ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗುಲ್ಬರ್ಗದಲ್ಲಿ ನಡೆಯಲಿರುವ ಹುತಾತ್ಮರ ದಿನಾಚರಣೆಗೆ ಸುಷ್ಮಾ ಸ್ವರಾಜ್‌

By Staff
|
Google Oneindia Kannada News

ಗುಲ್ಬರ್ಗ: ರಾಜ್ಯ ಹಿಂದಿ ಪ್ರಚಾರ ಸಭೆ, ಮಾರ್ಚ್‌ 23ರಂದು ಹುತಾತ್ಮರ ದಿನವನ್ನು ಆಚರಿಸಲಿದ್ದು, ಕಾರ್ಯಕ್ರಮ ಉದ್ಘಾಟನೆಗೆ ಕೇಂದ್ರ ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವೆ ಸುಷ್ಮಾ ಸ್ವರಾಜ್‌ ಆಗಮಿಸಲಿದ್ದಾರೆ.

ರಾಜ್ಯ ಹಿಂದಿ ಪ್ರಚಾರ ಸಭೆಯ ಅಧ್ಯಕ್ಷ ಮತ್ತು ಸ್ವಾತಂತ್ರ್ಯ ಹೋರಾಟಗಾರ ವಿದ್ಯಾಧರ ಗುರೂಜಿ ಈ ವಿಷಯವನ್ನು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. 1931ರ ಮಾರ್ಚ್‌ 23ರಂದು ಬ್ರಿಟಿಷರು ಗಲ್ಲು ಶಿಕ್ಷೆ ನೀಡಿ ಸಾಯಿಸಿದ ಸಾಹಿದ್‌ ಭಗತ್‌ಸಿಂಗ್‌ , ಸುಖದೇವ್‌ ಮತ್ತು ರಾಜಗುರು ಅವರ ಪುಣ್ಯತಿಥಿಯನ್ನು ಹುತಾತ್ಮರ ದಿನವನ್ನಾಗಿ ಹಿಂದಿ ಪ್ರಚಾರ ಸಭೆಯು ಪ್ರತಿ ವರ್ಷ ಆಚರಿಸುತ್ತಿದೆ.

ಈ ಸಂದರ್ಭದಲ್ಲಿ 10 ಲಕ್ಷ ರೂಪಾಯಿ ವೆಚ್ಚದಲ್ಲಿ ನಿರ್ಮಾಣವಾಗಲಿರುವ ಸಭಾಗೃಹಕ್ಕೆ ಸಚಿವೆ ಕೆಸರು ಕಲ್ಲು ಹಾಕಲಿದ್ದಾರೆ. ಯಾದಗಿರಿಯ ಸ್ವಾತಂತ್ರ್ಯ ಹೋರಾಟಗಾರ ಜಗದೇವಪ್ಪ ಹಳಬಾವಿ ಅವರು ಹಿಂದಿ ಪ್ರಚಾರ ಸಭೆಗೆ ನೀಡಿದ ದೇಣಿಗೆಯಲ್ಲಿ ಈ ಸಭಾಗೃಹ ನಿರ್ಮಾಣವಾಗುತ್ತಿದೆ.

ಹಿಂದಿ ಪ್ರಚಾರ ಸಭೆಯ ಕಾರ್ಯಚಟುವಟಿಕೆಗಳ ಬಗೆಗೆ ಹಾಗೂ ಹೈದರಾಬಾದ್‌ ಕರ್ನಾಟಕ ಪ್ರದೇಶದಲ್ಲಿನ ಕೆಲವು ಮಂದಿ ಸ್ವಾತಂತ್ರ್ಯ ಹೋರಾಟಗಾರ ಬಗ್ಗೆ ಸಾಕ್ಷ್ಯ ಚಿತ್ರ ತೆಗೆಯಲು ನಿರ್ಧರಿಸಿದೆ. ಈ ಚಿತ್ರದ ಮೂಹೂರ್ತವನ್ನೂ ಸುಷ್ಮಾ ಅವರು ಮಾಡುವರು. ಅಬ್ದುಲ್‌ ಹಕೀಮ್‌ ಸದಾರ್‌ ಅವರು ಈ ಚಿತ್ರವನ್ನು ನಿರ್ದೇಶಿಸುವರು. ಮಾರ್ಚ್‌ 23ರಂದೇ ಹೈದರಾಬಾದ್‌ ಕರ್ನಾಟಕ ಪ್ರದೇಶದಲ್ಲಿರುವ ಸ್ವಾತಂತ್ರ್ಯ ಹೋರಾಟಗಾರರ ಸಮಾವೇಶವೂ ನಡೆಯಲಿದ್ದು ಸುಮಾರು 500 ಮಂದಿ ಸ್ವಾತಂತ್ರ್ಯ ಹೋರಾಟಗಾರರು ಭಾಗವಹಿಸುವ ನಿರೀಕ್ಷೆಯಿದೆ.

(ಇನ್ಫೋ ವಾರ್ತೆ)

ಮುಖಪುಟ / ಇವತ್ತು... ಈ ಹೊತ್ತು...

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X