ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪರಿಸರ ದಸರ : ಹಂಸಲೇಖ ಸಾರಥ್ಯದಿ ‘ಹಾಡಿನ ಹಬ್ಬ’

By Staff
|
Google Oneindia Kannada News

ಬೆಂಗಳೂರು : ಏ.1ರಂದು ನಗರದಲ್ಲಿ ‘ಪರಿಸರ ದಸರ’ ಉತ್ಸವ ನಡೆಯಲಿದೆ. ಇಲ್ಲಿ ಹಾಡುಗಳ ರಸದೌತಣವೂ ಇದೆ. ಎಸ್‌.ಬಿ.ಬಾಲಸುಬ್ರಹ್ಮಣ್ಯಂ, ಚಿತ್ರಾ ಮತ್ತಿತರ ಗಾಯಕರು ಕೇಳುಗರ ರಂಜಿಸಲಿದ್ದಾರೆ.

ಈ ಸಂದರ್ಭದಲ್ಲಿ ಅರಣ್ಯ ಸಂರಕ್ಷಣೆಯಲ್ಲಿ ಗಣನೀಯ ಸಾಧನೆಗೈದ ಆದಿಚುಂಚನಗಿರಿ ಶ್ರೀಗಳಿಗೆ, ನಿವಾರಣ ಸಂಸ್ಥೆಯ ‘ಸೇವಾ ಸೂರ್ಯ ’ ಪ್ರಶಸ್ತಿ ನೀಡಲಾಗುತ್ತದೆ ಎಂದು ಸುದ್ದಿಗೋಷ್ಠಿಯಲ್ಲಿ ಶಾಸಕ ಕೆ. ಚಂದ್ರಶೇಖರ ಹೇಳಿದ್ದಾರೆ.

ಹಂಸಲೇಖ ಸಂಸ್ಥಾಪನೆಯ ದೇಸೀ ವಿದ್ಯಾ ಸಂಸ್ಥೆ ಮತ್ತು ಜೀ ಕನ್ನಡ ಚಾನೆಲ್‌ ಜಂಟಿಯಾಗಿ ಪರಿಸರ ದಸರವನ್ನು ಹಮ್ಮಿಕೊಂಡಿವೆ. ನ್ಯಾಷನಲ್‌ ಕಾಲೇಜಿನ ಆವರಣದಲ್ಲಿ ನಡೆಯಲಿರುವ ಈ ಉತ್ಸವದಲ್ಲಿ , ಹಂಸಲೇಖ ಸಾರಥ್ಯದಲ್ಲಿ ಬೃಹತ್‌ ಹಾಡಿನ ಹಬ್ಬ ನಡೆಯಲಿದೆ.

ಏ.1ರ ಸಂಜೆ 6.30ಕ್ಕೆ ಜನಪದ ಹಾಡು-ಕುಣಿತದ ಕಾರ್ಯಕ್ರಮಗಳು ನಡೆಯಲಿದ್ದು, 400ಜನಪದ ಕಲಾವಿದರು, 20ಮಂದಿ ಹಿನ್ನೆಲೆ ಗಾಯಕರು ಉತ್ಸವಕ್ಕೆ ರಂಗು ತರಲಿದ್ದಾರೆ.

(ದಟ್ಸ್‌ಕನ್ನಡ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X