ಸೀರೆ ನೋಡಿಯೇ ಉಟ್ಟುಕೊಂಡಷ್ಟು ಖುಷಿ ಪಟ್ಟರು ಮೇಡಂ ಷೇಬಾ
ನವದೆಹಲಿ : ಮುಷರ್ರಫ್ ಅವರ ಪತ್ನಿ ಬೇಗಂ ಷೇಬಾ ಆಗಮನಕ್ಕಾಗಿ ಇಲ್ಲಿನ ಕಾಟೇಜ್ ಎಂಪೋರಿಯಂ ಸಾಕಷ್ಟು ಸಿದ್ಧತೆಗಳನ್ನು ನಡೆಸಿತ್ತು . ಕಣ್ಕುಕ್ಕುವ ಬಣ್ಣ ಬಣ್ಣದ ನೂರಾರು ಸೀರೆಗಳನ್ನು ಬೇಗಂ ಅವರಿಗೆ ಎದ್ದು ಕಾಣಿಸುವಂತೆ ಎಂಪೋರಿಯಂನ ಕೆಲಸಗಾರರು ಜೋಡಿಸಿದ್ದರು. ಏನು ಪ್ರಯೋಜನ ಹೇಳಿ, ಬೇಗಂ ಬಂದರು, ಸೀರೆಗಳನ್ನು ನೋಡಿದರು, ಕಣ್ಣಿನಲ್ಲಿಯೇ ತೃಪ್ತಿ ಸೂಸಿದರು, ಬರಿಗೈಯ್ಯಲ್ಲೇ ವಾಪಸ್ಸಾದರು !
ಬೇಗಂ ಬಂದರು, ಬಂದಂತೆಯೇ ಮರಳಿದರು ಎಂದು ಅಂಗಡಿಯ ಮಹಿಳಾ ಕೆಲಸಗಾರರು ತಮ್ಮ ಶ್ರಮ ವ್ಯರ್ಥವಾದ ಅಸಮಾಧಾನವನ್ನು ಬಹಿರಂಗಗೊಳಿಸಲು ಮುಜುಗರ ಪಡಲಿಲ್ಲ . ಅಂಗಡಿಯ ವ್ಯವಸ್ಥಾಪಕರಿಗೆ ಮಾತ್ರ ಪಾಕ್ ಅಧ್ಯಕ್ಷರ ಪತ್ನಿ ತಮ್ಮ ಅಂಗಡಿಗೆ ಬಂದು ಹೋದದ್ದೇ ಒಂಥರಾ ಸಮಾಧಾನ. ಬೇಗಂ ನಮ್ಮ ಅಂಗಡಿಯಲ್ಲಿ ಹೊಸ ಅಲೆ ಎಬ್ಬಿಸಿದ್ದಾರೆ. ದೆಹಲಿಗೆ ಯಾವ ವಿದೇಶಿಯರು ಬಂದರೂ ನಮ್ಮ ಅಂಗಡಿಯಲ್ಲಿ ಇಷ್ಟೊಂದು ರಶ್ ಆಗಿರಲಿಲ್ಲ ಎನ್ನುತ್ತಾರೆ ಎಂಪೋರಿಯಂನ ವ್ಯವಸ್ಥಾಪಕ ನಿರ್ದೇಶಕ ದುರ್ಗೇಶ್ ಶಂಕರ್.
ಸೀರೆ ಉಡುವ ಕಲೆ ಬೇಗಂ ಅವರಿಗೆ ಗೊತ್ತಿಲ್ಲ
ನೂರಾರು ಸೀರೆಗಳನ್ನು ಅಂಗಡಿಯ ಮಂದಿ ಮುಂದೆ ಸುರಿದಾಗ ಅವುಗಳನ್ನೆಲ್ಲ ಬೇಗಂ ನೋಡಿದರು. ಮುಗುಳು ನಗೆ ಬೀರಿ ನಾನು ಏನನ್ನು ಕೊಳ್ಳುವುದಿಲ್ಲ ಎಂದು ಸ್ಪಷ್ಟವಾಗಿ ಹೇಳಿದರು. ನಾನು ಸೀರೆ ಉಡುವುದಿಲ್ಲ , ನನಗೆ ಸೀರೆ ಉಡುವುದು ಗೊತ್ತಿಲ್ಲ . ಆದರೆ, ಸೀರೆ ಉಡುವ ಅನುಭವ ಪಡೆಯಲು ಆಸೆಯಾಗಿದೆ. ನಿಜ ಹೇಳಬೇಕೆಂದರೆ ಸೀರೆ ಉಟ್ಟಷ್ಟೇ ನನಗೆ ಸಂತೋಷವಾಗಿದೆ ಎಂದು ಬೇಗಂ ಹೇಳಿದರು.
