ದತ್ತಪೀಠ ಚರ್ಚೆಗೆ ಬನ್ನಿ -ಕಾರ್ನಾಡ್ಗೆ ಭಜರಂಗದಳದ ಆಹ್ವಾನ
ದತ್ತಪೀಠ
ಚರ್ಚೆಗೆ
ಬನ್ನಿ
-ಕಾರ್ನಾಡ್ಗೆ
ಭಜರಂಗದಳದ
ಆಹ್ವಾನ
ವಸ್ತುಸ್ಥಿತಿ
ಅರಿಯದ
ಸಾಹಿತಿಗಳು
ಹೇಳಿಕೆಗಳನ್ನು
ನೀಡುವುದನ್ನು
ಬಿಡಲಿ...
ಕೋಮು ಸೌಹಾರ್ದತೆಯನ್ನು ಕಾಪಾಡುವ ನಿಟ್ಟಿನಲ್ಲಿ ದತ್ತಜಯಂತಿ ಆಚರಣೆ ಸಂದರ್ಭದಲ್ಲಿ ಶೋಭಾಯಾತ್ರೆಗಳನ್ನು ಸರ್ಕಾರ ನಿಷೇಧಿಸಿದೆ. ಈ ಬಗ್ಗೆ ಬಹಿರಂಗ ಚರ್ಚೆ ನಡೆಸಲು ಭಜರಂಗ ದಳ ನಿರ್ಧರಿಸಿದೆ ಎಂದು ದಳದ ಸಂಯೋಜಕ ವಿ. ಸುನೀಲ್ ಕುಮಾರ್ ತಿಳಿಸಿದ್ದಾರೆ.
ಈ ಬಹಿರಂಗ ಚರ್ಚೆಯಿಂದ ದತ್ತ ಪೀಠದ ಸುತ್ತ ಇರುವ ವಾಸ್ತವ ಸಮಸ್ಯೆಗಳನ್ನು ಅರ್ಥ ಮಾಡಿಕೊಳ್ಳುವುದು ಸಾಧ್ಯವಾಗುತ್ತದೆ. ವಾಸ್ತವವನ್ನು ಅರಿಯದೆಯೇ ಕಾರ್ನಾಡ್ರಂತಹ ಜ್ಞಾನಪೀಠ ಪ್ರಶಸ್ತಿ ವಿಜೇತ ಹಿರಿಯ ಸಾಹಿತಿಗಳು ಯಾವುದೇ ಹೇಳಿಕೆಗಳನ್ನು ಕೊಡಬಾರದು ಎಂದು ಸುನೀಲ್ ಕುಮಾರ್ ಹೇಳಿದರು.
ದತ್ತಪೀಠ ಸಮಸ್ಯೆಯ ಬಗ್ಗೆ ಭಜರಂಗ ದಳವು ಸೂಕ್ತ ದಾಖಲೆಪತ್ರಗಳನ್ನು ಹೊಂದಿದೆ. ಇವುಗಳ ಆಧಾರದ ಮೇಲೆ ಭಜರಂಗದಳವು ನ್ಯಾಯಕ್ಕಾಗಿ ಹೋರಾಟ ನಡೆಸುತ್ತದೆ. ವಿಚಾರವಾದಿಗಳು ಹಾಗೂ ಸಾಹಿತಿಗಳೂ ಕೂಡ ಅವರ ಬಳಿ ಇರುವ ದಾಖಲೆ ಪತ್ರಗಳ ಸಹಾಯದಿಂದ ದತ್ತ ಪೀಠದ ನೈಜತೆಯನ್ನು ಹೊರ ಹಾಕಲು ಹೋರಾಟ ನಡೆಸಲಿ ಎಂದು ಸುನೀಲ್ ಕುಮಾರ್ ಹೇಳಿದರು.
(ಇನ್ಫೋ ವಾರ್ತೆ)
ಮುಖಪುಟ / ವಾರ್ತೆಗಳು