ಮೈಸೂರು ಝೂನಿಂದ ಹುಲ್ಲೆ, ಹುಲಿ, ಆನೆ ದತ್ತು ಪಡೆಯುತ್ತೀರಾ?
ಮೈಸೂರು : ಪುಟ್ಟ ನಾಯಿ ಮರಿಯನ್ನೋ, ಬೆಕ್ಕಿನ ಮರಿಯನ್ನೋ ಮನೆಗೆ ತಂದು ಸಾಕುವವರು ಹಲವರಿದ್ದಾರೆ. ಈ ಪ್ರಾಣಿ ಪ್ರೇಮಿಗಳಿಗೆ ಹುಲಿಮರಿಯನ್ನೋ ಆನೆಯ ಮರಿಯನ್ನೋ ಸಾಕಬೇಕು ಎಂಬ ಹಂಬಲವಿದ್ದರೂ, ಅವಕಾಶ, ಅನುಮತಿ, ಜಾಗ ಇಲ್ಲದೆ ತಮ್ಮ ಆಸೆಯನ್ನು ಮನದಲ್ಲೇ ನುಂಗಿಕೊಳ್ಳುತ್ತಾರೆ.
ಇಂತಹ ಪ್ರಾಣಿ ಪ್ರೇಮಿಗಳಿಗೆ ವನ್ಯಪ್ರಾಣಿಗಳನ್ನು ಪೋಷಿಸಿದ ತೃಪ್ತಿ ದೊರಕಿಸಿಕೊಡುವ ಕಾರ್ಯಕ್ರಮವೊಂದನ್ನು ವಿಶ್ವವಿಖ್ಯಾತ ಮೈಸೂರು ಮೃಗಾಲಯ ಹಾಕಿಕೊಂಡಿದೆ. ವನ್ಯಜೀವಿ ಸಂರಕ್ಷಣೆಯಲ್ಲಿ ಸಾರ್ವಜನಿಕರನ್ನೂ ತೊಡಗಿಸಿಕೊಳ್ಳುವ ಪ್ರಯತ್ನ ಇದಾಗಿದೆ.
ಪ್ರಾಣಿಗಳನ್ನು ದತ್ತು ಸ್ವೀಕರಿಸುವ ಹೊಸ ಯೋಜನೆಯಡಿ ಶ್ರೀಚಾಮರಾಜೇಂದ್ರ ಮೃಗಾಲಯದಲ್ಲಿರುವ ಪಕ್ಷಿ - ಪ್ರಾಣಿಗಳನ್ನು ದತ್ತುಪಡೆಯಲು ನಿಮಗೂ ಅವಕಾಶ ಇದೆ. (ದತ್ತು ಪಡೆದೆವೆಂದು ಅವನ್ನು ನೀವು ಮನೆಗೆ ಕೊಂಡೊಯ್ಯುವಂತಿಲ್ಲ ಅಷ್ಟೇ) ಮೃಗಾಲಯದಲ್ಲಿರುವ ನೂರಾರು ಪ್ರಾಣಿ ಪಕ್ಷಿಗಳ ನಿರ್ವಹಣೆ ಪ್ರಸಕ್ತ ಸನ್ನಿವೇಶದಲ್ಲಿ ಅತಿ ದುಬಾರಿ ಆಗಿದೆ.
ಲಭ್ಯವಿರುವ ಸಂಪನ್ಮೂಲದಲ್ಲಿ ಪ್ರಾಣಿಗಳನ್ನು ತುಂಬಾ ಚೆನ್ನಾಗಿ ನೋಡಿಕೊಳ್ಳುವುದು ಕಷ್ಟ. ಹೀಗಾಗೇ ಸಾರ್ವಜನಿಕರಿಂದ ಪ್ರಾಣಿಗಳ ಪೋಷಣೆಗೆ ನೆರವು ಪಡೆಯಲು ತೀರ್ಮಾನಿಸಲಾಗಿದೆ ಎಂದು ಮೃಗಾಲಯದ ಅಧಿಕಾರಿಗಳು ತಿಳಿಸಿದ್ದಾರೆ.
ನೀವು ಪುಟ್ಟ ಪಕ್ಷಿಯಾಂದನ್ನು ದತ್ತು ಪಡೆದು - ಅದರ ಒಂದು ವರ್ಷದ ಪಾಲನೆಯ ಹೊಣೆ ಹೊರುವುದಾದರೆ, 500 ರುಪಾಯಿ ಕೊಟ್ಟರೆ ಸಾಕು. (ಆ ಪಕ್ಷಿ ನಿಮ್ಮ ಹೆಸರು ಹೇಳಿಕೊಂಡು ಹೊಟ್ಟೆ ತುಂಬಾ ತಿನ್ನುತ್ತದೆ! ) ಇಲ್ಲ .. ಸಾಕ್ತಾ ಸಾಕ್ತಾ ದೊಡ್ಡ ಪ್ರಾಣೀನೇ ಸಾಕ್ತೀನಿ ಅನ್ನುವುದಾದರೆ, ಆನೆಯನ್ನೇ ದತ್ತು ಪಡೆಯಬಹುದು. ಆನೆಯಾಂದರ ವಾರ್ಷಿಕ ಪೋಷಣೆಗೆ 1.59 ಲಕ್ಷ ರುಪಾಯಿಗಳಾದರೆ, ಸಿಂಹಕ್ಕೆ 90ರಿಂದ 95 ಸಾವಿರ ರುಪಾಯಿ. ಹುಲಿಯಾಂದಕ್ಕೆ 80ರಿಂದ 85 ಸಾವಿರ ಹಾವು ಹಾಗೂ ನವಿಲಿಗೆ ಕೇವಲ ಐದೇ ಸಾವಿರ. ಹೆಚ್ಚಿನ ವಿವರಗಳಿಗೆ ಮೈಸೂರು ಮೃಗಾಲಯದ ನಿರ್ದೇಶಕ ಕುಮಾರ್ ಪುಷ್ಕರ್ ಅವರನ್ನು ಸಂಪರ್ಕಿಸಬಹುದು.