ಸೀರೆ ಬೇಡ ಬಿಡಿ, ಸಲ್ವಾರ್ ಕಮೀಜ್ ಆದರೂ ಕೊಳ್ಳಿ-
ಊಹ್ಞೂಂ, ನಾನು ಈ ದಿನ ಏನನ್ನೂ ಕೊಳ್ಳುವುದಿಲ್ಲ ಎಂದು ಖಡಾಖಂಡಿತವಾಗಿ ಬೇಗಂ ಹೇಳಿದರು. ಮುಖದಲ್ಲಿ ಮಾತ್ರ ಅದೇ ಮುಗುಳ್ನಗೆ. ಆದರೆ, ಅಂಗಡಿಯವರ ಮೊಗದಲ್ಲಿ ಕವಿದ ನಿರಾಶೆಯನ್ನು ಗುರ್ತಿಸಿದ ಬೇಗಂ- ನಿಮ್ಮ ಪ್ರೀತಿಗೆ ನಾನು ಋಣಿ. ನಿಮಗೆ ನಿರಾಶೆಯಾಗದಂತೆ ಕೆಲವನ್ನು ಖರೀದಿ ಮಾಡಲು ರಾಯಭಾರಿ ಸಿಬ್ಬಂದಿಗೆ ಸೂಚಿಸುತ್ತೇನೆ. ಅವರು ಆನಂತರ ಖರೀದಿಸುತ್ತಾರೆ ಎಂದರು.
ಬೇಗಂ ನಗುತ್ತಲೇ ಬರಿಗೈಯ್ಯಲ್ಲೇ ವಾಪಸ್ಸಾದರು !
-
Viral Video: ವಿದೇಶಿ ಛಾಯಾಗ್ರಾಹಕರ ಫೋಟೋಗ್ರಫಿ ಹುಚ್ಚುತನಕ್ಕೆ ಜೀವ ಕಳೆದುಕೊಂಡಿತೇ ಭಾರತದ ಮುದ್ದಾದ ಆನೆ, ಏನಿದು ಚರ್ಚೆ -
April 1 Horoscope: ಈ ರಾಶಿಯವರಿಗೆ ಹೊಸ ಕೆಲಸಗಳು ಸುಗಮ, ವೃತ್ತಿಯಲ್ಲಿ ಮೆಚ್ಚುಗೆ; ದಿನ ಭವಿಷ್ಯ -
ಬೆಂಗಳೂರು-ವಿಜಯಪುರ ಎಕ್ಸ್ಪ್ರೆಸ್ ರೈಲು ಸೇವೆ: ಸಂಚಾರ ಸಮಯ 10ಗಂಟೆ ಇಳಿಕೆಗೆ ಎಂಬಿ ಪಾಟೀಲ ಆಗ್ರಹ -
Karnataka weather : ರಾಜ್ಯದಲ್ಲಿಂದು ಹವಾಮಾನ ಹೇಗಿರಲಿದೆ? ಬೆಂಗಳೂರು ಸೇರಿ ಈ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ ಎಚ್ಚರಿಕೆ -
Good News: ಏಪ್ರಿಲ್ 2ನೇ ವಾರದಿಂದ ಹುಬ್ಬಳ್ಳಿ-ಹೈದರಾಬಾದ್ ಮತ್ತು ಬೆಂಗಳೂರಿಗೆ ವಿಮಾನ ಸೇವೆ: ಪ್ರಹ್ಲಾದ್ ಜೋಶಿ -
ವಂದೇ ಭಾರತ್ ರೈಲಿನ ಊಟ ಸೇವಿಸಿದ ಮಹಿಳೆಗೆ ತೀವ್ರ ಅಲರ್ಜಿ, 2 ವರ್ಷದ ಮಗನಿಗೆ ಅತಿಸಾರ: IRCTC ಹೇಳಿದ್ದೇನು? -
ಲಕ್ಷ ಲಕ್ಷ ಸಂಬಳದ ಗೂಗಲ್ ಕೆಲಸಕ್ಕೆ ರಾಜೀನಾಮೆ ನೀಡಿದ ಬೆಂಗಳೂರು ಟೆಕ್ಕಿ; ಕಾರಣ ಇಲ್ಲಿದೆ ನೋಡಿ -
Gold Rate: ಬೆಂಗಳೂರು ಸೇರಿ ಪ್ರಮುಖ ನಗರಗಳಲ್ಲಿ ಇಂದು ಚಿನ್ನ-ಬೆಳ್ಳಿ ಬೆಲೆ ಎಷ್ಟಿದೆ? -
Oracle: ಒರಾಕಲ್ ಸಂಸ್ಥೆಯಲ್ಲಿ ವೆಚ್ಚ ಕಡಿತದ ಭಾಗವಾಗಿ ಕೆಲಸ ಕಳೆದುಕೊಂಡ 12,000 ಜನ, 30,000 ಜನರಿಗೆ ಸಂಕಷ್ಟ -
KSRTC: ಏಪ್ರಿಲ್ 10ರವರೆಗೆ ವಿದ್ಯಾರ್ಥಿಗಳ ಬಸ್ಪಾಸ್ ಅವಧಿ ವಿಸ್ತರಣೆ -
ಏಪ್ರಿಲ್ ಮೊದಲ ವಾರ ಬ್ಯಾಂಕ್ ಬಂದ್: ಗ್ರಾಹಕರು ಮುಂಚಿತವಾಗಿ ಯೋಜನೆ ಮಾಡಬೇಕು -
ನಮ್ಮ ಮೆಟ್ರೋ ಪ್ರಯಾಣಿಕರಿಗೆ ನಿರಾಸೆ: ಮೇ ತಿಂಗಳಿನಲ್ಲಿ ಆರಂಭವಾಗಬೇಕಿದ್ದ ಪಿಂಕ್ ಲೈನ್ ಸಂಚಾರ ವಿಳಂಬ ಸಾಧ್ಯತೆ












Click it and Unblock the Notifications