ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಶಾರದ ಸಂಗೀತ ಸಭಾದಿಂದ ಬೆಂಗಳೂರಲ್ಲಿ ಸಂಗೀತೋತ್ಸವ

By Staff
|
Google Oneindia Kannada News

ಶಾರದ ಸಂಗೀತ ಸಭಾದಿಂದ ಬೆಂಗಳೂರಲ್ಲಿ ಸಂಗೀತೋತ್ಸವ
ಜುಲೈ 11 ರಿಂದ ಮೂರು ದಿನಗಳ ಕಾಲ ಸಂಗೀತ ಪ್ರಿಯರಿಗೆ ಸುಗ್ಗಿ

ಬೆಂಗಳೂರು : ಜುಲೈ 11ರ ಶುಕ್ರವಾರದಿಂದ 13ರವರೆಗೆ ಬೆಂಗಳೂರಿನ ಹನುಮಂತ ನಗರದ ವಿವೇಕಾನಂದ ವಿದ್ಯಾಶಾಲೆಯಲ್ಲಿ ಸಂಗೀತೋತ್ಸವ ನಡೆಯಲಿದೆ. ಶಾರದಾ ಸಂಗೀತ ಸಭಾ ಈ ಸಂಗೀತೋತ್ಸವವನ್ನು ಆಯೋಜಿಸಿದೆ.

ಜು.11ರಂದು ಆರ್‌.ಎ.ರಮಾಮಣಿ ಅವರ ಗಾಯನದೊಂದಿಗೆ ಸಂಗೀತೋತ್ಸವ ಪ್ರಾರಂಭವಾಗಲಿದೆ. ಕೇಂದ್ರ ಸಚಿವ ಹಾಗೂ ರಾಜ್ಯ ಬಿಜೆಪಿ ಅಧ್ಯಕ್ಷ ಅನಂತಕುಮಾರ್‌ ಸಂಗೀತೋತ್ಸವನ್ನು ಉದ್ಘಾಟಿಸುವರು ಎಂದು ಶಾರದ ಸಂಗೀತ ಸಭಾದ ಸಲಹೆಗಾರ ಅರಳುಮಲ್ಲಿಗೆ ಪಾರ್ಥಸಾರಥಿ ಸುದ್ದಿಗಾರರಿಗೆ ತಿಳಿಸಿದರು.

ಸಂಗೀತೋತ್ಸವದ ಕಾರ್ಯಕ್ರಮಗಳು ಇಂತಿವೆ :

ಜುಲೈ 12- ಡಾ.ಎನ್‌.ರಮಣಿ ಅವರ ಕೊಳಲು ವಾದನ
ಜುಲೈ 13- ಆರ್‌.ಕೆ. ಶ್ರೀಕಂಠನ್‌ ಅವರ ಸಂಗೀತ ಕಾರ್ಯಕ್ರಮ

ಜುಲೈ 13 ರಂದು ರಾಜ್ಯದ ಹಿರಿಯ ಸಂಗೀತ ಕಲಾವಿದರು ಹಾಗೂ ವಿದ್ವಾಂಸರನ್ನು ಶಾರದ ಸಂಗೀತ ಸಭಾ ಗೌರವಿಸುವುದು. ಇದೇ ಸಂದರ್ಭದಲ್ಲಿ ಸಭಾದ ಸಂಗೀತ ಗೌರವ ಪುರಸ್ಕಾರ ಪ್ರಶಸ್ತಿಯನ್ನು ಅನನ್ಯ ಸಂಸ್ಥೆಗೆ ಪ್ರೊ.ಎಸ್‌.ಕೆ.ರಾಮಚಂದ್ರರಾವ್‌ ಪ್ರದಾನ ಮಾಡುವರು.

(ಇನ್ಫೋ ವಾರ್ತೆ)

ಮುಖಪುಟ / ವಾರ್ತೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X