ಸ್ವದೇಶಿ ಪೇಯ ಚಳವಳಿಗೆ ಶ್ರೀ ರವಿಶಂಕರ್ ಗುರೂಜಿ ಕರೆ
ಬೆಂಗಳೂರು : ದೇಶದಲ್ಲೇ ಮೊದಲ ಬಾರಿಗೆ ಕೇನ್ ಓ ಲಾ ಸಂಸ್ಥೆ ಹೊರತರುತ್ತಿರುವ ಬ್ರಾಂಡೆಡ್ ಕಬ್ಬಿನ ಹಾಲು ತಯಾರಿಕ ಘಟಕವನ್ನು ಉದ್ಘಾಟಿಸಿದ ಶ್ರೀ ರವಿಶಂಕರ್ ಗುರೂಜಿ ಈ ರೀತಿ ಕರೆ ನೀಡಿದರು.
ಕೋಕ ಕೋಲಾ, ಪೆಪ್ಸಿಯಂತಹ ಬಾಟಲಿ ಪೇಯಗಳನ್ನು ತ್ಯಜಿಸಿ, ಸ್ವದೇಶಿ ಪೇಯ ಕಬ್ಬಿನ ರಸ ಚಳುವಳಿಯನ್ನು ಪ್ರಾರಂಭಿಸಿ. ಕಬ್ಬಿನ ರಸ ಆರೋಗ್ಯಕ್ಕೆ ಒಳ್ಳೆಯದು. ಕೇನ್ ಓ ಲಾ ವ್ಯವಸ್ಥಾಪಕ ನಿರ್ದೇಶಕ ಜಿ. ಶಿವಾನಂದ ರಾವ್ ರವರ ಕೆಲಸ ಮೆಚ್ಚುಗೆಗೆ ಅರ್ಹವಾದದು ಎಂದು ಗುರೂಜಿ ಹೇಳಿದರು.
ಈ ಸಮಾರಂಭದಲ್ಲಿ ಶಾಸಕ ರಾಮಲಿಂಗಾರೆಡ್ಡಿ, ಇಸ್ಕಾನ್ ನಿರ್ದೇಶಕ ತಿರುನಾರಾಯಣ ಅಯ್ಯಂಗಾರ್, ಎನ್.ಆರ್. ನಾರಾಯಣರಾವ್ ಮುಂತಾದ ಗಣ್ಯರು ಉಪಸ್ಥಿತರಿದ್ದರು.
(ದಟ್ಸ್ ಕನ್ನಡವಾರ್ತೆ)












Click it and Unblock the Notifications