(ಇನ್ಫೋ ವಾರ್ತೆ)
ವಾರ್ತಾ ಸಂಚಯ
ಮುಖಪುಟ / ಇವತ್ತು... ಈ ಹೊತ್ತು...
-
ಶೀಘ್ರದಲ್ಲೇ ದ್ವಿತೀಯ PUC ಫಲಿತಾಂಶ ಪ್ರಕಟ: ರಿಸಲ್ಟ್ ಡೇಟ್, ಚೆಕ್ ಮಾಡುವ ವಿಧಾನ ಸೇರಿ ಸಂಪೂರ್ಣ ಮಾಹಿತಿ ಇಲ್ಲಿದೆ -
Viral Video: ಶಿಕ್ಷಕಿ ಬಿಟ್ಟುಹೋಗುವ ಸುದ್ದಿ ಕೇಳಿ ಕಣ್ಣೀರಿಟ್ಟ ಮಕ್ಕಳ ಮನಮುಟ್ಟುವ ವಿಡಿಯೋ ವೈರಲ್ -
NR Narayana Murthy: ಬೆಂಗಳೂರಿನ ಯುಬಿ ಸಿಟಿಯಲ್ಲಿ ಬರೋಬ್ಬರಿ ಇಷ್ಟು ಕೋಟಿ ಐಷಾರಾಮಿ ಮನೆ ಖರೀದಿ ಮಾಡಿದ ದಂಪತಿ -
ಮಾಂಗಲ್ಯ ಧಾರಣೆಗೆ 5 ನಿಮಿಷ ಬಾಕಿ ಇರುವಾಗ ಮದುವೆ ನಿಲ್ಲಿಸಿದ ವಧು! ವರನ ನಡೆಗೆ ನೆಟ್ಟಿಗರು ಫಿದಾ -
Bengaluru property: ಬೆಂಗಳೂರಿನಲ್ಲಿ ಕಡಿಮೆ ಬೆಲೆಗೆ ಪ್ರಾಪರ್ಟಿ ಸಿಗುವ 10 ಪ್ರದೇಶಗಳು, ಬಡವರೂ ಭೂಮಿ ಖರೀದಿಸಬಹುದು -
B-Khata: ಬಿ-ಖಾತಾ ಪರಿವರ್ತನೆಯಲ್ಲಿ ಹೊಸ ಸಮಸ್ಯೆ: 8 ಲಕ್ಷ ಆಸ್ತಿಗಳಲ್ಲಿ ಕೇವಲ 818ಕ್ಕೆ ಮಾತ್ರ ಎ-ಖಾತಾ -
Rashmika Mandanna: ಮದುವೆಯಾಗಿ ಒಂದೇ ತಿಂಗಳಿಗೆ ಈಗ ನಾವು ಮೂವರು ಎಂದ ರಶ್ಮಿಕಾ ಮಂದಣ್ಣ, ನೆಟ್ಟಿಗರು ಏನಂದ್ರು -
Gold Rate: ಮಾರುಕಟ್ಟೆಯಲ್ಲಿ ಚಿನ್ನ-ಬೆಳ್ಳಿ ಬೆಲೆ ತುಸು ಇಳಿಕೆ; ನಿಮ್ಮ ನಗರದಲ್ಲಿ ಇಂದಿನ ನಿಖರ ದರವೆಷ್ಟು ಗೊತ್ತೇ? -
Gold Rate: ಏಪ್ರಿಲ್ 4ರ ಚಿನ್ನ-ಬೆಳ್ಳಿ ದರ: ಬೆಂಗಳೂರಿನಲ್ಲಿ ಇಂದಿನ ನಿಖರ ಬೆಲೆ ಎಷ್ಟು? -
April 3 Horoscope: ಇಂದು ಯಾವ ರಾಶಿಗೆ ಲಾಭ, ಯಾರಿಗೆ ನಷ್ಟ? ಸಂಪೂರ್ಣ ವಿವರ -
Bengaluru vs Hyderabad: ಬೆಂಗಳೂರು ಹಿಂದಿಕ್ಕಿದ ಹೈದರಾಬಾದ್, ಸಿಲಿಕಾನ್ ಸಿಟಿಗೆ ಹಿನ್ನಡೆಯಾದ 2 ವಿಷಯಗಳು -
ಹೊಸ ಇಂಡಕ್ಷನ್ ಸ್ಟವ್ ಖರೀದಿಸುತ್ತಿದ್ದೀರಾ? ಹಾಗಾದರೆ ಬೆಸ್ಕಾಂ ನೀಡಿರುವ ಈ ಸಲಹೆ ಮರೆಯದಿರಿ












Click it and Unblock the Notifications