ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮುಖ್ಯಮಂತ್ರಿ ವೈಎಸ್‌ಆರ್‌ ಪುತ್ರನ ಹೆಸರು ಎಫ್‌ಐಆರ್‌ನಲ್ಲಿ ದಾಖಲು

By Staff
|
Google Oneindia Kannada News

ಮುಖ್ಯಮಂತ್ರಿ ವೈಎಸ್‌ಆರ್‌ ಪುತ್ರನ ಹೆಸರು ಎಫ್‌ಐಆರ್‌ನಲ್ಲಿ ದಾಖಲು
ರಾಜ್ಯ ಸರಕಾರವನ್ನು ಕೂಡಲೇ ವಜಾ ಮಾಡಿ-ಚಂದ್ರಬಾಬುನಾಯ್ಡು ಆಗ್ರಹ

ಹೈದರಾಬಾದ್‌: ತೆಲುಗು ದೇಶಂ ಪಕ್ಷದ ಶಾಸಕ ಪೆರಿಟಾಲ ರವಿ ಕೊಲೆಗೆ ಸಂಬಂಧಿಸಿದಂತೆ ಮುಖ್ಯಮಂತ್ರಿ ವೈ.ಎಸ್‌.ರಾಜಶೇಖರ್‌ರೆಡ್ಡಿ ಅವರ ಪುತ್ರ ಜಗನ್ಮೋಹನ್‌ ರೆಡ್ಡಿ, ಪಂಚಾಯತ್‌ ರಾಜ್‌ ಸಚಿವ ಜೆ.ಸಿ.ದಿವಾಕರ್‌ ರೆಡ್ಡಿ ಮತ್ತು ಹಿರಿಯ ಪೋಲೀಸ್‌ ಅಧಿಕಾರಿಯ ಹೆಸರುಗಳನ್ನು ಆರೋಪಿಗಳೆಂದು ಮೊದಲ ತನಿಖಾ ವರದಿ(ಎಫ್‌ಐಆರ್‌)ಯಲ್ಲಿ ಪೋಲೀಸರು ದಾಖಲಿಸಿದ್ದಾರೆ.

ಹತ್ಯೆಯಲ್ಲಿ ಮುಖ್ಯಮಂತ್ರಿ ಮತ್ತು ಅವರ ಪುತ್ರರ ನೇರ ಕೈವಾಡವಿದೆ. ಈ ಘಟನೆಯ ಹಿನ್ನೆಲೆಯಲ್ಲಿ ರಾಜ್ಯ ಸರಕಾರವನ್ನು ವಜಾ ಮಾಡಬೇಕೆಂದು ಮಾಜಿ ಮುಖ್ಯಮಂತ್ರಿಚಂದ್ರಬಾಬುನಾಯ್ಡು ಆಗ್ರಹಿಸಿದ್ದಾರೆ. ಸೋಮವಾರ ದುಷ್ಕರ್ಮಿಗಳ ಗುಂಡಿಗೆ ಪೆರಿಟಾಲ ರವಿ ಬಲಿಯಾಗಿದ್ದರು.

ರವಿ ಜನ್ಮಸ್ಥಳ ವೆಂಕಟಾಪುರದಲ್ಲಿ ಮಂಗಳವಾರ ನಡೆದ ಅಂತ್ಯಕ್ರಿಯೆಯಲ್ಲಿ ಚಂದ್ರಬಾಬು ನಾಯ್ಡು ಮತ್ತು ಟಿಡಿಪಿ ಪಕ್ಷದ ಮುಖಂಡರು ಪಾಲ್ಗೊಂಡಿದ್ದರು.

ಬಂದ್‌: ತೆಲುಗು ದೇಶಂ ಕರೆ ನೀಡಿದ್ದ ಬಂದ್‌ಗೆ ಆಂಧ್ರಪ್ರದೇಶದಲ್ಲಿ ಪೂರಕ ಪ್ರತಿಕ್ರಿಯೆ ಕಂಡು ಬಂದಿದೆ.

(ಏಜನ್ಸೀಸ್‌)

ಮುಖಪುಟ / ವಾರ್ತೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X