ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಶಿವಮೊಗ್ಗ ಎಪಿಎಂಸಿ ಮಾರುಕಟ್ಟೆಯಲ್ಲಿ ಅಡಿಕೆ ಖರೀದಿ ಪುನರಾರಂಭ
ಶಿವಮೊಗ್ಗ : ಕಳೆದ ತಿಂಗಳು ಸ್ಥಗಿತಗೊಂಡಿದ್ದ ಅಡಿಕೆ ವ್ಯವಹಾರವು ಸೆಫ್ಟಂಬರ್ 1ರ ಶನಿವಾರದಿಂದ ಮತ್ತೆ ಆರಂಭವಾಗಲಿದೆ.
ಬುಧವಾರ ಎಪಿಎಂಸಿ ಅಧ್ಯಕ್ಷ ಪಿ. ರಮೇಶ್ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಈ ನಿರ್ಧಾರ ಪ್ರಕಟಿಸಲಾಗಿದೆ. ಅಡಿಕೆ ವರ್ತಕರು ಮತ್ತು ಎಪಿಎಂಸಿ ಅಧ್ಯಕ್ಷರ ನಡುವೆ ಸಾಕಷ್ಟು ಚರ್ಚೆ, ವಾಗ್ವಾದಗಳು ನಡೆದ ನಂತರ ಈ ನಿರ್ಣಯವನ್ನು ತೆಗೆದುಕೊಳ್ಳಲಾಗಿದೆ.
ಅಡಿಕೆ ವರ್ತಕರ ಬಗ್ಗೆ ಎಪಿಎಂಸಿ ಅಧ್ಯಕ್ಷರು ಗೌರವ ನೀಡಿ ಮಾತನಾಡಬೇಕು . ಅವರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕಾರ್ಯಾಚರಿಸಬೇಕು ಎಂಬ ಬಗ್ಗೆ ಸಭೆಯಲ್ಲಿ ಚರ್ಚೆ ನಡೆಯಿತು.
(ಇನ್ಫೋ ವಾರ್ತೆ)
Comments
Story first published: Thursday, August 30, 2001, 0:00 [IST]