For Daily Alerts
ಮಂಡ್ಯ ಜಿಲ್ಲೆ ಕೀರ್ತನೂರು ಕೆರೆಯಲ್ಲಿ 7ಮಹಿಳೆಯರ ಜಲಸಮಾಧಿ
ಬೆಂಗಳೂರು : ಮಂಡ್ಯ ಜಿಲ್ಲೆಯ ಕೀರ್ತನೂರು ಕೆರೆಯಲ್ಲಿ ನಾಡದೋಣಿ ತಲೆ ಕೆಳಗಾದ ಪರಿಣಾಮ ಏಳು ಮಹಿಳೆಯರು ನೀರುಪಾಲಾಗಿದ್ದಾರೆ.
ಮಂಗಳವಾರ ಸಂಜೆ ಈ ದುರಂತ ಸಂಭವಿಸಿದ್ದು , ದೋಣಿ ಮುಳುಗಿ ನೀರುಪಾಲಾದ ಮಹಿಳೆಯರು ಸಮಭ ಗ್ರಾಮಕ್ಕೆ ಸೇರಿದವರೆಂದು ಬುಧವಾರ ಪೊಲೀಸರು ತಿಳಿಸಿದ್ದಾರೆ. ಬುಧವಾರ ಬೆಳಗಿನ ವೇಳೆಗೆ ಆರು ಮೃತ ದೇಹಗಳನ್ನು ನೀರಿನಿಂದ ಹೊರತೆಗೆಯಲಾಗಿದ್ದು , ಉಳಿದ ಇನ್ನೊಂದು ದೇಹದ ಹುಡುಕಾಟ ನಡೆದಿದೆ.
(ಪಿಟಿಐ)
ಮುಖಪುಟ / ಇವತ್ತು... ಈ ಹೊತ್ತು...
Story first published: Monday, December 24, 2001, 5:30 [IST]