Get Updates
Get notified of breaking news, exclusive insights, and must-see stories!

ದತ್ತಪೀಠ ಚರ್ಚೆಗೆ ಬನ್ನಿ -ಕಾರ್ನಾಡ್‌ಗೆ ಭಜರಂಗದಳದ ಆಹ್ವಾನ

ದತ್ತಪೀಠ ಚರ್ಚೆಗೆ ಬನ್ನಿ -ಕಾರ್ನಾಡ್‌ಗೆ ಭಜರಂಗದಳದ ಆಹ್ವಾನ
ವಸ್ತುಸ್ಥಿತಿ ಅರಿಯದ ಸಾಹಿತಿಗಳು ಹೇಳಿಕೆಗಳನ್ನು ನೀಡುವುದನ್ನು ಬಿಡಲಿ...

ಚಿಕ್ಕಮಗಳೂರು: ಬಾಬಾಬುಡನ್‌ಗಿರಿಯಲ್ಲಿನ ವಿವಾದಾಸ್ಪದ ದತ್ತಪೀಠ ಸಮಸ್ಯೆ ಕುರಿತಂತೆ ಬಹಿರಂಗ ಚರ್ಚೆಗೆ ಮುಂದಾಗುವಂತೆ ಜ್ಞಾನ ಪೀಠ ವಿಜೇತ ಸಾಹಿತಿ ಗಿರೀಶ್‌ ಕಾರ್ನಾಡ್‌ ಸೇರಿದಂತೆ ಸಾಹಿತಿಗಳನ್ನು ಹಾಗೂ ವಿಚಾರವಾದಿಗಳನ್ನು ಭಜರಂಗ ದಳ ಆಹ್ವಾನಿಸಿದೆ.

ಕೋಮು ಸೌಹಾರ್ದತೆಯನ್ನು ಕಾಪಾಡುವ ನಿಟ್ಟಿನಲ್ಲಿ ದತ್ತಜಯಂತಿ ಆಚರಣೆ ಸಂದರ್ಭದಲ್ಲಿ ಶೋಭಾಯಾತ್ರೆಗಳನ್ನು ಸರ್ಕಾರ ನಿಷೇಧಿಸಿದೆ. ಈ ಬಗ್ಗೆ ಬಹಿರಂಗ ಚರ್ಚೆ ನಡೆಸಲು ಭಜರಂಗ ದಳ ನಿರ್ಧರಿಸಿದೆ ಎಂದು ದಳದ ಸಂಯೋಜಕ ವಿ. ಸುನೀಲ್‌ ಕುಮಾರ್‌ ತಿಳಿಸಿದ್ದಾರೆ.

ಈ ಬಹಿರಂಗ ಚರ್ಚೆಯಿಂದ ದತ್ತ ಪೀಠದ ಸುತ್ತ ಇರುವ ವಾಸ್ತವ ಸಮಸ್ಯೆಗಳನ್ನು ಅರ್ಥ ಮಾಡಿಕೊಳ್ಳುವುದು ಸಾಧ್ಯವಾಗುತ್ತದೆ. ವಾಸ್ತವವನ್ನು ಅರಿಯದೆಯೇ ಕಾರ್ನಾಡ್‌ರಂತಹ ಜ್ಞಾನಪೀಠ ಪ್ರಶಸ್ತಿ ವಿಜೇತ ಹಿರಿಯ ಸಾಹಿತಿಗಳು ಯಾವುದೇ ಹೇಳಿಕೆಗಳನ್ನು ಕೊಡಬಾರದು ಎಂದು ಸುನೀಲ್‌ ಕುಮಾರ್‌ ಹೇಳಿದರು.

ದತ್ತಪೀಠ ಸಮಸ್ಯೆಯ ಬಗ್ಗೆ ಭಜರಂಗ ದಳವು ಸೂಕ್ತ ದಾಖಲೆಪತ್ರಗಳನ್ನು ಹೊಂದಿದೆ. ಇವುಗಳ ಆಧಾರದ ಮೇಲೆ ಭಜರಂಗದಳವು ನ್ಯಾಯಕ್ಕಾಗಿ ಹೋರಾಟ ನಡೆಸುತ್ತದೆ. ವಿಚಾರವಾದಿಗಳು ಹಾಗೂ ಸಾಹಿತಿಗಳೂ ಕೂಡ ಅವರ ಬಳಿ ಇರುವ ದಾಖಲೆ ಪತ್ರಗಳ ಸಹಾಯದಿಂದ ದತ್ತ ಪೀಠದ ನೈಜತೆಯನ್ನು ಹೊರ ಹಾಕಲು ಹೋರಾಟ ನಡೆಸಲಿ ಎಂದು ಸುನೀಲ್‌ ಕುಮಾರ್‌ ಹೇಳಿದರು.

(ಇನ್ಫೋ ವಾರ್ತೆ)

ಮುಖಪುಟ / ವಾರ್ತೆಗಳು

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+