ರೈತರ ಸಾಲ ವಸೂಲಿ ಮಾಡುವ ಕಠಿಣಕ್ರಮ ಮತ್ತು ಆಸ್ತಿ ಜಪ್ತಿಗೆ ಬ್ರೇಕು

ರೈತರ ಸಾಲ ವಸೂಲಿ ಮಾಡುವ ಕಠಿಣಕ್ರಮ ಮತ್ತು ಆಸ್ತಿ ಜಪ್ತಿಗೆ ಬ್ರೇಕು
ರೈತರ ಮೇಲೆ ದೌರ್ಜನ್ಯವೆಸುಗುವ ಬ್ಯಾಂಕ್‌ ಸಿಬ್ಬಂದಿ ಮೇಲೆ ಕ್ರಮಕ್ಕೆ ಆಗ್ರಹ

ಬೆಂಗಳೂರು : ಡಿಸಿಸಿ ಬ್ಯಾಂಕ್‌ ಮತ್ತು ಸಹಕಾರ ಸಂಸ್ಥೆಗಳಿಗೆ ರಾಜ್ಯ ಸರಕಾರ ನಿರ್ದೇಶನ ನೀಡಿದ್ದು, ರೈತರ ಸಾಲವನ್ನು ವಸೂಲಿ ಮಾಡಲು ಒತ್ತಾಯಪೂರ್ವಕ ಕ್ರಮಗಳನ್ನು ಅನುಸರಿಸದಂತೆ ಎಚ್ಚರಿಸಿದೆ. ಸಾಲದ ಮರುಪಾವತಿಗೆ ರೈತರ ಆಸ್ತಿಯನ್ನು ಜಪ್ತಿ ಮಾಡಬಾರದೆಂದು ಸ್ಪಷ್ಟ ಸೂಚನೆ ನೀಡಲಾಗುವುದು ಎಂದು ಉಪಮುಖ್ಯಮಂತ್ರಿ ಮತ್ತು ಹಣಕಾಸು ಸಚಿವ ಸಿದ್ಧರಾಮಯ್ಯ ಹೇಳಿದರು.

ಮಂಗಳವಾರ(ಜ.25) ವಿಧಾನಸಭೆಯ ಅಧಿವೇಶನದಲ್ಲಿ ಈ ವಿಚಾರವನ್ನು ಪ್ರಸ್ತಾಪಿಸಿದ ಜೆಡಿ(ಯು)ನ ಜೆ.ಸಿ. ಮಾಧುಸ್ವಾಮಿ ಪ್ರಶ್ನೆಗೆ ಉತ್ತರಿಸಿದ ಸಿದ್ಧರಾಮಯ್ಯ, ಸರಕಾರ ಈಗಾಗಲೇ ಸುತ್ತೋಲೆಯನ್ನು ಸಂಬಂಧಿಸಿದ ಬ್ಯಾಂಕ್‌ಗಳಿಗೆ ಮತ್ತು ಸಹಕಾರ ಸಂಘಗಳಿಗೆ ಕಳುಹಿಸಿದೆ ಎಂದರು.

ಸರಕಾರದ ಸೂಚನೆ ಪಾಲಿಸದೇ ದೌರ್ಜನ್ಯವೆಸಗುವ ಸಹಕಾರಿ ಸಂಘ ಹಾಗೂ ಡಿಸಿಸಿ ಬ್ಯಾಂಕ್‌ ನೌಕರರ ಮೇಲೆ ಕಟ್ಟುನಿಟ್ಟಿನ ಕ್ರಮ ಜರುಗಿಸುವುವಂತೆ ಬಿಜೆಪಿಯ ಜಗದೀಶ್‌ ಶೆಟ್ಟರ್‌, ಗೋವಿಂದ ಕಾರಜೋಳ್‌, ವಿಶ್ವೇಶ್ವರ ಹೆಗಡೆ, ಜಿ.ವಿ.ಶ್ರೀರಾಮರೆಡ್ಡಿ( ಸಿಪಿಎಂ) ಮತ್ತಿತರರು ಆಗ್ರಹಿಸಿದರು.

(ಪಿಟಿಐ)

ಮುಖಪುಟ / ಧರ್ಮ-ಕಾರಣ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+