ಭದ್ರಾವತಿ ಉಕ್ಕಿನ ಕಾರ್ಖಾನೆಯಲ್ಲಿ ಸ್ಫೋಟ, 7ಮಂದಿ ಸಾವು
ಭದ್ರಾವತಿ ಉಕ್ಕಿನ ಕಾರ್ಖಾನೆಯಲ್ಲಿ ಸ್ಫೋಟ, 7ಮಂದಿ ಸಾವು
ಕುದಿ ಕುಲುಮೆಯಲ್ಲಿ ಸ್ಫೋಟ- ಒಂಭತ್ತು ಮಂದಿಗೆ ಗಾಯ
ಸ್ಫೋಟವು ಘಟಕದ ಕುದಿ ಕುಲುಮೆಯಲ್ಲಿ ಸಂಭವಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಸ್ಫೋಟದಲ್ಲಿ 7 ಮಂದಿ ಸಾವಿಗೀಡಾಗಿದ್ದು , 9 ಮಂದಿ ಗಾಯಗೊಂಡಿದ್ದಾರೆ.
ಸಾವಿಗೀಡಾದ ಇಬ್ಬರನ್ನು - ಹಿರಿಯ ನಿರ್ವಹಣಾಧಿಕಾರಿ ಎಸ್. ಆರ್. ಶ್ರೀಧರ ಮೂರ್ತಿ ಮತ್ತು ಸಹ ನಿರ್ವಹಣಾಧಿಕಾರಿ ಬಿ. ಎಸ್. ಚಂದ್ರಶೇಖರ್ ಎಂದು ಗುರುತಿಸಲಾಗಿದೆ. ಉಳಿದ ಐವರು 11ರಿಂದ 7 ಗಂಟೆ ಅವಧಿಯ ಪಾಳಿಯಲ್ಲಿ ಕೆಲಸ ನಿರ್ವಹಿಸುತ್ತಿದ್ದ 50 ವರ್ಷಕ್ಕೆ ಮೇಲ್ಪಟ್ಟ ವಯಸ್ಸಿನ ಕೆಲಸಗಾರರು.
ಸ್ಫೋಟದಲ್ಲಿ ಗಾಯಗೊಂಡವರನ್ನು ಸ್ಥಳೀಯ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿದ ಬಳಿಕ ಬೆಂಗಳೂರಿನ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಸ್ಫೋಟದ ಬಗ್ಗೆ ಪೊಲೀಸರು ತನಿಖೆ ಕೈಗೆತ್ತಿಕೊಂಡಿದ್ದಾರೆ.
(ಪಿಟಿಐ)
ಮುಖಪುಟ / ವಾರ್ತೆಗಳು












Click it and Unblock the Notifications