ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

‘ಶಿಕ್ಷಣ- ಕೃಷಿ ಕ್ಷೇತ್ರಗಳ ಉದಾರೀಕರಣದಿಂದ ಸರ್ವರಿಗು ಸಮಪಾಲು’

By Staff
|
Google Oneindia Kannada News

‘ಶಿಕ್ಷಣ- ಕೃಷಿ ಕ್ಷೇತ್ರಗಳ ಉದಾರೀಕರಣದಿಂದ ಸರ್ವರಿಗು ಸಮಪಾಲು’
ಭಾರತದಲ್ಲಿ ಪ್ರತಿವರ್ಷ 5.9 ಕೋಟಿ ಮಕ್ಕಳು ಹೈಸ್ಕೂಲು ಮುನ್ನವೇ ಶಾಲೆಯಿಂದ ಔಟ್‌

ಬೆಂಗಳೂರು : ಕೃಷಿ ಹಾಗೂ ಶಿಕ್ಷಣ ಕ್ಷೇತ್ರಗಳ ಉದಾರೀಕರಣ ಅತ್ಯಗತ್ಯವಾಗಿದ್ದು , ಇದರಿಂದಾಗಿ ಸರ್ವರಿಗೂ ಸಮಾನ ಅವಕಾಶಗಳು ದೊರೆಯುವಂತಾಗುತ್ತದೆ ಎಂದು ಪತ್ರಕರ್ತ ದಿಲೀಪ್‌ ಠಾಕೂರ್‌ ಅಭಿಪ್ರಾಯಪಟ್ಟರು.

ಕೃಷಿ ಹಾಗೂ ಶಿಕ್ಷಣ ಕ್ಷೇತ್ರಗಳ ಉದಾರೀಕರಣ ಅತ್ಯಗತ್ಯ. ಅದೇರೀತಿ ಸಾಮಾನ್ಯ ಶಾಲಾ ಪದ್ಧತಿಯನ್ನು ಅನುಷ್ಠಾನಕ್ಕೆ ತರುವ ಮೂಲಕ ಸಮಾನತೆಯನ್ನು ಸಾಧಿಸಬಹುದು ಎಂದು ದಿಲೀಪ್‌ ಠಾಕೂರ್‌ (ಎಜುಕೇಷನ್‌ ವರ್ಲ್ಡ್‌ ಪತ್ರಿಕೆ ಪ್ರಧಾನ ಸಂಪಾದಕ) ಹೇಳಿದರು. ಅವರು ಬೆಂಗಳೂರಿನಲ್ಲಿ ಬುಧವಾರ ನಡೆದ ಪತ್ರಕರ್ತರ ಕಮ್ಮಟವೊಂದರಲ್ಲಿ ಮಾತನಾಡುತ್ತಿದ್ದರು.

ಅಮೇರಿಕಾ ಹಾಗೂ ಬ್ರಿಟನ್‌ಗಳಲ್ಲಿ ಶೇ.90 ಮಂದಿ ಸರ್ಕಾರಿ ಶಾಲೆಗಳಿಗೆ ಮಕ್ಕಳನ್ನು ಕಳುಹಿಸುತ್ತ್ತಾರೆ. ಆದರೆ ಭಾರತದಲ್ಲಿ ಭದ್ರತೆಯಿಲ್ಲದ ಮಧ್ಯಮ ವರ್ಗದ ಕೆಲವು ಕುಟುಂಬಗಳು ಮಾತ್ರ ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗೆ ಕಳುಹಿಸುತ್ತವೆ. ರಾಜ್ಯ ಸರ್ಕಾರಗಳ ಅಡಿಯಲ್ಲಿ ಸರ್ಕಾರಿ ಶಾಲೆಗಳು ಸಂಪೂರ್ಣ ಹಾಳಾಗಿವೆ ಎಂದರು.

ದೇಶದ ಪ್ರಗತಿಯಲ್ಲಿ ಶಿಕ್ಷಣದ ಪಾತ್ರ ಮಹತ್ವದ್ದಾಗಿದೆ. ಆದರೆ ಭಾರತದಲ್ಲಿ ಪ್ರತಿವರ್ಷ 5.9 ಕೋಟಿ ಮಕ್ಕಳು ಹೈಸ್ಕೂಲು ಹೊಸ್ತಿಲು ಮುಟ್ಟುವ ಮುನ್ನವೇ ಶಾಲೆಗಳಿಂದ ಹೊರಬೀಳುತ್ತಿದ್ದಾರೆ ಎಂದು ದಿಲೀಪ್‌ ಠಾಕೂರ್‌ ವಿಷಾದಿಸಿದರು.

(ಪಿಟಿಐ)

ಮುಖಪುಟ / ವಾರ್ತೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X