ನಾಗೇಗೌಡ ನಿಧನ,‘ಜಾನಪದ ಲೋಕ’ ಬಿಕೊ...
ನಾಗೇಗೌಡ
ನಿಧನ,‘ಜಾನಪದ
ಲೋಕ’
ಬಿಕೊ...
‘ದೊಡ್ಡಮನೆ’ಯ
ಎಚ್ಚೆನ್ನೆಲ್
ಹೋದರು,
ಆದರೆ
ಅವರ
ಸಾಧನೆ
ಸದಾ
ಹಸಿರು!
ಗುರುವಾರ ರಾತ್ರಿತಮ್ಮ ಸ್ವಗೃಹದಲ್ಲಿ ಅವರು ಹೃದಯಾಘಾತದಿಂದ ಕೊನೆ ಉಸಿರೆಳೆದರು. ಶುಕ್ರವಾರ ಅವರ ಅಂತ್ಯಕ್ರಿಯೆ, ಆಮೂಲಕ ಅವರಿಗೆ ಕನ್ನಡಿಗರ ಕಂಬನಿಯ ಬೀಳ್ಗೊಡುಗೆ. ಪಂಪ, ನಾಡೋಜ ಪ್ರಶಸ್ತಿ ಪುರಸ್ಕೃತ ಹಿರಿಯ ಚೇತನ ಡಾ. ಎಚ್.ಎಲ್. ನಾಗೇಗೌಡರ ಸವಿ ನೆನಪುಗಳಷ್ಟೇ ಈಗ ನಮ್ಮೊಂದಿಗೆ.
‘ವೆಲಿಯನ್ರ ಗಿರಿಜನ ಪ್ರಪಂಚ’ ಮತ್ತು ‘ಕೆನಿಲ್ ವರ್ಥ್ ’ಭಾಷಾಂತರ ಕೃತಿಗಳು,‘ಸೊನ್ನೆಯಿಂದ ಸೊನ್ನೆಗೆ’,‘ಬೆಟ್ಟದಿಂದ ಬಟ್ಟಲಿಗೆ’,‘ಸೋಬಾನೆ ಚಿಕ್ಕಮ್ಮನ ಪದಗಳು’,‘ ಕರ್ನಾಟಕ ಜಾನಪದ ಕಥೆಗಳು’ ಸೇರಿದಂತೆ ಕಾದಂಬರಿ, ಲಲಿತ ಪ್ರಬಂಧ, ಪ್ರವಾಸ ಸಾಹಿತ್ಯ , ಆತ್ಮಕಥೆ ಸೇರಿದಂತೆ ವಿವಿಧ ಸಾಹಿತ್ಯ ಪ್ರಕಾರಗಳನ್ನೂ ಜಾನಪದ ಲೋಕದಲ್ಲಿ ಕೃಷಿ ಮಾಡಿದ್ದರು.
ಅಲ್ಲದೆ ಕರ್ನಾಟಕ ಜಾನಪದ ಮತ್ತು ಯಕ್ಷಗಾನ ಅಕಾಡೆಮಿಯ ಮೊದಲ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದರು. ಇತ್ತೀಚಿನ ದಿನಗಳಲ್ಲಿ ನಗರದ ಎಂ.ಎಸ್. ರಾಮಯ್ಯ ಕಾಲೇಜಿನಲ್ಲಿ ಜಾನಪದ ಸ್ಟುಡಿಯೋ ನಿರ್ಮಾಣದಲ್ಲಿ ಅವರು ತಮ್ಮನ್ನು ತೋಡಗಿಸಿಕೊಂಡಿದರು.
(ಇನ್ಫೋ ವಾರ್ತೆ)
ಮುಖಪುಟ / ವಾರ್ತೆಗಳು