ವೀರಪ್ಪಮೊಯಿಲಿ ಜೀವನಚರಿತ್ರೆಕೃತಿ ರಾಮಕೃಷ್ಣಹೆಗಡೆಗೆ ಅರ್ಪಣೆ
ವೀರಪ್ಪಮೊಯಿಲಿ ಜೀವನಚರಿತ್ರೆಕೃತಿ ರಾಮಕೃಷ್ಣಹೆಗಡೆಗೆ ಅರ್ಪಣೆ
ಮೊಯಿಲಿಯವರ ಜೀವನ ಹಾಗೂ ಸಾಧನೆಗಳ ಅಕ್ಷರ ರೂಪ
ಮೊಯಿಲಿಯವರ ಜೀವನದ ಹಲವಾರು ಮುಖ್ಯ ಘಟನೆ ಹಾಗೂ ಸಾಧನೆಗಳನ್ನು ಈ ಕೃತಿ ಹಿಡಿದಿಟ್ಟಿದೆ. ಪೀಣ್ಯ ಕೈಗಾರಿಕಾ ಪ್ರದೇಶ, ಇಸ್ರೋ, ಎಲೆಕ್ಟ್ರಾನಿಕ್ ಸಿಟಿ, ಪ್ರಿಯದರ್ಶಿನಿ ಸಿಲ್ಕ್ಸ್ , ಸಿಇಟಿ, ಕಿಯೋನಿಕ್ಸ್ ಮುಂತಾದ ಹಲವಾರು ಸಂಸ್ಥೆಗಳು ಮೊಯಿಲಿ ಅವರ ಸಾಧನೆಯ ಸಂಕೇತವಾಗಿವೆ ಎಂದು ಪುಸ್ತಕ ಕುರಿತು ಮಾತನಾಡಿದ ವಿಮರ್ಶಕ ಡಾ.ಎಸ್.ಎಲ್.ಶೇಷಗಿರಿ ರಾವ್ ಹೇಳಿದರು.
ಮುಖ್ಯಮಂತ್ರಿಯಾಗಿ ಮೊಯಿಲಿ ಅವರದ್ದು ಅಪಾರವಾದ ಜನಪರ ಕಾಳಜಿಯಾಗಿತ್ತು . ಅವರು ಪ್ರಮಾಣ ವಚನ ಸ್ವೀಕರಿಸಿದ ದಿನವೇ ಉತ್ತರಕನ್ನಡ ಜಿಲ್ಲೆಯಲ್ಲಿ ಪ್ರವಾಹ ಕಾಣಿಸಿಕೊಂಡಿತು. ಅಧಿಕಾರ ಸ್ವೀಕಾರದ ಸಂತೋಷ-ಅಭಿನಂದನೆಗಳನ್ನು ಬದಿಗಿಟ್ಟು ಪ್ರವಾಹ ಪ್ರಕೋಪ ಪರಿಸ್ಥಿತಿಯ ಅವಲೋಕನಕ್ಕೆ ಮೊಯಿಲಿ ತೆರಳಿದ್ದರು. ಇದು ಅವರ ಜನಪರ ಕಾಳಜಿಗೆ ಸಾಕ್ಷಿ ಎಂದು ಶೇಷಗಿರಿರಾವ್ ಹೇಳಿದರು.
ಕಡಿಮೆ ಕಾಲಾವಕಾಶದಲ್ಲೇ ಮೊಯಿಲಿ ಅನೇಕ ಮಹತ್ವದ ನಿರ್ಧಾರಗಳನ್ನು ಕೈಗೊಂಡಿದ್ದಾರೆ. ಅವರೊಬ್ಬ ಅಪರೂಪದ ಆಡಳಿತಗಾರ ಎಂದೂ ಶೇಷಗಿರಿರಾವ್ ಬಣ್ಣಿಸಿದರು.
ಜೀವನ ಚರಿತ್ರೆ ಕೃತಿ ಸಂದರ್ಭದಲ್ಲಿ ಮಾತನಾಡಿದ ಮೊಯಿಲಿ- ಈ ಪುಸ್ತಕ ಕರ್ನಾಟಕ ಹಾಗೂ ರಾಜ್ಯದ ಬಡ ಜನತೆಗೆ ಸೇರಿದುದು ಎಂದರು. ಜ.12ರ ಸೋಮವಾರ ನಿಧನರಾದ ರಾಮಕೃಷ್ಣ ಹೆಗಡೆ ಅವರ ನಾಯಕತ್ವ ಗುಣವನ್ನು ಕೊಂಡಾಡಿದ ಮೊಯಿಲಿ- ತಮ್ಮ ಜೀವನ ಚರಿತ್ರೆಯನ್ನು ಅಗಲಿದ ನಾಯಕನಿಗೆ ಅರ್ಪಿಸುವುದಾಗಿ ಭಾವುಕರಾಗಿ ನುಡಿದರು.
ಡಾ. ಶಶಿಧರ್ ಮೂರ್ತಿ ಹಾಗೂ ಸಿ.ಪೌಲ್ ವರ್ಗೀಸ್ ಅವರು ಮೊಯಿಲಿ ಜೀವನ ಚರಿತ್ರೆಯ ಕರ್ತೃಗಳು.
(ಇನ್ಫೋ ವಾರ್ತೆ)
ಮುಖಪುಟ / ವಾರ್ತೆಗಳು
-
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO












Click it and Unblock the Notifications