ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ತಿರುಪತಿಯಲ್ಲಿ 50 ಕೋಟಿ ರು. ವೆಚ್ಚದಲ್ಲಿ ಕನ್ನಡಿಗರಿಗೆ ಅತಿಥಿ ವಸತಿ

By Staff
|
Google Oneindia Kannada News

ತಿರುಪತಿಯಲ್ಲಿ 50 ಕೋಟಿ ರು. ವೆಚ್ಚದಲ್ಲಿ ಕನ್ನಡಿಗರಿಗೆ ಅತಿಥಿ ವಸತಿ
ವಸತಿ ಯೋಜನೆಗೆ ದಾನ ಕೊಡಿ, ವರ್ಷಕ್ಕೆ 30 ದಿನ ತಂಗುದಾಣ ಉಚಿತ ಪಡೆಯಿರಿ

ಬೆಂಗಳೂರು : ತಿರುಮಲ ಮತ್ತು ತಿರುಪತಿಯಲ್ಲಿ ರಾಜ್ಯದ ಪ್ರವಾಸಿಗರಿಗೆ ಅನುಕೂಲವಾಗುವಂತೆ ಅತಿಥಿ ವಸತಿಗಳನ್ನು ನಿರ್ಮಿಸಲು 50 ಕೋಟಿ ರುಪಾಯಿ ಯೋಜನೆಯನ್ನು ಸರ್ಕಾರ ರೂಪಿಸಿದೆ.

ನಗರಾಭಿವೃದ್ಧಿ ಸಚಿವ ಡಿ.ಕೆ.ಶಿವಕುಮಾರ್‌ ಸೋಮವಾರ (ಆ.25) ಸುದ್ದಿಗಾರರಿಗೆ ಈ ವಿಷಯ ತಿಳಿಸಿದರು. ರಾಜ್ಯದ ಯಾತ್ರಾರ್ಥಿಗಳಿಗೆ ಸೌಕರ್ಯ ಹೆಚ್ಚಿಸುವ ಸಲುವಾಗಿ ರಾಜ್ಯ ಸರ್ಕಾರ ದತ್ತಿ (ಟ್ರಸ್ಟ್‌) ಯಾಂದನ್ನು ಸ್ಥಾಪಿಸಿದೆ. ಈ ದತ್ತಿ ತಿರುಮಲ ಮತ್ತು ತಿರುಪತಿಯಲ್ಲಿ ಅತಿಥಿ ವಸತಿಗಳನ್ನು ಕಟ್ಟಲು ದಾನಿಗಳಿಂದ ದೇಣಿಗೆ ಸಂಗ್ರಹಿಸಲಿದೆ. ಆಸಕ್ತರು ಹಣಕಾಸಿನ ನೆರವು ನೀಡಬಹುದು. ದತ್ತಿಗೆ ಹಣದ ಸಹಾಯ ಮಾಡುವವರಿಗೆ ವರ್ಷಕ್ಕೆ 30 ದಿನ ತಿರುಪತಿಯಲ್ಲಿ ತಂಗುವ ಪುಕ್ಕಟೆ ವ್ಯವಸ್ಥೆಯನ್ನು ಸರ್ಕಾರ ಒದಗಿಸಿಕೊಡಲಿದೆ ಎಂದು ದತ್ತಿಯ ಅಧ್ಯಕ್ಷರೂ ಆಗಿರುವ ಶಿವಕುಮಾರ್‌ ಹೇಳಿದರು.

ತಿರುಪತಿಯಲ್ಲಿ ಕರ್ನಾಟಕ ಕಟ್ಟಿರುವ ಛತ್ರದ ಜಾಗ ತನ್ನದು ಎಂದು ಆಂಧ್ರಪ್ರದೇಶ ಹೇಳುತ್ತಿದೆ. ಆದರೆ, ಆ ಭೂಮಿ ಮೈಸೂರು ಮಹಾರಾಜರು ಕೊಟ್ಟ ಕಾಣಿಕೆ ಎಂಬುದು ಕರ್ನಾಟಕದ ಸಮರ್ಥನೆ. ಈ ವಿವಾದಕ್ಕೆ ಶೀಘ್ರವೇ ಸೂಕ್ತ ಪರಿಹಾರ ಹುಡುಕಲಾಗುವುದು ಎಂದು ಶಿವಕುಮಾರ್‌ ಪ್ರಶ್ನೆಯಾಂದಕ್ಕೆ ಉತ್ತರಿಸಿದರು.

ಬೆಂಗಳೂರು ಟರ್ಫ್‌ ಕ್ಲಬ್‌ (ಬಿಟಿಸಿ) ತಿರುಮಲ ತಿರುಪತಿಯಲ್ಲಿ ಅತಿಥಿ ವಸತಿ ಯೋಜನೆಗೆ ದೇಣಿಗೆ ಕೊಡಲು ಮುಂದಾಗಿದೆ. ಎನ್‌ಆರ್‌ಐಗಳು ಸೇರಿದಂತೆ ಅನೇಕರು ಹಣ ಕೊಡಲು ಸಾಕಷ್ಟು ಸಂಖ್ಯೆಯಲ್ಲಿ ಮುಂದೆ ಬರುತ್ತಿದ್ದಾರೆ ಎಂದ ಶಿವಕುಮಾರ್‌, ಖುದ್ದು ತಾವು ಹಾಗೂ ಮುಖ್ಯಮಂತ್ರಿ ಎಸ್ಸೆಂ ಕೃಷ್ಣ ತಲಾ 15 ಸಾವಿರ ರುಪಾಯಿ ದೇಣಿಗೆ ಕೊಟ್ಟಿರುವುದಾಗಿ ತಿಳಿಸಿದರು.

(ಪಿಟಿಐ)

ಮುಖಪುಟ / ವಾರ್ತೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X