‘ಶ್ರೇಷ್ಠ ಹೊರನಾಡ ಕನ್ನಡಿಗ’ರಾಗಿ ಡಾ.ಆರ್.ನಟರಾಜನ್
ನವದೆಹಲಿ : ‘ದೆಹಲಿ ಕನ್ನಡಿಗ’ ಪತ್ರಿಕೆಯ 2003 ನೇ ಸಾಲಿನ ‘ಶ್ರೇಷ್ಠ ಹೊರನಾಡ ಕನ್ನಡಿಗ’ ಪ್ರಶಸ್ತಿಗೆ ಅಖಿಲ ಭಾರತ ತಾಂತ್ರಿಕ ಶಿಕ್ಷಣ ಮಂಡಳಿಯ ಅಧ್ಯಕ್ಷ ಡಾ.ಆರ್.ನಟರಾಜನ್ ಆಯ್ಕೆಯಾಗಿದ್ದಾರೆ.
ಏಪ್ರಿಲ್ 5 ರಂದು ದೆಹಲಿಯಲ್ಲಿ ನಡೆಯುವ 20 ನೇ ರಾಷ್ಟ್ರೀಯ ಕನ್ನಡ ಸಮ್ಮೇಳನದಲ್ಲಿ ನಟರಾಜನ್ ಅವರಿಗೆ ‘ಶ್ರೇಷ್ಠ ಹೊರನಾಡ ಕನ್ನಡಿಗ’ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ‘ದೆಹಲಿ ಕನ್ನಡಿಗ’ ಪತ್ರಿಕೆ ಸಂಪಾದಕ ಬಾ.ಸಾಮಗ ಸುದ್ದಿ ಹೇಳಿಕೆಯಲ್ಲಿ ತಿಳಿಸಿದ್ದಾರೆ.
‘ಶ್ರೇಷ್ಠ
ದಿಲ್ಲಿ
ಕನ್ನಡಿಗ’ರಾಗಿ
ಸುಧಾಕರ
ರಾವ್
‘ದೆಹಲಿ
ಕನ್ನಡಿಗ’
ಪತ್ರಿಕೆಯ
ಇತರ
ಪ್ರಶಸ್ತಿಗಳೂ
ಪ್ರಕಟವಾಗಿದ್ದು
-
ಕರ್ನಾಟಕ
ಸರ್ಕಾರದ
ಪ್ರಧಾನ
ಕಾರ್ಯದರ್ಶಿ
ಹಾಗೂ
ದೆಹಲಿಯ
ಕರ್ನಾಟಕ
ಭವನದ
ಆಯುಕ್ತರಾದ
ಸುಧಾಕರ್
ರಾವ್
ಅವರಿಗೆ
‘ಶ್ರೇಷ್ಠ
ದಿಲ್ಲಿ
ಕನ್ನಡಿಗ’
ಪ್ರಶಸ್ತಿ
ಸಂದಿದೆ.
ಟಿ.ಎ.ಪೈ
ಸ್ಮಾರಕ
‘ಶ್ರೇಷ್ಠ
ಬ್ಯಾಂಕರ್’
ಪ್ರಶಸ್ತಿ
ಬ್ಯಾಂಕ್
ಆಫ್
ಬರೋಡಾದ
ಅಧ್ಯಕ್ಷ
ಹಾಗೂ
ಆಡಳಿತ
ನಿರ್ದೇಶಕರಾದ
ಪಿ.ಎಸ್.ಶೆಣೈ
ಅವರಿಗೆ
ಸಂದಿದೆ.
ಏಪ್ರಿಲ್ 5 ರ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ವಿವಿಧ ರಂಗಗಳಲ್ಲಿ ಗಣನೀಯ ಸೇವೆ ಸಲ್ಲಿಸಿದ ಕನ್ನಡಿಗರನ್ನು ಸನ್ಮಾನಿಸಲಾಗುವುದು ಎಂದು ಬಾ. ಸಾಮಗ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
(ಇನ್ಫೋ ವಾರ್ತೆ)
ಮುಖಪುಟ / ಇವತ್ತು... ಈ ಹೊತ್ತು...