ಕಂಠೀರವದಲ್ಲಿ ಚಿಣ್ಣರ ಕಲರವ
(ಇನ್ಫೋ ಇನ್ಸೈಟ್)
ಬೆಂಗಳೂರು : ಭಾನುವಾರ ಮುಂಜಾನೆ ಒಂಬತ್ತೂವರೆ ಗಂಟೆ. ಕಂಠೀರವ ಕ್ರೀಡಾಂಗಣದಲ್ಲಿ ಬಣ್ಣ ಬಣ್ಣದ ಚಿಣ್ಣರು. ಅಂಕಲ್, ಆಟೋಗ್ರಾಫ್ ಕೊಡಿ ಅಂತ ಕನ್ನಡ- ಇಂಗ್ಲಿಷ್ ಎರಡೂ ಭಾಷೆಗಳಲ್ಲೂ ಕೋರಿಕೆ. ಮಕ್ಕಳ ಹಿಂಡಿನ ನಡುವೆ ಸಾಂಗ್ಲಿಯಾನ ಅಂಕಲ್. ಅಂಕಲ್ ಬರುವ ಮುನ್ನವೇ ಮಕ್ಕಳು ಅವರಿಗೆ ಸ್ವಾಗತದ ಬ್ಯಾನರ್ಗಳ ಹಿಡಿದು ನಿಂತಿದ್ದರು.
ಎಂ.ಜಿ.ರಸ್ತೆ ಕಿಷ್ಕಿಂಧೆಯಾದೀತೆಂಬ ಕಾರಣಕ್ಕೋ ಏನೋ ಮೊದಲ ಮಕ್ಕಳಾಟ ಕೂಟ ಕಂಠೀರವ ಕ್ರೀಡಾಂಗಣಕ್ಕೆ ಸ್ಥಳಾಂತರವಾಯಿತು. ಆದರೇನಂತೆ 35 ಸಾವಿರ ಮಕ್ಕಳ ಕಲರವ. ಇಂಥಾ ಒಂದು ಮಕ್ಕಳಾಟ ಆಯೋಜಿಸಿದ್ದಕ್ಕೆ ಎಲ್ಲರ ಬಾಯಲ್ಲೂ ಕೇಳಿಬರುತ್ತಿದ್ದ ಹೆಸರು ನಗರ ಪೊಲೀಸ್ ಕಮಿಷನರ್ ಎಚ್.ಟಿ.ಸಾಂಗ್ಲಿಯಾನ ಅವರದು. ಪೊಲೀಸ್ ಇಲಾಖೆ ಮತ್ತು ಸಾರಿಗೆ ಇಲಾಖೆ ಜಂಟಿಯಾಗಿ ಮಕ್ಕಳಾಟದ ಉಸ್ತುವಾರಿ ನೋಡಿಕೊಂಡರು. ಮೇಳಾಟದ ಪ್ರತಿ ಕ್ಷಣವನ್ನೂ ಸಾಂಗ್ಲಿಯಾನ ಮಕ್ಕಳೊಟ್ಟಿಗೇ ಕಳೆದದ್ದು ಇನ್ನೊಂದು ವಿಶೇಷ.
ಕೈಯಾಡಿಸಿ, ಬೂಟನ್ನು ನೆಲಕ್ಕೆ ಕುಟ್ಟಿ ಅಟೆಂನ್ಷನ್ ಪ್ಲೀಸ್ ಎಂದ ಸಾಂಗ್ಲಿಯಾನ ಅಂಕಲ್ ಕಡೆ ಚಿಣ್ಣರ ದೃಷ್ಟಿ ಹರಿಯಿತು. ಆಟಕ್ಕೆ ಅಲ್ಪವಿರಾಮ. ನಮ್ಮ ಬಳಿ ಪೊಲೀಸ್ ನಾಯಿಗಳಿವೆ. ಅವು ಕಳ್ಳರನ್ನು ಎಳೆದು ತಂದು ನಿಲ್ಲಿಸುತ್ತವೆ. ಬಾಂಬ್ಗಳನ್ನು ಹುಡುಕುತ್ತವೆ. ಅಂಡರ್ಗ್ರೌಂಡನಲ್ಲಿ ಬಾಂಬ್ ಇಟ್ಟಿದ್ದರೂ ನಾಯಿಗಳಿಗೆ ಅದು ಗೊತ್ತಾಗುತ್ತದೆ. ಇವೆಲ್ಲಾ ಬಂದೂಕುಗಳು. ತಪ್ಪು ಮಾಡುವವರಿಂದ ನಿಮ್ಮನ್ನು ಕಾಪಾಡಲು ಇದನ್ನು ನಾವು ಉಪಯೋಗಿಸುತ್ತೇವೆ.... ಸಾಂಗ್ಲಿಯಾನ ಅಂಕಲ್ ಪಾಠ ಹೇಳಿದರು.
