ಅಯ್ಯಪ್ಪ ಪ್ರಭಾವಳಿಯ ಪಂಪಾ ಕಣಿವೆಯಲ್ಲಿ‘18th Step Resort
ಕೊಚ್ಚಿ : ಶಬರಿಮಲೆಗೀಗ ಹೈಟೆಕ್ ರಂಗು. ಸ್ವಾಮಿ ಶರಣಂ ಅಯ್ಯಪ್ಪನ ಪ್ರಭಾವಳಿಯ ಪಂಪಾ ಕಣಿವೆಯಲ್ಲಿ ಇದೇ ಮೊದಲ ಬಾರಿಗೆ ಖಾಸಗಿ ವಲಯದ ರೆಸಾರ್ಟ್ ತಲೆಯೆತ್ತಿ ನಿಂತಿದೆ. 1.25 ಕೋಟಿ ರುಪಾಯಿ ಬಂಡವಾಳ ಹೂಡಿಕೆಯ ಈ ರೆಸಾರ್ಟ್ ಕಾರ್ಯಾರಂಭ ಭಾನುವಾರದಿಂದ.
ಪ್ರಸ್ತುತ 160 ಮಂದಿ ಯಾತ್ರಾರ್ಥಿಗಳು ತಂಗಲು ಅನುಕೂಲವಿರುವ ಈ ರೆಸಾರ್ಟ್ ಪೂರ್ಣಗೊಂಡ ನಂತರ ಇನ್ನೂ 320 ಮಂದಿಗೆ ಸೌಲಭ್ಯ ಒದಗಿಸಬಲ್ಲುದು ಎನ್ನುತ್ತಾರೆ ರೆಸಾರ್ಟ್ನ ರೂವಾರಿ ಬಿಜು ಆಂಟೋನಿ. ಅಯ್ಯಪ್ಪನ ಯಾತ್ರಾರ್ಥಿಗಳಿಗೆ ಈ ರೆಸಾರ್ಟ್ನಲ್ಲಿ ಸಕಲ ಸೌಲಭ್ಯಗಳು ಲಭ್ಯ. ದಣಿವು ಕಳಕೊಳ್ಳಲಿಕ್ಕೆ, ಚೈತನ್ಯ ತುಂಬಿಕೊಳ್ಳಲಿಕ್ಕೊಂದು ತಾವು.
ಸಸ್ಯಾಹಾರಿ ಊಟದ ಸೌಲಭ್ಯವಿದೆ. ಆಂಧ್ರ, ತಮಿಳುನಾಡು, ಕೇರಳ ಮೂರೂ ಬಗೆಯ ಆಹಾರ ವೈವಿಧ್ಯ ಯಾತ್ರಾರ್ಥಿಗಳ ಆಯ್ಕೆಗುಂಟು. ಕರ್ನಾಟಕದಿಂದ ಹೆಚ್ಚಿನ ಭಕ್ತರು ಶಬರಿಮಲೆಗೆ ಆಗಮಿಸುತ್ತಿದ್ದರೂ, ರೆಸಾರ್ಟ್ನಲ್ಲಿ ಕರ್ನಾಟಕದ ಆಹಾರದ ಬಗೆಗೆ ಯಾವುದೇ ಸುದ್ದಿ ಲಭ್ಯವಿಲ್ಲ . ಕನ್ನಡಿಗರಾರೂ ಈ ಬಗ್ಗೆ ತಲೆ ಕೆಡಿಸಿಕೊಂಡೂ ಇಲ್ಲ .
ಮುಂದಿನ ಯಾತ್ರಾಋತುವಿನ ಹೊತ್ತಿಗೆ ಹತ್ತು ಕಾಟೇಜುಗಳು ಸಿದ್ಧವಾಗುತ್ತವೆ, ಹೆಚ್ಚಿನ ಸೌಲಭ್ಯಗಳೂ ಕೂಡ. ಇಲ್ಲಿ ಕಾಲ ಹಂಚಿಕೆ ಅವಕಾಶವೂ ಉಂಟು ಎನ್ನುತ್ತಾರೆ ಬಿಜು. ಅಂದರೆ ಒಟ್ಟಿಗೆ 4 ಸಾವಿರ ರುಪಾಯಿ ನೀಡಿ ರೆಸಾರ್ಟ್ನ ಮೆಂಬರ್ಷಿಪ್ ಪಡೆದಲ್ಲಿ : ಮಂಡಲ- ಮಕರವಿಲಕ್ಕು ಅವಧಿಯ ಎರಡು ರಾತ್ರಿ ಹಾಗೂ ತಿಂಗಳ ಪೂಜೆ ಅವಧಿಯಲ್ಲಿ ಮೂರು ದಿನಗಳ ಕಾಲ ರೆಸಾರ್ಟ್ನಲ್ಲಿ ತಂಗಬಹುದು. ಈ ಸೌಲಭ್ಯ 5 ವರ್ಷಗಳ ಕಾಲಾವಧಿಯದು.
