ಕಾಲೇಜುಗಳಿಗೆ ಸ್ವಾಯತ್ತತೆ, ಪರೀಕ್ಷಾಪದ್ಧತಿ ಬದಲಾಗಲಿ -ಕಾರ್ಯಪಡೆ
ಕಾಲೇಜುಗಳಿಗೆ
ಸ್ವಾಯತ್ತತೆ,
ಪರೀಕ್ಷಾಪದ್ಧತಿ
ಬದಲಾಗಲಿ
-ಕಾರ್ಯಪಡೆ
ಪದವಿಯ
ಮೊದಲೆರಡು
ವರ್ಷಗಳಲ್ಲಿ
ಆಂತರಿಕ
ಪರೀಕ್ಷೆಗಳು
ಸಾಕು
ಯೋಜನಾ ಆಯೋಗದ ಅಧ್ಯಕ್ಷ ಎಂ.ಆರ್.ಶ್ರೀನಿವಾಸನ್ ನೇತೃತ್ವದ ಕಾರ್ಯಪಡೆ ತನ್ನ ಅಂತಿಮ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿದೆ. ಈ ವರದಿಯನ್ನು ಶೀಘ್ರವೇ ಸಂಪುಟ ಸಭೆಯ ಮುಂದಿಡಲಾಗುವುದು. ವರದಿಯಲ್ಲಿನ ಶಿಫಾರಸ್ಸುಗಳನ್ನು ಅನುಷ್ಠಾನಕ್ಕೆ ತರಲು ಸಂಪುಟ ಉಪ ಸಮಿತಿ ರಚಿಸಲಾಗುವುದು ಎಂದು ಮುಖ್ಯಮಂತ್ರಿ ಎನ್. ಧರ್ಮಸಿಂಗ್ ತಿಳಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಶ್ರೀನಿವಾಸನ್- ದೂರಶಿಕ್ಷಣವನ್ನು ಉತ್ತಮಗೊಳಿಸಬೇಕಾದ ಹಾಗೂ ವ್ಯಾಪಕಗೊಳಿಸಬೇಕಾದ ಅಗತ್ಯವನ್ನು ಒತ್ತಿ ಹೇಳಿದರು.
ಕಾರ್ಯಪಡೆ ವರದಿ ಸೆಮಿಸ್ಟರ್ ಪದ್ಧತಿ ಹಾಗೂ ಶ್ರೇಣಿ ಪದ್ಧತಿಯನ್ನು ಸಮರ್ಥಿಸಿದ್ದು , ಏಕರೂಪದ ಪಠ್ಯಕ್ರಮವನ್ನು ವಿರೋಧಿಸಿದೆ. ಉತ್ತಮ ಪಠ್ಯಕ್ರಮವನ್ನು ಆಯ್ದುಕೊಳ್ಳಲು ವಿದ್ಯಾರ್ಥಿಗಳಿಗೆ ಅವಕಾಶವಿರಬೇಕು ಎಂದೂ ಸಮಿತಿ ಹೇಳಿದೆ.
ಪದವಿಯ ಮೊದಲೆರಡು ವರ್ಷಗಳಲ್ಲಿ ಆಂತರಿಕ ಪರೀಕ್ಷೆಗಳು ಸಾಕು. ಕೊನೆಯ ವರ್ಷದಲ್ಲಿ ವಿಶ್ವವಿದ್ಯಾಲಯದ ಪರೀಕ್ಷೆಗಳು ಇದ್ದರೆ ಸಾಕು ಎಂದಿರುವ ಕಾರ್ಯಪಡೆ ವರದಿ- ಪರೀಕ್ಷಾ ಪದ್ಧತಿಯಲ್ಲಿ ಸುಧಾರಣೆಗೆ ಸಾಕಷ್ಟು ಅವಕಾಶಗಳಿರುವುದಾಗಿ ಹೇಳಿದೆ. ದೈಹಿಕ ಅಸಾಮರ್ಥ್ಯ ಹೊಂದಿರುವ ವಿದ್ಯಾರ್ಥಿಗಳಿಗೆ ಉನ್ನತ ವ್ಯಾಸಂಗದಲ್ಲಿ ವಿದ್ಯಾರ್ಥಿ ವೇತನ ನೀಡಬೇಕು ಎಂದೂ ವರದಿ ಹೇಳಿದೆ.
(ಪಿಟಿಐ)
ಮುಖಪುಟ / ಧರ್ಮ-ಕಾರಣ