ಬರೀ ಆಟವಲ್ಲ. ಶ್ವಾನ ಪ್ರದರ್ಶನ, ಮ್ಯಾಜಿಕ್ ಷೋ, ಸಿನಿಮಾಗಳು, ಚಲಿಸುವ ಕಾರ್ಟೂನ್ಗಳು ಇನ್ನೂ ಏನೇನೋ. ಬಣ್ಣ ಬಣ್ಣದ ಬಲೂನುಗಳು ಹಾರಿದವು. ಒಂದಷ್ಟು ಪೋರರು ಸ್ಕೇಟಿಂಗ್ ತೊಟ್ಟು ಸರಸರನೆ ಜಾರಿದರು. ಇನ್ನಷ್ಟು ಚಿಣ್ಣರು ಟ್ರೆೃಸಿಕಲ್, ಬೈಸಿಕಲ್ ಸವಾರಿ ಮಾಡಿ ಮಜಾ ಅನುಭವಿಸಿದರು. ದಣಿದ ಚಿಣ್ಣರಿಗೆ ತಿನಿಸುಗಳೂ ಇದ್ದವು.
ಮಕ್ಕಳಿಗೆ ಇದೊಂದು ಛೇಂಜ್. ಜೊತೆಗೆ ಕಲಿಯಲು ಒಳ್ಳೆಯ ವೇದಿಕೆ. ಪೊಲೀಸರ ಬಗ್ಗೆ ತಿಳಿಯುವ ಅಪರೂಪದ ಅವಕಾಶ. ಇಂತಾ ಅವಕಾಶ ಕಲ್ಪಿಸಿಕೊಟ್ಟ ಸಾಂಗ್ಲಿಯಾನ ಅವರಿಗೆ ಧನ್ಯವಾದಗಳು ಎನ್ನುತ್ತಾರೆ ತಮ್ಮ ಮಗನನ್ನು ಆಟಕ್ಕೆ ಕರೆ ತಂದಿದ್ದ ಒಬ್ಬ ಪೋಷಕರು.
ಸಾಕಷ್ಟು ಪೂರ್ವಸಿದ್ಧತೆ ಇರಲಿಲ್ಲ. ಎಂ.ಜಿ.ರೋಡಿನಲ್ಲಿ ಹಮ್ಮಿಕೊಳ್ಳಬೇಕೆಂದಿದ್ದ ಮಕ್ಕಳಾಟವನ್ನು ಹಠಾತ್ತಾಗಿ ಕಂಠೀರವಕ್ಕೆ ವರ್ಗಾಯಿಸಬೇಕಾಯಿತು. ಆದರೂ ಸಾಕಷ್ಟು ಮಕ್ಕಳು ಸೇರಿದ್ದರು. ಆಟದ ಜೊತೆಗೇ ಮಕ್ಕಳಿಗೆ ಒಳಿತು ಕೆಡಕಿನ ಪಾಠ ಕಲಿಸುವ ನನ್ನ ಆಶಯ ಈ ಮೂಲಕ ಪ್ರಾರಂಭವಾಗಿದೆ. ಇನ್ನು ಪ್ರತಿ ತಿಂಗಳ ಮೊದಲ ಭಾನುವಾರ ಇದು ಮುಂದುವರೆಯುತ್ತದೆ. ಇನ್ನೊಂದು ವರ್ಷ ಪ್ರತಿ ತಿಂಗಳ ಮೊದಲ ಭಾನುವಾರದ 2 ತಾಸನ್ನು ಮಕ್ಕಳಾಟಕ್ಕೇ ಮೀಸಲಿಟ್ಟಿದ್ದೇವೆ; ಇದೇ ಕಂಠೀರವ ಕ್ರೀಡಾಂಗಣದಲ್ಲಿ. ಮುಂದಿನ ತಿಂಗಳೂ ಎಲ್ಲಾ ಮಕ್ಕಳಿಗೂ ಸ್ವಾಗತ ಎಂದರು ಸಾಂಗ್ಲಿಯಾನ.
ಮುಖಪುಟ / ಇವತ್ತು... ಈ ಹೊತ್ತು...
