದಿದೆ.

ಮಲೆಯಾಳಂನಲ್ಲಿರುವ ಈ ಪತ್ರ ಧ್ಯಾನ ಆರಂಭಿಸುವ ಕೆಲ ಸಮಯದ ಮುನ್ನ ಬಂದಿದೆ. ಕಣ್ಣೂರಿನ ಧ್ಯಾನ ಕೇಂದ್ರದಲ್ಲಿ ಧ್ಯಾನ ಇನ್ನಿತರ ಆಧ್ಯಾತಿಕ ಚಟುವಟಿಕೆಗಳನ್ನು ಕೂಡಲೇ ನಿಲ್ಲಿಸಬೇಕು. ಇಲ್ಲವಾದಲ್ಲಿ ಧ್ಯಾನ ಕೇಂದ್ರವನ್ನು ಸ್ಫೋಟಿಸಲಾಗುವುದು ಎಂದು ಅದರಲ್ಲಿ ಬರೆಯಲಾಗಿದೆ. ಆದರೆ ಇದನ್ನು ಬರೆದ ವ್ಯಕ್ತಿಯ ಬಗ್ಗೆ ತಿಳಿದು ಬಂದಿಲ್ಲ. ಪೊಲೀಸರಿಗೆ ವಿಷಯ ಮುಟ್ಟಿಸಲಾಗಿದೆ ಎಂದು ಎಓಎಲ್ ನ ವಕ್ತಾರರು ಹೇಳಿದರು.

ಬೆಂಗಳೂರು ಮೂಲದ ಆರ್ಟ್ ಆಫ್ ಲೀವಿಂಗ್ ಫೌಂಡೇಷನ್ ತನ್ನ ಸುದರ್ಶನ ಕ್ರಿಯೆ ಮುಂತಾದ ಧ್ಯಾನ ಪ್ರಕ್ರಿಯೆಗಳ ಮೂಲಕ ವಿಶ್ವಖ್ಯಾತಿಯನ್ನು ಗಳಿಸಿದೆ. ರವಿಶಂಕರ್ ಗುರೂಜಿ ಅವರ ಬೋಧಿತ ಈ ಧ್ಯಾನ ಕ್ರಮಗಳು ಎಲ್ಲಾ ಬಗೆಯ ಮತ ಧರ್ಮದವರಿಗೆ ಮುಕ್ತವಾಗಿದೆ.

(ದಟ್ಸ್ ಕನ್ನಡವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X