ಮುಂದುವರಿದ ಕಸರತ್ತು : ಗುರುವಾರದ ರಾಜಕೀಯ ಚಿತ್ರಣ
ಬೆಂಗಳೂರು, ಅ.11 : ಮಾಜಿ ಮುಖ್ಯಮಂತ್ರಿ ಎಸ್.ಆರ್.ಬೊಮ್ಮಾಯಿ ನಿಧನದ ಹಿನ್ನೆಲೆ ರಾಜಕೀಯ ಚಟುವಟಿಕೆಗಳು ಗುರುವಾರ(ಅ.11)ತುಸು ಮಂಕಾಗಿರುವಂತೆ ಕಂಡು ಬಂತು. ಆದರೆ ತೆರೆಮೆರೆಯಲ್ಲಿ ನಾನಾ ಯತ್ನಗಳು ನಡೆದಿವೆ. ಸಹಜವಾಗಿಯೇ ಊಹಾಪೋಹಗಳು ಹೆಚ್ಚಿವೆ.
ಇಂದಿನ ರಾಜಕೀಯ ಹೀಗಿತ್ತು :
- ಕಾಂಗ್ರೆಸ್ ನಾಯಕರಿಂದ ರಾಜ್ಯಪಾಲರ ಭೇಟಿ.. ಹಿಂದಿನ ಸರ್ಕಾರದ ಮಹತ್ವದ ನಿರ್ಧಾರಗಳನ್ನು ತಡೆ ಹಿಡಿಯಿರಿ ಎಂದು ರಾಜ್ಯಪಾಲರಿಗೆ ಮನವಿ... ಜೊತೆಗೆ ಐಎಎಸ್ ಅಧಿಕಾರಿ ವರ್ಗಾವಣೆ ರದ್ದುಗೊಳಿಸುವಂತೆ ಕೋರಿಕೆ.
- ಸರ್ಕಾರ ರಚನೆ ಪ್ರಸ್ತಾಪ ಕಾಂಗ್ರೆಸ್ ಮುಂದಿಲ್ಲ : ಎನ್.ಧರ್ಮಸಿಂಗ್
- ಮುರುಘ ರಾಜೇಂದ್ರ ಶ್ರೀಗಳ ಭೇಟಿ ಮಾಡಿದ ಯಡಿಯೂರಪ್ಪ, ಜೆಡಿಎಸ್ ನಾಯಕರ ವಿರುದ್ಧ ದೂರು ಒಪ್ಪಿಸಿದರು.
- ಜನತಾ ಪರಿವಾರದಲ್ಲಿ ನಾನು ಏಕಾಂಗಿ.. ಈಗಿನ ಪೀಳಿಗೆ ನಮ್ಮೊಂದಿಗೆ ಸ್ಪಂದಿಸುತ್ತಿಲ್ಲ.. : ಹೆಚ್.ಡಿ.ದೇವೇಗೌಡ
- ಜೆಡಿಎಸ್ ಬಾಹ್ಯ ಬೆಂಬಲ ಕೊಟ್ಟರೂ ನಾವು ಸರ್ಕಾರ ರಚಿಸುವುದಿಲ್ಲ. ನಾವು ಜೆಡಿಎಸ್ ನಿಂದ ದೂರ ಇದ್ದೇವೆ. ಬಾಹ್ಯ ಬೆಂಬಲ ನೀಡಿ ಎಂದು ಜೆಡಿಎಸ್ ಗೆ ಸಲಹೆ ನೀಡಿಲ್ಲ... ಇದು ಮಾಧ್ಯಮ ಸೃಷ್ಟಿಸಿದ ವದಂತಿ.. : ಬಿ.ಎಸ್.ಯಡಿಯೂರಪ್ಪ.
- ಬಿಜೆಪಿ ಸೇರಿದ ನಿರ್ದೇಶಕ ಮಹೇಂದ್ರ.. ಕೊಳ್ಳೆಗಾಲದಿಂದ ಶಾಸಕ ಸ್ಥಾನಕ್ಕ ಸ್ಪರ್ಧಿಸುವ ಬಯಕೆ.
- ಜನತಾ ನ್ಯಾಯಾಲಕ್ಕೆ ಹೋಗುವುದೊಂದೇ, ಸದ್ಯದ ಅನಿಶ್ಚಿತತೆಗೆ ಪರಿಹಾರ : ಹೆಚ್.ಡಿ.ದೇವೇಗೌಡ
- ನನ್ನ ಮಾವ(ದೇವೇಗೌಡ)ನವರ ವಿರುದ್ಧ ನಾನು ಅಸಮಾಧಾನ ವ್ಯಕ್ತಪಡಿಸಿಲ್ಲ : ಅನಿತಾ ಕುಮಾರಸ್ವಾಮಿ
- ಲಿಂಗಾಯಿತ ಶಾಸಕರ ತೆರೆಮರೆ ಯತ್ನ.
(ದಟ್ಸ್ ಕನ್ನಡ ವಾರ್ತೆ)












Click it and Unblock the Notifications