ನಿತ್ಯ ಭವಿಷ್ಯ
*ಜಾನುಕೊಂಡ ಶಾಮಾ ಶಾಸ್ತ್ರೀ
ಮೇಷ : ವ್ಯಸ್ತ ಕೆಲಸಗಳು ತಲೆ ತಿನ್ನುತ್ತಿವೆ ಅಂತ ಸಿಕ್ಕಾ ಪಟ್ಟೆ ಕಿರಿಕಿರಿಮಾಡಿಕೊಳ್ಳಬೇಡಿ. ಹಣದ ವ್ಯವಹಾರದಲ್ಲಿ ಗೆಲುವು ಸಿಗಲಿದೆ. ಆದ್ದರಿಂದ ಸದ್ಯದಲ್ಲಿಯೇ ಸಂತಸದ ದಿನ ಬರಲಿದೆ.ವೃಷಭ : ಗೆಳೆಯರೊಡನೆ ಕಚ್ಚಾಡಿದರೆ ಎಲ್ಲವೂ ಸಲೀಸಾಗಿ ನಡೆಯುವುದಿಲ್ಲ ಮಾರಾಯರೇ. ಆದ್ದರಿಂದ ಮನೆಯವರ ಸಹಾಯದಿಂದಲಾದರೂ ಗೆಳೆಯರನ್ನು ಒಲಿಸಿಕೊಳ್ಳಿ. ಆಫೀಸಿನಲ್ಲಿ ಪ್ರೊಮೋಷನ್ ಸುದ್ದಿ ಏನಾದರೂ ಬಂದಿದ್ದರೇ ಅದು ನಿಮ್ಮದಾಗುವ ಸಾಧ್ಯತೆ ಇದೆ.
ಮಿಥುನ : ನಿಮ್ಮ ಹುಚ್ಚು ಮನಸ್ಸಿನಿಂದ ಮನೆಯವರ ದಿನವನ್ನು ಹಾಳುಮಾಡಬಾರದಲ್ವೇ ? ಕೆಟ್ಟದ್ದನ್ನು ಮರೆಯುವುದು ನಿಮಗೇನೂ ಕಷ್ಟವಾಗಲಿಕ್ಕಿಲ್ಲ ಎಂಬ ವಿಶ್ವಾಸ ಇರಲಿ.
ಕಟಕ : ವಿದ್ಯೆಗೆ ವಿಘ್ನ ಬಂದರೆ ವ್ಯವಹಾರ ಕ್ಷೇತ್ರದತ್ತ ಹೆಚ್ಚು ಗಮನ ಹರಿಸಬಹುದಲ್ಲ ? ಹೊಸ ಗೆಳೆಯರೊಂದಿಗೆ ಹೊಂದಿಕೊಳ್ಳಲು ಸ್ವಲ್ಪ ಸಮಯ ಬೇಕಾದೀತು. ಅಧ್ಯಾತ್ಮದತ್ತ ಇರುವ ಒಲವು, ಕೈಯಲ್ಲಿರುವ ಹಣ ಖಾಲಿ ಮಾಡಬಹುದು.
ಸಿಂಹ : ನಿಮ್ಮದು ಬಿಸಿನೆಸ್ ಲೈನಾ... ಹಾಗಾದರೆ ನೀವೇ ಲಕ್ಕಿ ಇವತ್ತು. ಮಾತು ಸುಂದರವಾಗಿದ್ದರೆ ಎಲ್ಲ ಆಫರ್ಗಳೂ ನಿಮ್ಮ ಟೇಬಲ್ಗೇ ಬಂದು ಬೀಳುತ್ತವೆ. ಕೌಟುಂಬಿಕ ಅಡೆತಡೆಗಳ ಬಗ್ಗೆ ತಲೆಕೆಡಿಸಿಕೊಳ್ಳಬೇಡಿ. ಅವೆಲ್ಲಾ ತಾತ್ಕಾಲಿಕ ಅಂತ ಗೊತ್ತಲ್ವ?
