ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಏಕರೂಪ ಶಾಸನ ವಿರುದ್ಧ ಉಡುಪಿ ಸ್ವಾಮೀಜಿಗಳು ಕೋರ್ಟ್‌ಗೆ

By Staff
|
Google Oneindia Kannada News

ಏಕರೂಪ ಶಾಸನ ವಿರುದ್ಧ ಉಡುಪಿ ಸ್ವಾಮೀಜಿಗಳು ಕೋರ್ಟ್‌ಗೆ
ಶ್ರೀಕೃಷ್ಣ ದೇವರ ಸ್ಥಳ ಮಠವೇ ಹೊರತು ಮಂದಿರವಲ್ಲ ..

ಉಡುಪಿ: ಧಾರ್ಮಿಕ ಮತ್ತು ದತ್ತಿ ಇಲಾಖೆ ಏಕರೂಪ ಶಾಸನದಡಿ ಉಡುಪಿ ಶ್ರೀ ಕೃಷ್ಣ ಮಠವನ್ನು ಹೊರಗಿಡದಿದ್ದರೆ ಕೋರ್ಟ್‌ ಮೊರೆ ಹೋಗುವುದಾಗಿ ಅಷ್ಟ ಮಠಗಳ ಸ್ವಾಮೀಜಿಗಳು ಎಚ್ಚರಿಸಿದ್ದಾರೆ.

ಶ್ರೀಕೃಷ್ಣ ಮಠದ ಬಗೆಗಿರುವ ಸಂಪೂರ್ಣ ದಾಖಲೆ ಸಲ್ಲಿಸಲು ಉದ್ದೇಶಿಸಲಾಗಿದ್ದು, ಈ ಬಗ್ಗೆ ಈಗಾಗಲೇ ಆಯುಕ್ತರಿಗೆ ಮನವಿ ಮಾಡಲಾಗಿದೆ ಎಂದು ಮಠದ ಆಡಳಿತ ಮಂಡಳಿ ಪ್ರಕಟಿಸಿದೆ. ರಾಜ್ಯದ ಕಾನೂನು ಸಲಹೆಗಾರರಿಗೆ, ಮುಖ್ಯಮಂತ್ರಿಗಳಿಗೆ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ಅನಂತ್‌ಕುಮಾರ್‌ ಅವರಿಗೆ ಏಕ ರೂಪ ಶಾಸನದಿಂದ ಶ್ರೀಕೃಷ್ಣ ಮಠವನ್ನು ಹೊರಗಿಡುವಂತೆ ಮನವಿ ಮಾಡಿಕೊಳ್ಳಲಾಗಿದೆ.

ಮಠದ ಬೆಂಗಳೂರು ಪ್ರತಿನಿಧಿ ಎ. ಆರ್‌. ತಂತ್ರಿ ಕಾನೂನು ಹೋರಾಟಕ್ಕೆ ನೆರವು ನೀಡಲಿರುವುದಾಗಿ ಪ್ರಕಟಣೆ ಹೇಳಿದೆ. ಶ್ರೀಕೃಷ್ಣ ದೇವರ ಈ ಸ್ಥಳ ಮಠವೇ ಹೊರತು ಮಂದಿರವಲ್ಲ ಎಂದು ಅಷ್ಟ ಮಠದ ಸ್ವಾಮೀಜಿಗಳು ಒಗ್ಗಟ್ಟಿನಿಂದ ಕಾನೂನು ಸಮರ ನಡೆಸಲಿದ್ದಾರೆ.

(ಇನ್ಫೋ ವಾರ್ತೆ)

ಮುಖಪುಟ / ವಾರ್ತೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X