-
ಶೀಘ್ರದಲ್ಲೇ ದ್ವಿತೀಯ PUC ಫಲಿತಾಂಶ ಪ್ರಕಟ: ರಿಸಲ್ಟ್ ಡೇಟ್, ಚೆಕ್ ಮಾಡುವ ವಿಧಾನ ಸೇರಿ ಸಂಪೂರ್ಣ ಮಾಹಿತಿ ಇಲ್ಲಿದೆ -
Viral Video: ಶಿಕ್ಷಕಿ ಬಿಟ್ಟುಹೋಗುವ ಸುದ್ದಿ ಕೇಳಿ ಕಣ್ಣೀರಿಟ್ಟ ಮಕ್ಕಳ ಮನಮುಟ್ಟುವ ವಿಡಿಯೋ ವೈರಲ್ -
NR Narayana Murthy: ಬೆಂಗಳೂರಿನ ಯುಬಿ ಸಿಟಿಯಲ್ಲಿ ಬರೋಬ್ಬರಿ ಇಷ್ಟು ಕೋಟಿ ಐಷಾರಾಮಿ ಮನೆ ಖರೀದಿ ಮಾಡಿದ ದಂಪತಿ -
ಮಾಂಗಲ್ಯ ಧಾರಣೆಗೆ 5 ನಿಮಿಷ ಬಾಕಿ ಇರುವಾಗ ಮದುವೆ ನಿಲ್ಲಿಸಿದ ವಧು! ವರನ ನಡೆಗೆ ನೆಟ್ಟಿಗರು ಫಿದಾ -
Bengaluru property: ಬೆಂಗಳೂರಿನಲ್ಲಿ ಕಡಿಮೆ ಬೆಲೆಗೆ ಪ್ರಾಪರ್ಟಿ ಸಿಗುವ 10 ಪ್ರದೇಶಗಳು, ಬಡವರೂ ಭೂಮಿ ಖರೀದಿಸಬಹುದು -
B-Khata: ಬಿ-ಖಾತಾ ಪರಿವರ್ತನೆಯಲ್ಲಿ ಹೊಸ ಸಮಸ್ಯೆ: 8 ಲಕ್ಷ ಆಸ್ತಿಗಳಲ್ಲಿ ಕೇವಲ 818ಕ್ಕೆ ಮಾತ್ರ ಎ-ಖಾತಾ -
Rashmika Mandanna: ಮದುವೆಯಾಗಿ ಒಂದೇ ತಿಂಗಳಿಗೆ ಈಗ ನಾವು ಮೂವರು ಎಂದ ರಶ್ಮಿಕಾ ಮಂದಣ್ಣ, ನೆಟ್ಟಿಗರು ಏನಂದ್ರು -
Gold Rate: ಮಾರುಕಟ್ಟೆಯಲ್ಲಿ ಚಿನ್ನ-ಬೆಳ್ಳಿ ಬೆಲೆ ತುಸು ಇಳಿಕೆ; ನಿಮ್ಮ ನಗರದಲ್ಲಿ ಇಂದಿನ ನಿಖರ ದರವೆಷ್ಟು ಗೊತ್ತೇ? -
Gold Rate: ಏಪ್ರಿಲ್ 4ರ ಚಿನ್ನ-ಬೆಳ್ಳಿ ದರ: ಬೆಂಗಳೂರಿನಲ್ಲಿ ಇಂದಿನ ನಿಖರ ಬೆಲೆ ಎಷ್ಟು? -
April 3 Horoscope: ಇಂದು ಯಾವ ರಾಶಿಗೆ ಲಾಭ, ಯಾರಿಗೆ ನಷ್ಟ? ಸಂಪೂರ್ಣ ವಿವರ -
Bengaluru vs Hyderabad: ಬೆಂಗಳೂರು ಹಿಂದಿಕ್ಕಿದ ಹೈದರಾಬಾದ್, ಸಿಲಿಕಾನ್ ಸಿಟಿಗೆ ಹಿನ್ನಡೆಯಾದ 2 ವಿಷಯಗಳು -
ಹೊಸ ಇಂಡಕ್ಷನ್ ಸ್ಟವ್ ಖರೀದಿಸುತ್ತಿದ್ದೀರಾ? ಹಾಗಾದರೆ ಬೆಸ್ಕಾಂ ನೀಡಿರುವ ಈ ಸಲಹೆ ಮರೆಯದಿರಿ












Click it and Unblock the Notifications