ಕನ್ಯಾ : ಮನೆ ಮಂದಿಯಾಂದಿಗೆ ಕಳೆದ ಸಂತೋಷದ ದಿನಗಳ ಬಗ್ಗೆ ಕನಸು ಕಾಣುತ್ತಲೇ ಇರುತ್ತೀರಿ. ಹೊಸ ಒಪ್ಪಂದಗಳು ಬಂದಲ್ಲಿ ಕೈ ಬಿಡಬೇಡಿ. ಆದರೆ ಕೂಲಂಕುಷವಾಗಿ ಪರಿಶೀಲಿಸಿ ಹ್ಞೂಂಗುಟ್ಟಬೇಕು.
ತುಲಾ : ಉನ್ನತ ವ್ಯಾಸಂಗದಲ್ಲಿ ಮತ್ತಷ್ಟು ಪ್ರಗತಿ ಕಾಣುತ್ತೀರಿ. ಏಕಾಗ್ರತೆ ಸಾಧಿಸಿದರೆ ನಿಮ್ಮ ಕೆಲಸಗಳು ಅರ್ಧ ಆದಂತೆಯೇ ಎಂಬುದು ನಿಮಗೆ ಗೊತ್ತಿದೆ ತಾನೇ ? ಅನಾರೋಗ್ಯದ ಸಮಸ್ಯೆ ಬಾರದಂತೆ ಎಚ್ಚರವಿರಲಿ.
ವೃಶ್ಚಿಕ : ಬಂಧುಗಳಿಂದ ನೋವಾಗಿದೆ ಅಂತ ಸುಮ್ಮನಿರುವುದೇ ? ಈ ಬಾರಿ ಉದಾರವಾಗಿ ಕ್ಷಮಿಸಿಬಿಡಿ. ಪ್ರಯಾಣ ಯೋಗವನ್ನು ಕೈಯಾರ ಮುಂದೂಡುತ್ತೀರಲ್ಲಾ. ಮನಸ್ಸು ತಿಳಿಯಾಗದೇ ?
ಧನಸ್ಸು : ಇವತ್ತೆಲ್ಲಾ ನಿಮ್ಮ ಸ್ನೇಹಿತರೊಟ್ಟಿಗೆ ಹರಟೆ ಹೊಡೆಯುವುದೇ ಆಗಿ ಹೋಗುತ್ತದೆ. ಲೋಕದ ಸುದ್ದಿಗಳ ನಡುವೆ ನಿಮ್ಮ ಉದ್ದೇಶಗಳನ್ನು ಮರೆಯಬೇಡಿ. ಪಿಕ್ನಿಕ್ ಯೋಜನೆಯೇನಾದರೂ ಇದ್ದರೆ, ಇದು ಸರಿಯಾದ ಸಮಯ.
ಮಕರ : ಮನೆ ಬದಲಿಸುವ ಯೋಚನೆಯಿದ್ದರೆ ಸದ್ಯಕ್ಕೆ ಅದು ಕಾರ್ಯರೂಪಕ್ಕೆ ಬರುವುದಿಲ್ಲ. ಎಷ್ಟೋ ದಿನಗಳಿಂದ ಪಕ್ಕಕ್ಕಿರಿಸಿದ ಕೆಲಸದ ಬಗ್ಗೆಯೂ ಸ್ವಲ್ಪ ಗಮನವಿರಲಿ.
ಕುಂಭ : ಮೂಡ್ ಹಾಳು ಮಾಡಿಕೊಂಡು ದಿನವನ್ನು ಶಪಿಸಬೇಡಿ. ವಸ್ತ್ರಾಭರಣ ಖರೀದಿ ಯೋಗವಿರುವುದರಿಂದ ಮನೆಯವರೊಂದಿಗಿನ ವಿರಸವನ್ನು ಬಿಟ್ಟು ಬಿಡಿ. ಲಾಭವಾಗಲಿದೆ.
ಮೀನ : ಅನಿರೀಕ್ಷಿತ ನೆಂಟರು ಬಂದರೆ ಸತ್ಕಾರ ಭಾಗ್ಯವನ್ನು ನೆನೆದು ಸಂತೋಷಪಡಿ. ಮತ್ತೊಂದು ಸುಳ್ಳು ಸೃಷ್ಟಿಸುವುದನ್ನು ನೋಡಿ ಸ್ನೇಹಿತರು ಬೆಪ್ಪಾಗುತ್ತಾರೆ. ಬಂಧುಗಳಿಂದ ಸಹಾಯವಿದೆ.
-
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO












Click it and Unblock the Notifications