ಮಂತ್ರಾಲಯ ಉತ್ತರಾಧಿಕಾರಿ ಸ್ಥಾನದ ವಿವಾದಕ್ಕೆ ತೆರೆ

ಮಂತ್ರಾಲಯ : ಇಲ್ಲಿನ ರಾಘವೇಂದ್ರ ಸ್ವಾಮಿ ಮಠದ ಕಿರಿಯ ಸ್ವಾಮಿ ಸುವಿದ್ಯೇಂದ್ರ ತೀರ್ಥರಿಗೆ ರಾಮದೇವರ ಪೂಜೆ ಮತ್ತು ಧಾರ್ಮಿಕ ಕಾರ್ಯಗಳಲ್ಲಿ ಪಾಲ್ಗೊಳ್ಳಬಾರದು ಎಂದು ವಿಧಿಸಿದ್ದ ತಡೆಯಾಜ್ಞೆಯನ್ನು ಆಂಧ್ರಪ್ರದೇಶ ಮುಜರಾಯಿ ಖಾತೆ ಸಚಿವರು ತೆರವುಗೊಳಿಸಿ ಆದೇಶ ಹೊರಡಿಸಿದ್ದಾರೆ.

ಈ ಹಿಂದೆ ಆಂಧ್ರಪ್ರದೇಶ ಮುಜರಾಯಿ ಇಲಾಖೆ ಹೆಚ್ಚುವರಿ ಕಾರ್ಯದರ್ಶಿಗಳು, ಕಿರಿಯ ಸ್ವಾಮೀಜಿಗಳ ನೇಮಕ ವಿಧಿವತ್ತಾಗಿಲ್ಲ ಎಂಬ ಕಾರಣ ಕೊಟ್ಟು ತಡೆಯಾಜ್ಞೆ ನೀಡಿದ್ದರು. ಆದರೆ ಮುಜರಾಯಿ ಸಚಿವ ಶಿವರಾಮು ರಾಜು ಈ ತಡೆಯಾಜ್ಞೆಯನ್ನು ತೆರವುಗೊಳಿಸಿರುವುದರಿಂದ ಕಿರಿಯ ಸ್ವಾಮೀಜಿಗಳ ಆಯ್ಕೆಯನ್ನು ಒಪ್ಪಿಕೊಂಡಂತಾಗಿದೆ.

ಇನ್ನು ಮುಂದೆ ಉತ್ತರಾಧಿಕಾರಿ ಸ್ವಾಮೀಜಿ ನಿರ್ವಹಿಸುವ ಎಲ್ಲ ಕಾರ್ಯಗಳನ್ನೂ ಸುವಿದ್ಯೇಂದ್ರ ತೀರ್ಥ ಸ್ವಾಮೀಜಿಗಳು ನಿರ್ವಹಿಸಬಹುದಾಗಿದೆ.

(ಇನ್ಫೋ ವಾರ್ತೆ)

ಮುಖಪುಟ / ಇವತ್ತು... ಈ ಹೊತ್ತು...

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+