Get Updates
Get notified of breaking news, exclusive insights, and must-see stories!

ಚಿಟ್ಟಾಣಿಗೆ ಜಾನಪದಶ್ರೀ, ಶ್ರೀನಿವಾಸರಿಗೆ ಕನಕಪುರಂದರ ಪ್ರಶಸ್ತಿ

ಚಿಟ್ಟಾಣಿಗೆ ಜಾನಪದಶ್ರೀ, ಶ್ರೀನಿವಾಸರಿಗೆ ಕನಕಪುರಂದರ ಪ್ರಶಸ್ತಿ
ನೃತ್ಯ ಕಲಾವಿದ ರಾಧಾಕೃಷ್ಣರಿಗೆ ಶಾಂತಲಾ ನಾಟ್ಯ ಪ್ರಶಸ್ತಿ

ಬೆಂಗಳೂರು : 2003 ನೇ ಸಾಲಿನ ಪ್ರತಿಷ್ಠಿತ ಕನಕ ಪುರಂದರ ಪ್ರಶಸ್ತಿ , ಶಾಂತಲಾ ನಾಟ್ಯ ಪ್ರಶಸ್ತಿ ಹಾಗೂ ಜಾನಪದ ಶ್ರೀ ಪ್ರಶಸ್ತಿಗಳನ್ನು ರಾಜ್ಯ ಸರ್ಕಾರ ಪ್ರಕಟಿಸಿದೆ.

ಉತ್ತರ ಕನ್ನಡ ಜಿಲ್ಲೆಯ ಪ್ರಸಿದ್ಧ ಜಾನಪದ ಕಲಾವಿದ ರಾಮಚಂದ್ರ ಹೆಗಡೆ ಚಿಟ್ಟಾಣಿ ಅವರಿಗೆ ಜಾನಪದ ಶ್ರೀ ಪ್ರಶಸ್ತಿ ದೊರೆತಿದೆ. ಹಿರಿಯ ವೀಣಾ ವಾದಕ ಎಂ.ಜೆ.ಶ್ರೀನಿವಾಸ ಅಯ್ಯಂಗಾರ್‌ ಅವರಿಗೆ ಕನಕ- ಪುರಂದರ ಹಾಗೂ ಹಿರಿಯ ನೃತ್ಯ ಕಲಾವಿದ ಸಿ.ರಾಧಾಕೃಷ್ಣ ಅವರಿಗೆ ಶಾಂತಲಾ ನಾಟ್ಯ ಪ್ರಶಸ್ತಿ ದೊರೆತಿದೆ.

ಪ್ರಶಸ್ತಿಯ ಆಯ್ಕೆಗಾಗಿ ವಸುಂಧರಾ ದೊರೆಸ್ವಾಮಿ, ಚೆನ್ನಣ್ಣ ವಾಲೀಕಾರ್‌ ಹಾಗೂ ಪಂಚಾಕ್ಷರಿ ಸ್ವಾಮಿ ಮತ್ತಿಗಟ್ಟಿ ಅವರ ನೇತೃತ್ವದಲ್ಲಿ ಪ್ರತ್ಯೇಕ ಸಮಿತಿಗಳನ್ನು ರಾಜ್ಯ ಸರ್ಕಾರ ನೇಮಿಸಿತ್ತು . 1 ಲಕ್ಷ ರುಪಾಯಿ ನಗದು, ಸ್ಮರಣ ಫಲಕ ಹಾಗೂ ಸನ್ಮಾನವನ್ನು ಪ್ರಶಸ್ತಿ ಒಳಗೊಂಡಿದೆ.

(ಇನ್ಫೋ ವಾರ್ತೆ)

ಮುಖಪುಟ / ವಾರ್ತೆಗಳು

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+