ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಪ್ಲಾಸ್ಟಿಕ್ ನಿರ್ಮೂಲನೆ ಕೆಲಸದಲ್ಲಿ ಕನ್ನಡಸೇನೆ!!!
ತುಮಕೂರು : ಕನ್ನಡ ಸೇನೆ ಕಾರ್ಯಕರ್ತರು ‘ಪ್ಲಾಸ್ಟಿಕ್ ರಹಿತ ಸುರಕ್ಷಿತ ಅರಣ್ಯ ಪ್ರದೇಶ’ ಎಂಬ ಚಳುವಳಿಯನ್ನು ಪ್ರಾರಂಭಿಸಿದ್ದಾರೆ.
ಗುರುವಾರ(ಜನವರಿ 25) ಕನ್ನಡ ಸೇನೆಯ ಕಾರ್ಯಕರ್ತರು, ನೂರಾರು ವಿದ್ಯಾರ್ಥಿಗಳು ದೇವರಾಯನ ದುರ್ಗ ಸುರಕ್ಷಿತ ಅರಣ್ಯ ಪ್ರದೇಶಕ್ಕೆ ಸೇರಿದ ಪ್ರಸಿದ್ಧ ಸ್ಥಳ ‘ನಾಮದ ಚಿಲುಮೆ’ ಯ ಸುತ್ತ ಮುತ್ತಲಿನ ಪ್ರದೇಶದಲ್ಲಿದ್ದ ಪ್ಲಾಸ್ಟಿಕ್ ತ್ಯಾಜ್ಯಗಳನ್ನು ಒಟ್ಟು ಮಾಡಿದರು. ಈ ಚಳುವಳಿಯನ್ನು ತುಮಕೂರು ನಗರವ್ಯಾಪ್ತಿಯಲ್ಲೂ ನಡೆಸುವುದಾಗಿ ಸೇನೆಯ ಕಾರ್ಯಕರ್ತರು ಹೇಳಿದರು.
ಇತ್ತೀಚೆಗೆ ಕಿಡಿಗೇಡಿಗಳ ಬೇಜವಾಬ್ದಾರಿಯಿಂದ ಇಲ್ಲಿನ ಅರಣ್ಯ ಪ್ರದೇಶದ ಸುಮಾರು 50 ಎಕರೆ ವೀಸ್ತೀರ್ಣದ ಭೂಮಿ ಬೆಂಕಿಗೆ ಅಹುತಿಯಾಗಿತ್ತು.
(ದಟ್ಸ್ ಕನ್ನಡ ವಾರ್ತೆ)
Comments
Story first published: Friday, January 26, 2007, 5:30 [IST]