Get Updates
Get notified of breaking news, exclusive insights, and must-see stories!

ಕರ್ನಾಟಕ ಸುವರ್ಣ ಜಯಂತಿ ಅದ್ಧೂರಿ ಮಹೋತ್ಸವಕ್ಕೆ ಬೀಜ ಬಿತ್ತನೆ

ಕರ್ನಾಟಕ ಸುವರ್ಣ ಜಯಂತಿ ಅದ್ಧೂರಿ ಮಹೋತ್ಸವಕ್ಕೆ ಬೀಜ ಬಿತ್ತನೆ
2006 ರಲ್ಲಿ ವಿಶ್ವ ಕನ್ನಡ ಸಮ್ಮೇಳನ, ನಾಡಿನೆಲ್ಲೆಡೆ ಕನ್ನ್ನಡದ ಡಿಂಡಿಮ

ಬೆಂಗಳೂರು : 2006-ಕರ್ನಾಟಕ ಏಕೀಕರಣದ ಸುವರ್ಣ ಸಂಭ್ರಮ. ಸುಮಾರು 50 ಕೋಟಿ ರೂ. ಅಂದಾಜಿನಲ್ಲಿ ಕರ್ನಾಟಕ ಸುವರ್ಣ ಜಯಂತಿ ಮಹೋತ್ಸವವನ್ನು ಆಚರಿಸಲು ಸರಕಾರ ನಿರ್ಧರಿಸಿದೆ.

ಕಂದಾಯ ಸಚಿವ ಎಂ.ಪಿ.ಪ್ರಕಾಶ್‌ ಅಧ್ಯಕ್ಷತೆಯಲ್ಲಿ ನಡೆದ ಸಂಪುಟ ಸಭೆಯಲ್ಲಿ, ವಿಶ್ವಕನ್ನಡ ಸಮ್ಮೇಳನವನ್ನು ಬೆಂಗಳೂರು ಸೇರಿದಂತೆ ಮೈಸೂರು, ಬೆಳಗಾವಿ, ಧಾರವಾಡ ಅಥವಾ ಹಂಪಿಯಲ್ಲಿ ನಡೆಸಲು ತೀರ್ಮಾನಿಸಲಾಯಿತು.

ವಿಕಾಸ ಸೌಧನನ್ನು ಸುವರ್ಣ ವಿಕಾಸಸೌಧ ಎಂದು ಮರುನಾಮಕರಣ ಮಾಡುವುದು, ಹಳೇ ಕಾರಾಗೃಹ ಕಟ್ಟಡ ಇರುವ 17 ಎಕರೆ ಜಾಗದಲ್ಲಿ ಅತ್ಯಂತ ಎತ್ತರದ ಗೋಪುರ ಹಾಗೂ ಉದ್ಯಾನ ನಿರ್ಮಿಸಿ ಅದಕ್ಕೆ ಸುವರ್ಣ ಕರ್ನಾಟಕ ಉದ್ಯಾನ ಎಂದು ಹೆಸರಿಡುವುದು, ಧಾರವಾಡ, ಗುಲ್ಪರ್ಗ, ಶಿವಮೊಗ್ಗ, ಬೆಂಗಳೂರು, ಬಳ್ಳಾರಿ, ಕೋಲಾರದಲ್ಲಿ ಸುವರ್ಣ ಸಾಂಸ್ಕೃತಿಕ ಸಮುಚ್ಛಯ ನಿರ್ಮಾಣಕ್ಕಾಗಿ ಎಂಟು ಕೋಟಿ ರೂಪಾಯಿ ಅನುದಾನ ಕೇಳಲು ಸಭೆ ನಿರ್ಣಯಿಸಿತು.

ನಾನಾ ಕಾರ್ಯಕ್ರಮ: ಏಕೀಕರಣ ನಂತರ ಕರ್ನಾಟಕದ ಸಾಂಸ್ಕೃತಿಕ, ವೈಜ್ಞಾನಿಕ,ಭೌತಿಕ ಮತ್ತಿತರ ಕ್ಷೇತ್ರಗಳ ಪ್ರಗತಿಯ ಹಿನ್ನೋಟದ ಕುರಿತಾಗಿ ಸಂಗೀತ, ನೃತ್ಯ, ನಾಟಕಗಳನ್ನು ಸಂಯೋಜಿಸುವ ಬೃಹತ್‌ ಯೋಜನೆಗೆ ಐದು ಲಕ್ಷ ರೂಪಾಯಿ, ಕನ್ನಡದ 50 ಶ್ರೇಷ್ಠ ಗ್ರಂಥಗಳ ಪ್ರಕಟನೆಗೆ 50 ಲಕ್ಷ ರೂಪಾಯಿ, ಸಂಸ್ಮರಣ ಗ್ರಂಥ ಪ್ರಕಟನೆಗೆ 50 ಲಕ್ಷ , ಏಕೀಕರಣಕ್ಕಾಗಿ ಶ್ರಮಿಸಿದ ಮಹನೀಯರ ಸಾಕ್ಷ್ಯಚಿತ್ರಗಳಿಗಳ ನಿರ್ಮಾಣಕ್ಕೆ ಹತ್ತು ಲಕ್ಷ ರೂಪಾಯಿ ಮೀಸಲಿಡಲು ಸಭೆ ತೀರ್ಮಾನಿಸಿತು.

(ಇನ್ಫೋ ವಾರ್ತೆ)

ಮುಖಪುಟ / ಧರ್ಮ-ಕಾರಣ

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+