Get Updates
Get notified of breaking news, exclusive insights, and must-see stories!

ನಿರುದ್ಯೋಗ ಭತ್ಯೆಕೊಡಿ! ಸದನದಿ ಗದ್ದಲವೆಬ್ಬಿಸಿದ ಇಬ್ಬರು ಯುವಕರು

ನಿರುದ್ಯೋಗ ಭತ್ಯೆಕೊಡಿ! ಸದನದಿ ಗದ್ದಲವೆಬ್ಬಿಸಿದ ಇಬ್ಬರು ಯುವಕರು
ಅನಿರೀಕ್ಷಿತ ಘಟನೆಗೆ ಸಾಕ್ಷಿಯಾದ ವಿಧಾನಸಭೆ

ಬೆಂಗಳೂರು : ಅಧಿಕಾರಕ್ಕೆ ಬಂದಲ್ಲಿ ನಿರುದ್ಯೋಗ ಭತ್ಯೆ ನೀಡುವುದಾಗಿ ಚುನಾವಣಾ ಸಮಯದಲ್ಲಿ ಕಾಂಗ್ರೆಸ್‌ ನೀಡಿದ ಭರವಸೆ ಏನಾಯಿತು ?

ಪ್ರಣಾಳಿಕೆಯಲ್ಲಿ ಪ್ರಸ್ತಾಪಿಸಿದ ವಿಷಯವನ್ನು ಮರೆತಿದ್ದ ಕಾಂಗ್ರೆಸ್‌ ನಾಯಕರಿಗೆ ನಿರುದ್ಯೋಗ ಭತ್ಯೆಯ ವಿಷಯವನ್ನು ಜು.21ರ ಬುಧವಾರ ವಿಧಾನಸಭೆಯಲ್ಲಿ ನೆನಪು ಮಾಡಿಕೊಡಲಾಯಿತು. ನೆನಪಿಸಿದವರು ಪ್ರತಿಪಕ್ಷಗಳ ಸದಸ್ಯರಲ್ಲ ; ಪ್ರೇಕ್ಷಕರ ಗ್ಯಾಲರಿಯಲ್ಲಿದ್ದ ಯುವಕರು !

ನಿರುದ್ಯೋಗಿ ಯುವ ಜನತೆಗೆ 500 ರುಪಾಯಿ ಮಾಸಿಕ ಭತ್ಯೆ ನೀಡುವಂತೆ ಸರ್ಕಾರವನ್ನು ಒತ್ತಾಯಿಸಿ ಇಬ್ಬರು ಯುವಕರು ಘೋಷಣೆ ಕೂಗಿದರು. ಈ ಕುರಿತ ಕರಪತ್ರಗಳನ್ನೂ ಎಸೆದರು. ತಕ್ಷಣ ಧಾವಿಸಿದ ರಕ್ಷಣಾ ಸಿಬ್ಬಂದಿ ಇಬ್ಬರು ಯುವಕರನ್ನೂ ಸದನದಿಂದ ಹೊತ್ತೊಯ್ದಿತು.

ಅಧಿಕಾರಕ್ಕೆ ಬಂದಲ್ಲಿ ರಾಜ್ಯದ ವಿದ್ಯಾವಂತ ಯುವ ಜನತೆಗೆ ನಿರುದ್ಯೋಗ ಭತ್ಯೆ ನೀಡುವುದಾಗಿ ಕಾಂಗ್ರೆಸ್‌ ವಾಗ್ದಾನ ಮಾಡಿತ್ತು . ಆದರೆ ಮೊನ್ನೆ , ಜುಲೈ 19ರಂದು ಮಂಡಿಸಿದ ರಾಜ್ಯ ಬಜೆಟ್‌ನಲ್ಲಿ ನಿರುದ್ಯೋಗ ಭತ್ಯೆ ಪ್ರಸ್ತಾಪವೇ ಇಲ್ಲ ? ಮಾತು ತಪ್ಪಿದಿರಾ ಪೂಜಾರಿ? ಇದೇನಾ ಧರ್ಮ ಸಿಂಗ್‌ ?

(ಇನ್ಫೋ ವಾರ್ತೆ)

ಮುಖಪುಟ / ವಾರ್ತೆಗಳು

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+