ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಕುಶಾಲನಗರದಲ್ಲಿ ಮಂಗಳೂರು ವಿವಿ ಘಟಕ ಸ್ಥಾಪನೆಗೆ ಜಾಗ ಮಂಜೂರು
ಮಡಿಕೇರಿ : ಕುಶಾಲನಗರದ ಅಳುವರದಲ್ಲಿನ 40 ಎಕರೆ ಪ್ರದೇಶದಲ್ಲಿ ಮಂಗಳೂರು ವಿಶ್ವ ವಿದ್ಯಾಲಯದ ಕೊಡಗು ಘಟಕವನ್ನು ನಿರ್ಮಿಸಲು ಉದ್ದೇಶಿಸಲಾಗಿದೆ.
ಶೈಕ್ಷಣಿಕ ಕಾಯ್ದೆ 71ರ ಅನ್ವಯ ಈ ಜಾಗವನ್ನು ವಿಶ್ವ ವಿದ್ಯಾಲಯದ ಘಟಕ ಸ್ಥಾಪಿಸಲು ಮಂಜೂರು ಮಾಡಲಾಗಿದೆ. ಕುಶಾಲನಗರದಲ್ಲಿ ಸಿನ್ಚೋ ಫಾರ್ಮ್ಗೋಸ್ಕರ ಮೀಸಲಿಟ್ಟಿದ್ದ 200 ಎಕರೆ ಜಾಗದಲ್ಲಿ 60 ಎಕರೆ ಜಾಗವನ್ನು ವಿವಿ ಘಟಕಕ್ಕೆ ಮೀಸಲಿಡಲಾಗಿದೆ. ಈ ಯಶಸ್ಸಿನ ಹಿಂದೆ ಸ್ಥಳೀಯ ಚುನಾಯಿತ ಪ್ರತಿನಿಧಿಗಳ ಪ್ರಯತ್ನವನ್ನು ಕೊಡಗಿನ ವಿದ್ಯಾರ್ಥಿಗಳು ಅಭಿನಂದಿಸಿದ್ದಾರೆ.
ವಿಧಾನ ಪರಿಷತ್ ಸದಸ್ಯ ಎಂ. ಸಿ. ನಾಣಯ್ಯ ಹಾಗೂ ಸೆನೆಟ್ ಸದಸ್ಯ, ಶಾಸಕ ಅಪ್ಪಚ್ಚು ರಂಜನ್ ಅವರು ಕೊಡಗಿನಲ್ಲಿ ಮಂಗಳೂರು ವಿಶ್ವ ವಿದ್ಯಾಲಯದ ಘಟಕವನ್ನು ಸ್ಥಾಪಿಸುವಂತೆ ಈ ಹಿಂದೆ ವಿಶ್ವ ವಿದ್ಯಾಲಯಕ್ಕೆ ಪ್ರಸ್ತಾವನೆ ಸಲ್ಲಿಸಿದ್ದರು. ಈ ಪ್ರಸ್ತಾವನೆಯನ್ನು ಕೈಗೆತ್ತಿಕೊಂಡ ವಿವಿ ಸೆನೆಟ್, ಯಾವುದೇ ತಕರಾರಿಲ್ಲದೆ ಅಂಗೀಕಾರ ನೀಡಿದೆ.
(ಇನ್ಫೋ ವಾರ್ತೆ)
ಮುಖಪುಟ / ಇವತ್ತು... ಈ ಹೊತ್ತು...
Story first published: Thursday, March 14, 2002, 5:30 [IST]