ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ತುಳು ಭಾಷೆಯ ಪರವಾಗಿ ಜಾರ್ಜ್ ವಕೀಲಿ
ನವದೆಹಲಿ : ತುಳು ಭಾಷೆಯನ್ನು ಸಂವಿಧಾನದ ಎಂಟನೇ ಪರಿಚ್ಛೇದದಲ್ಲಿ ಸೇರಿಸಬೇಕು ಎಂಬ ತುಳುವರ ದಶಕಗಳ ಹಿಂದಿನ ಬೇಡಿಕೆಗೆ ಮತ್ತೊಮ್ಮೆ ಜೀವ ಬಂದಿದೆ. ಭಾನುವಾರ ದೆಹಲಿಯಲ್ಲಿ ನಡೆದ ತುಳು ಸಮ್ಮೇಳನದಲ್ಲಿ ತುಳುವರ ಈ ಬೇಡಿಕೆಯ ಬಗ್ಗೆ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಜೊತೆಗೆ ಚರ್ಚಿಸುವುದಾಗಿ ಕೇಂದ್ರರಕ್ಷಣಾ ಸಚಿವ ಜಾರ್ಜ್ ಫರ್ನಾಂಡಿಸ್ ಭರವಸೆ ನೀಡಿದ್ದಾರೆ.
ತುಳು ಸಮ್ಮೇಳನದ ಆಗ್ರಹಗಳು :
- ಮಂಗಳೂರು- ಬೆಂಗಳೂರು ಬ್ರಾಡ್ಗೇಜ್ ನಿರ್ಮಾಣ ಕಾರ್ಯವನ್ನು ಕೂಡಲೇ ಆರಂಭಿಸಬೇಕು
- ಅಡಿಕೆ, ಕಾಫಿ, ತೆಂಗು ಬೆಳೆಗಳಿಗೆ ಬೆಂಬಲ ಬೆಲೆ ನಿಗದಿ ಮಾಡಬೇಕು
- ಮೀನು ಉದ್ಯಮಕ್ಕೆ ಸಾಕಷ್ಟು ಪ್ರೋತ್ಸಾಹ ನೀಡಬೇಕು
- ದಕ್ಷಿಣ ಕನ್ನಡ ಜಿಲ್ಲೆಯ ಸುತ್ತ ಮುತ್ತಲಿನ ಪ್ರದೇಶಗಳಲ್ಲಿ ಪ್ರವಾಸೋದ್ಯಮಕ್ಕೆ ಆದ್ಯತೆ ನೀಡಬೇಕು
ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ತುಳುವರನ್ನು ಸಮಾವೇಶದಲ್ಲಿ ಸನ್ಮಾನಿಸಲಾಯಿತು. ಸನ್ಮಾನಿತರು - ಎಂ. ಕೆ. ಧರ್ಮರಾಜ(ಪತ್ರಿಕೋದ್ಯಮ), ಕೆ. ರಾಮ( ಸಮಾಜ ಸೇವೆ), ಕೆ. ಪಿ. ರಾವ್ (ತುಳು ಸಂಶೋಧನೆ), ಜಯರಾಮ್ ಬನನ್(ಕೈಗಾರಿಕೆ), ಆರುವ ಕೊರಗಪ್ಪ ಶೆಟ್ಟಿ (ಯಕ್ಷಗಾನ), ದಾಸಪ್ಪ ರೈ( ಯಕ್ಷಗಾನ), ಸದಾನಂದ ಸುವರ್ಣ(ರಂಗಭೂಮಿ).
(ಇನ್ಫೋ ವಾರ್ತೆ)
ಮುಖಪುಟ / ಇವತ್ತು... ಈ ಹೊತ್ತು...
Comments
Story first published: Monday, February 17, 2003, 5:30 [IST]