ರೆಸಾರ್ಟ್ನ ಸದಸ್ಯತ್ವ ಪಡೆದವರು 5 ವರ್ಷಗಳ ಅವಧಿಯ 50 ಸಾವಿರ ರುಪಾಯಿಯ ವೈಯಕ್ತಿಕ ಅಪಘಾತ ವಿಮೆಗೆ ಅರ್ಹರು. ಅಂದಹಾಗೆ- ಈ ರೆಸಾರ್ಟ್ನ ಹೆಸರು 18 ನೇ ಮೆಟ್ಟಿಲ ರೆಸಾರ್ಟ್(18th Step Resorts). ಪಂಪಾದಿಂದ 19 ಕಿಮೀ ದೂರದಲ್ಲಿ , ಇರುಮೇಲಿ- ಪಂಪಾ ಶಬರಿ ಹೆದ್ದಾರಿಯಲ್ಲಿದೆ. ಈ ಬಾರಿಯ ನಿಮ್ಮ ಶಬರಿಮಲೆ ಯಾತ್ರೆ ಸುಖಕರವಾಗಿರಲಿ!
(ಪಿಟಿಐ)
ಪಂಪಾಕ್ಷೇತ್ರದ ಸುತ್ತಮುತ್ತ
ಮುಖಪುಟ / ಇವತ್ತು... ಈ ಹೊತ್ತು...
-
ಶೀಘ್ರದಲ್ಲೇ ದ್ವಿತೀಯ PUC ಫಲಿತಾಂಶ ಪ್ರಕಟ: ರಿಸಲ್ಟ್ ಡೇಟ್, ಚೆಕ್ ಮಾಡುವ ವಿಧಾನ ಸೇರಿ ಸಂಪೂರ್ಣ ಮಾಹಿತಿ ಇಲ್ಲಿದೆ -
Viral Video: ಶಿಕ್ಷಕಿ ಬಿಟ್ಟುಹೋಗುವ ಸುದ್ದಿ ಕೇಳಿ ಕಣ್ಣೀರಿಟ್ಟ ಮಕ್ಕಳ ಮನಮುಟ್ಟುವ ವಿಡಿಯೋ ವೈರಲ್ -
NR Narayana Murthy: ಬೆಂಗಳೂರಿನ ಯುಬಿ ಸಿಟಿಯಲ್ಲಿ ಬರೋಬ್ಬರಿ ಇಷ್ಟು ಕೋಟಿ ಐಷಾರಾಮಿ ಮನೆ ಖರೀದಿ ಮಾಡಿದ ದಂಪತಿ -
ಮಾಂಗಲ್ಯ ಧಾರಣೆಗೆ 5 ನಿಮಿಷ ಬಾಕಿ ಇರುವಾಗ ಮದುವೆ ನಿಲ್ಲಿಸಿದ ವಧು! ವರನ ನಡೆಗೆ ನೆಟ್ಟಿಗರು ಫಿದಾ -
Bengaluru property: ಬೆಂಗಳೂರಿನಲ್ಲಿ ಕಡಿಮೆ ಬೆಲೆಗೆ ಪ್ರಾಪರ್ಟಿ ಸಿಗುವ 10 ಪ್ರದೇಶಗಳು, ಬಡವರೂ ಭೂಮಿ ಖರೀದಿಸಬಹುದು -
B-Khata: ಬಿ-ಖಾತಾ ಪರಿವರ್ತನೆಯಲ್ಲಿ ಹೊಸ ಸಮಸ್ಯೆ: 8 ಲಕ್ಷ ಆಸ್ತಿಗಳಲ್ಲಿ ಕೇವಲ 818ಕ್ಕೆ ಮಾತ್ರ ಎ-ಖಾತಾ -
Rashmika Mandanna: ಮದುವೆಯಾಗಿ ಒಂದೇ ತಿಂಗಳಿಗೆ ಈಗ ನಾವು ಮೂವರು ಎಂದ ರಶ್ಮಿಕಾ ಮಂದಣ್ಣ, ನೆಟ್ಟಿಗರು ಏನಂದ್ರು -
Gold Rate: ಮಾರುಕಟ್ಟೆಯಲ್ಲಿ ಚಿನ್ನ-ಬೆಳ್ಳಿ ಬೆಲೆ ತುಸು ಇಳಿಕೆ; ನಿಮ್ಮ ನಗರದಲ್ಲಿ ಇಂದಿನ ನಿಖರ ದರವೆಷ್ಟು ಗೊತ್ತೇ? -
Gold Rate: ಏಪ್ರಿಲ್ 4ರ ಚಿನ್ನ-ಬೆಳ್ಳಿ ದರ: ಬೆಂಗಳೂರಿನಲ್ಲಿ ಇಂದಿನ ನಿಖರ ಬೆಲೆ ಎಷ್ಟು? -
April 3 Horoscope: ಇಂದು ಯಾವ ರಾಶಿಗೆ ಲಾಭ, ಯಾರಿಗೆ ನಷ್ಟ? ಸಂಪೂರ್ಣ ವಿವರ -
Bengaluru vs Hyderabad: ಬೆಂಗಳೂರು ಹಿಂದಿಕ್ಕಿದ ಹೈದರಾಬಾದ್, ಸಿಲಿಕಾನ್ ಸಿಟಿಗೆ ಹಿನ್ನಡೆಯಾದ 2 ವಿಷಯಗಳು -
ಹೊಸ ಇಂಡಕ್ಷನ್ ಸ್ಟವ್ ಖರೀದಿಸುತ್ತಿದ್ದೀರಾ? ಹಾಗಾದರೆ ಬೆಸ್ಕಾಂ ನೀಡಿರುವ ಈ ಸಲಹೆ ಮರೆಯದಿರಿ












Click it and Unblock the Notifications