ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹರಿಯುತ್ತಿರುವ ಕಬಿನಿ ನೀರಿಗೆ ಪೊಲೀಸ್‌ ಪಡೆಯ ಕಾವಲು !

By Staff
|
Google Oneindia Kannada News

ಹರಿಯುತ್ತಿರುವ ಕಬಿನಿ ನೀರಿಗೆ ಪೊಲೀಸ್‌ ಪಡೆಯ ಕಾವಲು !
ಬೆಂಗಳೂರಿಗೆ ಕುಡಿವ ನೀರು ಸರಬರಾಜು ಮಾಡಲು ತ್ರಾಸಪಡುತ್ತಿರುವ ಸರಕಾರ

ಮಳವಳ್ಳಿ : ಬೆಂಗಳೂರು ನಗರಕ್ಕೆ ಕುಡಿಯುವ ನೀರು ಪೂರೈಸಲು ಸರಕಾರ ಸಿಕ್ಕಾಪಟ್ಟೆ ಶ್ರಮ ಪಡುತ್ತಿದೆ. ಭರ್ತಿಯಾಗುತ್ತಿರುವ ಕಬಿನಿಯಿಂದ ಕಾಲುವೆಗಳ ಮೂಲಕ ಬಿಟ್ಟಿರುವ ನೀರನ್ನು ರೈತರು ಕೃಷಿ ಚಟುವಟಿಕೆಗಳಿಗೆ ಬಳಸದಂತೆ ನಿಗಾ ವಹಿಸಲು ಪೊಲೀಸ್‌ ಬೆಂಗಾವಲು ಹಾಕಲಾಗಿದೆ.

ಬೆಂಗಳೂರಿಗೆ ಕುಡಿಯುವ ನೀರು ಪೂರೈಕೆ ಆಗುವ ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲ್ಲೂಕಿನ ತೊರೆಕಾಡನಹಳ್ಳಿಯಲ್ಲಿ ಇರುವ ಜಲ ಶುದ್ಧೀಕರಣ ಘಟಕಕ್ಕೆ ಇನ್ನೂ ಪೂರ್ಣ ಪ್ರಮಾಣದಲ್ಲಿ ನೀರು ಹರಿದುಬರುತ್ತಿಲ್ಲ. ಟಿ. ಕೆ. ಹಳ್ಳಿಗೆ ನೀರು ಪೂರೈಕೆ ಮಾಡುವ ನೆಟ್ಕಲ್‌ ಕೆರೆಗೆ ಕಬಿನಿಯಿಂದ ನೀರು ಬಿಡಲಾಗಿದ್ದು, ಅತ್ಯಲ್ಪ ಪ್ರಮಾಣದಲ್ಲಿ ನೀರು ಸಂಗ್ರಹವಾಗುತ್ತಿದೆ.

ಕಬಿನಿಯಿಂದ ಕಾಲುವೆಗಳ ಮೂಲಕ ಬಿಟ್ಟಿರುವ ನೀರನ್ನು ಗುಡ್ಡಗಾಡು ಪ್ರದೇಶದ ರೈತರು ತಮ್ಮ ಜಮೀನುಗಳಿಗೆ ನೀರು ಹರಿಸದಂತೆ ಅಲ್ಲಲ್ಲಿ ಪೊಲೀಸ್‌ ಪಡೆಗಳನ್ನು ನಿಯೋಜಿಸಿ, ನೀರು ಹರಿಯುವಿಕೆಯನ್ನು ಎಚ್ಚರಿಕೆಯಿಂದ ರಕ್ಷಿಸಲಾಗುತ್ತಿದೆ.

(ಇನ್ಫೋ ವಾರ್ತೆ)

ಮುಖಪುಟ / ವಾರ್ತೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X