Get Updates
Get notified of breaking news, exclusive insights, and must-see stories!

ಗಣೇಶ ಬರುತ್ತಿದ್ದಾನೆ, ಹುಷಾರಾಗಿರಿ ! ಪೊಲೀಸ್‌ಗೆ ಧರ್ಮ್‌ ತಾಕೀತು

ಗಣೇಶ ಬರುತ್ತಿದ್ದಾನೆ, ಹುಷಾರಾಗಿರಿ ! ಪೊಲೀಸ್‌ಗೆ ಧರ್ಮ್‌ ತಾಕೀತು
ನಕ್ಸಲೀಯರಿಗೆ ಮೂಗುದಾರ ಹಾಕಲು ಮೂತನ ಕಾರ್ಯತಂತ್ರ

ಬೆಂಗಳೂರು: ರಾಜ್ಯದ ವಿವಿಧ ಭಾಗಗಳಲ್ಲಿ ಇತ್ತೀಚಿಗೆ ಸಂಭವಿಸಿದ ವಿವಿಧ ಕೋಮು ಸಂಘರ್ಷಗಳ ಹಿನ್ನೆಲೆಯಲ್ಲಿ ಸಾಮರಸ್ಯ ಕಾಪಾಡಲು ಸರಕಾರ ಸಜ್ಜಾಗಿದೆ. ಮುಖ್ಯಮಂತ್ರಿ ಎನ್‌.ಧರ್ಮಸಿಂಗ್‌ ರಾಜ್ಯದಲ್ಲಿ ನ ಕೋಮು ಗಲಭೆಗಳ ನಿಯಂತ್ರಿಸಿ ಕಾನೂನು ಸುವ್ಯವಸ್ಥೆ ಕಾಪಾಡಲು ಪೋಲಿಸರಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.

ಬುಧವಾರ ನಡೆದ ಉನ್ನತಮಟ್ಟದ ಗೃಹ ಇಲಾಖೆಯ ಸಭೆಯಲ್ಲಿ ಭಾಗವಹಿಸಿದ್ದ ಅವರು, ಕೋಮು ಸಂಘರ್ಷಗಳ ತಪ್ಪಿಸಲು ಅಗತ್ಯ ಕ್ರಮಗಳ ಬಗೆಗೆ ಚರ್ಚಿಸಿದರು. ರಾಜ್ಯದಲ್ಲಿ ಬೆಳಗಾವಿ ಹಾಗೂ ಯಡಿಯೂರಿನಲ್ಲಿ ನಡೆದಂಥ ಅಹಿತಕರ ಘಟನೆಗಳು

ಮತ್ತೆ ಮರುಕಳಿಸದಂತೆ ಎಚ್ಚರವಹಿಸಲು ಸೂಚಿಸಿದರು.

ಸೂಕ್ಷ್ಮ ಪ್ರದೇಶಗಳತ್ತ ಪೋಲೀಸರು ಹದ್ದಿನ ಕಣ್ಣಿನಿಂದ ಗಮನಿಸಬೇಕಾಗಿದೆ. ಸಮಾಜ ವಿದ್ರೋಹಿಗಳ ನಿಯಂತ್ರಣಕ್ಕೆ ಶ್ರಮಿಸಬೇಕು. ಮುಂದಿನ ತಿಂಗಳು ಗಣೇಶನ ಹಬ್ಬವಿದ್ದು ಅಹಿತಕರ ಘಟನೆಗಳಾಗದಂತೆ ಮುಂಜಾಗ್ರತೆ ವಹಿಸಲು ಮುಖ್ಯಮಂತ್ರಿ ಸೂಚಿಸಿದರು.

ಮಲೆನಾಡಿನ ಚಿಕ್ಕಮಗಳೂರು ಮತ್ತಿತರ ಪ್ರದೇಶಗಳಲ್ಲಿ ನಕ್ಸಲೀಯರ ಚಟುವಟಿಕೆಗಳಿಗೆ ಕಡಿವಾಣ ಹಾಕಲು ಹೊಸ ಕಾರ್ಯತಂತ್ರ ಅನುಸರಿಸಲು ಸಭೆಯಲ್ಲಿ ನಿರ್ಧರಿಸಲಾಯಿತು.

ಸಭೆಯಲ್ಲಿ ಹಿರಿಯ ಪೋಲೀಸ್‌ ಅಧಿಕಾರಿಗಳಾದ ದತ್‌, ವಿಜಯ್‌ ಗೋರೆ, ಡಿಜಿಪಿ ಎಸ್‌.ಎನ್‌.ಬೋರ್ಕರ್‌, ಹೆಚ್ಚುವರಿ ಡಿಜಿಪಿ ಟಿ.ಸುಭಾಷ್‌ ಭರಣಿ ಮತ್ತಿತರ ಅಧಿಕಾರಿಗಳು ಭಾಗವಹಿಸಿದ್ದರು.

(ಪಿಟಿಐ)

ಮುಖಪುಟ / ಧರ್ಮ-ಕಾರಣ

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+