45 ಲಕ್ಷ ಹೆಕ್ಟೇರ್‌ ಭೂಮಿಗೆ ನೀರು, ರಾಜ್ಯ ಸರ್ಕಾರದಿಂದ ‘ಜಲ ನೀತಿ’

ಬೆಂಗಳೂರು: ಸಣ್ಣ, ಮಧ್ಯಮ ಹಾಗೂ ಬೃಹತ್‌ ನೀರಾವರಿ ಯೋಜನೆಗಳಡಿ 45 ಲಕ್ಷ ಹೆಕ್ಟೇರ್‌ ಭೂಮಿಗೆ ನೀರುಣಿಸುವ ಸಲುವಾಗಿ ರಾಜ್ಯ ಸರ್ಕಾರ ಜಲ ನೀತಿಯನ್ನು ರೂಪಿಸುವುದೆಂದು ರಾಜ್ಯಪಾಲೆ ವಿ.ಎಸ್‌. ರಮಾದೇವಿ ಹೇಳಿದ್ದಾರೆ.

2001-02 ನೇ ಅವಧಿಯಲ್ಲಿ ಬಹಳಷ್ಟು ಮಧ್ಯಮ ಹಾಗೂ ಬೃಹತ್‌ ನೀರಾವರಿ ಯೋಜನೆಗಳು ಪೂರ್ಣಗೊಂಡಿವೆ ಎಂದು ಸೋಮವಾರ ಆರಂಭವಾದ ಉಭಯ ಸದನಗಳನ್ನುದ್ದೇಶಿಸಿ ಮಾತನಾಡಿದ ರಮಾದೇವಿ ಹೇಳಿದರು.

ರಾಜ್ಯಪಾಲರ ಭಾಷಣದ ಮುಖ್ಯಾಂಶಗಳು :

  • 16 ಲಕ್ಷ ಹೆಕ್ಟೇರ್‌ ಭೂಮಿಗೆ ಅಂತರ್ಜಲ ಮೂಲಕ ನೀರುಣಿಸಲಾಗುವುದು.
  • ಬೆಳಗಾವಿ ಜಿಲ್ಲೆಯ ಹರಿನಾಲಾ, ಹಾಸನ ಜಿಲ್ಲೆಯ ಯಗಚಿ, ಗುಲ್ಬರ್ಗಾ ಜಿಲ್ಲೆಯ ಮುಲ್ಲಾಮರಿ ಹಾಗೂ ಕೊಡಗು ಜಿಲ್ಲೆಯ ಸೋಮವಾರಪೇಟೆ ನೀರಾವರಿ ಯೋಜನೆಗಳು ಪೂರ್ಣಗೊಂಡಿವೆ.
  • ಜಲ ಸಂವರ್ಧನೆ ಯೋಜನೆಯಡಿ ಮುಂದಿನ 5 ವರ್ಷಗಳಲ್ಲಿ ಕೆರೆಗಳ ನೀರು ಸಂಗ್ರಹ ಸಾಮರ್ಥ್ಯ ವೃದ್ಧಿ . ಈ ಯೋಜನೆಗೆ ವಿಶ್ವಬ್ಯಾಂಕ್‌ನಿಂದ 995 ಕೋಟಿ ರುಪಾಯಿ ನೆರವು ಕೇಳಲಾಗಿದೆ.
  • ವಿಶ್ವಬ್ಯಾಂಕ್‌ಗೆ ತನ್ನ ಯೋಜನೆಗಳನ್ನು ಮನವರಿಕೆ ಮಾಡಿಕೊಟ್ಟಿರುವ ಕರ್ನಾಟಕ 762 ಮಿಲಿಯನ್‌ ಡಾಲರ್‌ ಸಾಲ ಪಡೆಯುವಲ್ಲಿ ಯಶಸ್ವಿಯಾಗಿದೆ. ಅದರಲ್ಲಿ - ಕರ್ನಾಟಕ ಆರ್ಥಿಕ ಪುನರ್ರಚನೆ ಕಾರ್ಯಕ್ರಮ(150 ಮಿ.ಡಾ), ರಾಜ್ಯ ಹೆದ್ದಾರಿಗಳ ಅಭಿವೃದ್ಧಿ (360 ಮಿ.ಡಾ.), ವಾಟರ್‌ಷೆಡ್‌ ಅಭಿವೃದ್ಧಿ (100 ಮಿ.ಡಾ.), ಗ್ರಾಮೀಣ ನೀರು ಸರಬರಾಜು ಮತ್ತು ಒಳ ಚರಂಡಿ ಯೋಜನೆ- 2 ನೇ ಹಂತ(152 ಮಿ.ಡಾ.) ಸೇರಿವೆ.
  • ಮೂರು ವರ್ಷಗಳಲ್ಲಿ ಬೆಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಪೂರ್ಣ.
  • ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ನೆಪ್ರೋ-ಯೂರಾಲಜಿ ಕೇಂದ್ರ ಸ್ಥಾಪಿಸಿಲು, ಹಾಗೂ ಸುಟ್ಟ ಗಾಯಗಳಿಗೆ ಚರ್ಮ ಕಸಿ ಮಾಡುವ ಅತ್ಯಾಧುನಿಕ ಕೇಂದ್ರವನ್ನು ವಿಕ್ಟೋರಿಯಾ ಮತ್ತು ಬೌರಿಂಗ್‌ ಆಸ್ಪತ್ರೆಗಳಲ್ಲಿ ಸ್ಥಾಪಿಸಲು ಸರ್ಕಾರ ಉದ್ದೇಶಿಸಿದೆ.
  • 2001 ನೇ ಇಸವಿಯಲ್ಲಿ ರಾಜ್ಯ ಸರ್ಕಾರ 2.2 ಲಕ್ಷ ಮನೆಗಳನ್ನು ನಿರ್ಮಿಸಿದೆ.
(ಪಿಟಿಐ)

ಇದನ್ನೂ ಓದಿ..
ಮುಖಪುಟ / ಕೃಷ್ಣಗಾರುಡಿಯ ಕನ್ನಡಿ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+