ಕಂಚಿಶ್ರೀ ಕ್ಷೇಮ : ಪಲ್ಸ್‌ ರೇಟ್‌ ನಿಮಿಷಕ್ಕೆ 90, ರಕ್ತದೊತ್ತಡ 130/80

ಕಂಚಿಶ್ರೀ ಕ್ಷೇಮ : ಪಲ್ಸ್‌ ರೇಟ್‌ ನಿಮಿಷಕ್ಕೆ 90, ರಕ್ತದೊತ್ತಡ 130/80
ಸ್ವಾಮೀಜಿ ಹಾಗೂ ಮುರಳಿ ಮನೋಹರ ಜೋಷಿ ಭೇಟಿಗೆ ರಂಗ ಸಿದ್ಧತೆ

ವೆಲ್ಲೂರು : ಕಂಚಿಶ್ರೀಗಳ ಬಂಧನದ ಬಗ್ಗೆ ದೇಶದಾದ್ಯಂತ ಆಕ್ರೋಶದ ಅಲೆಗಳು ಒಂದೆಡೆ ರೂಪುಗೊಳ್ಳುತ್ತಿದ್ದರೆ, ಇನ್ನೊಂದೆಡೆ ಜಾಮೀನು ಪಡೆಯುವ ಪ್ರಕ್ರಿಯೆಗಳೂ ಚಾಲ್ತಿಯಲ್ಲಿವೆ. ಈ ನಡುವೆ ಕಂಚಿಶ್ರೀಗಳ ಬಂಧನದ ಪ್ರಕರಣವನ್ನು ಸಿಬಿಐಗೆ ಒಪ್ಪಿಸಬೇಕೆಂದು ಕಂಚಿಮಠ ಸರ್ಕಾರವನ್ನು ಒತ್ತಾಯಿಸಿದೆ.

ಇದೆಲ್ಲಾ ಸರಿ. ಅತ್ತ ಜೈಲಿನಲ್ಲಿರುವ ಸ್ವಾಮೀಜಿ ಹೇಗಿದ್ದಾರೆ? ಮಧುಮೇಹದಿಂದ ಬಳಲುತ್ತಿರುವ 71 ವರ್ಷದ ವೃದ್ಧಜೀವದ ಆರೋಗ್ಯ ಹೇಗಿದೆ?
ಚಿಂತೆಗೆ ಅಗತ್ಯವಿಲ್ಲ ಎನ್ನುತ್ತಾರೆ ವೆಲ್ಲೂರು ಕಾರಾಗೃಹದ ಅಧೀಕ್ಷಕ ರಾಮಚಂದ್ರನ್‌.

ಕಂಚಿ ಶಂಕರಾಚಾರ್ಯ ಜಯೇಂದ್ರ ಸರಸ್ವತಿಯವರ ಆರೋಗ್ಯದ ಬಗ್ಗೆ ಆತಂಕಕ್ಕೆ ಕಾರಣವಿಲ್ಲ . ಅವರ ಪಲ್ಸ್‌ ರೇಟ್‌ ನಿಮಿಷಕ್ಕೆ 90ರಷ್ಟಿದೆ. ರಕ್ತದೊತ್ತಡ 130/80ರಷ್ಟಿದೆ. ಹೃದಯ ಬಡಿತವೂ ಸರಿಯಾಗಿದೆ ಎಂದು ವೈದ್ಯರ ವರದಿಗಳನ್ನುಲ್ಲೇಖಿಸಿ ರಾಮಚಂದ್ರನ್‌ ನ.15ರ ಸೋಮವಾರ ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ.

ಶಂಕರಾಚಾರ್ಯರು ಬೆಳಗಿನ ಉಪಾಹಾರಕ್ಕೆ ರಾಗಿ ಗಂಜಿ ಹಾಗೂ ಹಾಲು ಉಪಯೋಗಿಸುತ್ತಿದ್ದಾರೆ. ಮಧ್ಯಾಹ್ನದ ಊಟಕ್ಕೆ ಮೊಸರನ್ನ . ರಾತ್ರಿಯ ಊಟಕ್ಕೆ ಚಪಾತಿ ಅಥವಾ ಪೂರಿಗಳನ್ನು ಬಳಸುತ್ತಿದ್ದಾರೆ. ಮಧುಮೇಹಿಗಳಾದ ಸ್ವಾಮೀಜಿ ನಿಯಮಿತವಾಗಿ ಔಷಧಿಗಳನ್ನೂ ಸೇವಿಸುತ್ತಿದ್ದಾರೆ ಎಂದು ರಾಮಚಂದ್ರನ್‌ ಹೇಳಿದ್ದಾರೆ.

ಸ್ವಾಮೀಜಿ ಭೇಟಿಗೆ ಜೋಷಿ ಕಾತರ : ಕಂಚಿಶ್ರೀಗಳನ್ನು ಭೇಟಿ ಮಾಡಲು ಬಿಜೆಪಿಯ ಮಾಜಿ ಅಧ್ಯಕ್ಷ ಮುರಳಿ ಮನೋಹರ ಜೋಷಿ ಕಾತರರಾಗಿದ್ದು , ನ.16ರ ಮಂಗಳವಾರ ್ಫಶ್ರೀಗಳನ್ನು ಜೋಷಿ ಭೇಟಿ ಮಾಡುವರು. ಭೇಟಿಯ ಕುರಿತು ಕಂಚಿಮಠ ಹಾಗೂ ಕಾನೂನು ಕಡೆಯಿಂದ ಜೋಷಿಯವರಿಗೆ ಹಸಿರು ನಿಶಾನೆ ದೊರೆತಿದೆ.

(ಏಜನ್ಸೀಸ್‌)

ಮುಖಪುಟ / ವಾರ್ತೆಗಳು

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+