ವೀರನ ಹೊಸಹಳ್ಳಿ ಅರಣ್ಯದಲ್ಲಿ ಆನೆ ಬಲರಾಮ ಪತ್ತೆಯಾಗಿದ್ದಾನೆ
ಮೈಸೂರು : ಮೂರ್ಕಲ್ನ ಆನೆ ಕ್ಯಾಂಪ್ನಿಂದ ನಾಪತ್ತೆಯಾಗಿದ್ದ , ಜಂಬೂಸವಾರಿಯ ಚಿನ್ನದಂಬಾರಿ ಹೊರುವ ಗಜರಾಜ ‘ ಬಲರಾಮನ’ ಜಾಡು ಕೊನೆಗೂ ಸಿಕ್ಕಿದೆ. ವೀರನ ಹೊಸ ಹಳ್ಳಿ ಅರಣ್ಯದಲ್ಲಿ ಶುಕ್ರವಾರ ರಾತ್ರಿ ಈ ಜಾಡು ಪತ್ತೆಯಾಗಿದೆ.
ಹುಣಸೂರು ವಲಯದ ಉಪ ಅರಣ್ಯಸಂರಕ್ಷಣಾಧಿಕಾರಿ ಅಣ್ಣಯ್ಯ, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಮೋಟಪ್ಪ ಅವರು ಪಶುವೈದ್ಯಾಧಿಕಾರಿ ಡಾ. ಬಿಟ್ಟಿಯಪ್ಪ, ವಲಯ ಅಧಿಕಾರಿ ಸುರೇಶ್ ಹೆಗಡೆ ಮತ್ತು ಸಿಬ್ಬಂದಿ ವರ್ಗದವರೊಂದಿಗೆ ಬಲರಾಮನಿಗಾಗಿ ನಡೆಸಿದ ಶೋಧದಲ್ಲಿ ಯಶಸ್ವಿಯಾಗಿದ್ದಾರೆ.
ಕೆಲವೆಡೆ ಬಲರಾಮನ ಹೆಜ್ಜೆ ಗುರುತು ಮತ್ತು ಸರಪಳಿ ಎಳೆದುಕೊಂಡು ಹೋಗಿರುವ ಗುರುತುಗಳು ಕಂಡು ಬಂದಿದ್ದು, ಆ ಜಾಡಿನಲ್ಲಿ ಶೋಧ ಮುಂದುವರೆದಿತ್ತು. ಆಗಾಗ್ಗೆ ಮದವೇರಿ ಹೆಣ್ಣಾನೆಯನ್ನು ಹುಡುಕಿಕೊಂಡು ಹೋಗುತ್ತಿದ್ದ ಬಲರಾಮ ಒಂದೆರಡು ಕಿಲೋಮೀಟರ್ ಅಂತರದಲ್ಲಿ ಕಾಣಸಿಗುತ್ತಿದ್ದ.
ಆದರೆ ಈ ಬಾರಿ ಬಲರಾಮ, ಅಧಿಕಾರಿಗಳು ದಿನಗಟ್ಟಲೆ ಹುಡುಕುವಂತೆ ಮಾಡಿದ. ದ್ರೋಣ ಬದುಕಿದ್ದ ಸಮಯದಲ್ಲಿ ತನ್ನ ತುಂಟಾಟದಿಂದ ಮಾವುತನೊಬ್ಬನನ್ನು ಸಾಯಿಸಿದ್ದ ಬಲರಾಮ, ದ್ರೋಣನ ಸಾವಿನ ನಂತರ ದಸರಾ ಅಂಬಾರಿ ಹೊರಬಲ್ಲನೇ ಎಂಬ ಸಂಶಯ ಎಲ್ಲರನ್ನೂ ಕಾಡಿತ್ತು. ಆದರೆ ಕಳೆದ ಮೂರು ವರ್ಷಗಳಿಂದ ಬಲರಾಮ ದಸರಾ ಅಂಬಾರಿ ಹೊರುತ್ತಿದ್ದಾನೆ.
(ಇನ್ಫೋ ವಾರ್ತೆ)
ಮುಖಪುಟ / ಇವತ್ತು... ಈ ಹೊತ್ತು...
-
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO












Click it and Unblock the Notifications