ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ವರ್ಷದಿಂದ ತೆರಿಗೆ ಕಟ್ಟದ ಗೀತಾಂಜಲಿ ಥಿಯೇಟರ್ಗೆ ಸೀಲು
ಬೆಂಗಳೂರು : ಮಲ್ಲೇಶ್ವರಂ ಬಡಾವಣೆಯ ಗೀತಾಂಜಲಿ ಚಿತ್ರಮಂದಿರದಲ್ಲಿ ಸದ್ಯಕ್ಕೆ ಸಿನಿಮಾ ಪ್ರದರ್ಶನ ಇಲ್ಲ. ಕಾರಣ- ವಿದ್ಯುತ್ ಸಂಪರ್ಕವನ್ನು ಕಡಿತ ಮಾಡಿ, ಚಿತ್ರಮಂದಿರದ ಮುಖ್ಯ ದ್ವಾರವನ್ನು ಸೀಲ್ ಮಾಡಲಾಗಿದೆ.
ಬುಧವಾರ ಆದಾಯ ತೆರಿಗೆ ಹಾಗೂ ಕೆಪಿಟಿಸಿಎಲ್ ಅಧಿಕಾರಿಗಳು ಒಟ್ಟಾಗಿ ಬಂದು ಈ ಕ್ರಮ ಕೈಗೊಂಡಿದ್ದಾರೆ. ಅಧಿಕಾರಿಗಳು ಹೇಳುವಂತೆ 1987ರಿಂದ ಈ ಚಿತ್ರಮಂದಿರದ ಮಾಲೀಕರು ಆಸ್ತಿ ತೆರಿಗೆಯನ್ನು ಕಟ್ಟಿಲ್ಲ. ಪಾಲಿಕೆಗೆ ಅವರು ಕಟ್ಟಬೇಕಾಗಿರುವ ತೆರಿಗೆ 13.94 ಲಕ್ಷ ರುಪಾಯಿ. ಪದೇ ಪದೇ ನೋಟೀಸು ಕಳುಹಿಸಿದರೂ ಅದಕ್ಕೆ ಸ್ಪಂದಿಸದೆ ಇರುವ ಕಾರಣಕ್ಕೆ ಈ ಶಿಸ್ತು ಕ್ರಮ ಕೈಗೊಳ್ಳಲಾಗಿದೆ. ಕೆಪಿಟಿಸಿಎಲ್ ಅಧಿಕಾರಿಗಳು ಪ್ರೊಜೆಕ್ಟರ್ ಕೋಣೆಯಲ್ಲೇ ವಿದ್ಯುತ್ ಸಂಪರ್ಕವನ್ನು ಕಡಿತಗೊಳಿಸಿದ್ದಾರೆ.
(ಇನ್ಫೋ ವಾರ್ತೆ)
ಮುಖಪುಟ / ಇವತ್ತು... ಈ ಹೊತ್ತು...
Comments
Story first published: Monday, December 24, 2001, 5:30 [IST]