ಮುಂಬಯಿ:ಯಶವಂತ ಚಿತ್ತಾಲರಿಗೆ ಶ್ರೀ ಗುರುನಾರಾಯಣ ಸಾಹಿತ್ಯ ಪ್ರಶಸ್ತಿ
ಮುಂಬಯಿ: ಬಿಲ್ಲವರ ಅಸೋಸಿಯೇಶನ್ ಪ್ರತಿವರ್ಷ ನೀಡುವ ಶ್ರೀ ಗುರುನಾರಾಯಣ ಸಾಹಿತ್ಯ ಪ್ರಶಸ್ತಿಗೆ ಈ ಬಾರಿ ಹಿರಿಯ ಸಾಹಿತಿ ಯಶವಂತ ಚಿತ್ತಾಲರು ಆಯ್ಕೆಯಾಗಿದ್ದಾರೆ.
ಬಿಲ್ಲವರ ಅಸೋಸಿಯೇಶನ್ನ ಗೌರವ ಪ್ರಧಾನ ಕಾರ್ಯದರ್ಶಿ ನಿತ್ಯಾನಂದ ಡಿ. ಕೋಟ್ಯಾನ್ ಈ ವಿಷಯವನ್ನು ಭಾನುವಾರ ಪ್ರಕಟಿಸಿದ್ದಾರೆ. ಅಕ್ಷಯ ಪತ್ರಿಕೆಯ ಪ್ರಧಾನ ಸಂಪಾದಕ, ಲೇಖಕ ಎಂ.ಬಿ. ಕುಕ್ಯಾನರು ಸ್ಥಾಪಿಸಿದ ಶಾಶ್ವತ ನಿಧಿಯಿಂದ ಗುರುನಾರಾಯಣ ಸಾಹಿತ್ಯ ಪ್ರಶಸ್ತಿಯನ್ನು ನೀಡಲಾಗುತ್ತಿದೆ. ಕೇವಲ ಮಹಾರಾಷ್ಟ್ರ ನಿವಾಸಿಗಳಿಗೆ ಮಾತ್ರ ಮೀಸಲಾಗಿರುವ ಈ ಪ್ರಶಸ್ತಿ ಈ ಬಾರಿ ಮುಂಬಯಿ ನಿವಾಸಿ, ಕಾದಂಬರಿಕಾರ, ಯಶವಂತ ಚಿತ್ತಾಲರಿಗೆ ಸಂದಿದೆ.
ಕವಿ. ಡಾ. ಸುನೀತಾ ಶೆಟ್ಟಿ ಹಾಗೂ ಡಾ. ವ್ಯಾಸರಾಯ ನಿಂಜೂರು ಅವರನ್ನೊಳಗೊಂಡ ಆಯ್ಕೆ ಸಮಿತಿ, ಕಳೆದ ಒಂದು ದಶಕದಲ್ಲಿ ಗಣನೀಯ ಸಾಧನೆ ಮಾಡಿ ವಿಮರ್ಶಕರ ಹಾಗೂ ವಾಚಕರ ಪ್ರಶಂಸೆಗೆ ಪಾತ್ರರಾದ ಚಿತ್ತಾಲರು ಈ ಪ್ರಶಸ್ತಿಗೆ ಅರ್ಹರೆಂದು ತೀರ್ಮಾನಿಸಿದೆ.
(ಇನ್ಫೋ ವಾರ್ತೆ)
ಮುಖಪುಟ / ಇವತ್ತು... ಈ ಹೊತ್ತು...












Click it and Unblock the Notifications